ಪೊಲೀಸ್‌ ಇಲಾಖೆ ಪರಿಸರ ಪ್ರೇಮ

ಎಸ್ಪಿ ಕಚೇರಿ ಆವರಣದಲ್ಲಿವೆ ಬಗೆಬಗೆಯ ಔಷಧೀಯ ಸಸ್ಯ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ಯಕ್ಕೆ ಮೆಚ್ಚುಗೆ

Team Udayavani, Dec 8, 2019, 4:11 PM IST

8-December-18

ಪ್ರಹ್ಲಾದಗೌಡ ಗೊಲ್ಲಗೌಡರ
ಗದಗ:
ನಗರದ ಜಿಲ್ಲಾ ಪೊಲೀಸ್‌ ಕಚೇರಿಗೆ ಪ್ರವೇಶಿಸುತ್ತಿದಂತೆ ಔಷಧಿ ಸಸ್ಯಗಳ ಪರಿಮಳ ಘಮ ಘಮಿಸುತ್ತದೆ. ಅರೇ ಇದೇನಿದು ಎಂದು ಕುತೂಹಲದಿಂದ ಸ್ವಲ್ಪ ಅತ್ತ ಸಾಗಿ ನೋಡಿದರೆ ವಿವಿಧ ಬಗೆಯ ಗಿಡಮೂಲಿಕೆಗಳ ಸಸ್ಯಗಳು ನಮ್ಮನ್ನು ಸ್ವಾಗತಿಸುತ್ತವೆ!

ಹೌದು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಆಸಕ್ತಿ, ಅಭಿಲಾಷೆಯಂತೆ ಇಲ್ಲಿ ಸಸ್ಯ ವನ ಸೃಷ್ಟಿಯಾಗಿದೆ. ಕಚೇರಿ ಆವರಣ ಪರಿಸರ ಸ್ನೇಹಿಯಾಗಿ ರೂಪಗೊಂಡಿದೆ. ವಿವಿಧ ಬಗೆಯ ಗಿಡ-ಮರಗಳು ತುಂಬಿ ಹಸಿರಿನಿಂದ ಕಂಗೊಳಿಸುತ್ತಿದೆ. ಎಲ್ಲಕ್ಕಿಂತಲೂ ಹೆಚ್ಚು ಗಮನ ಸೆಳೆಯುವುದು ಇಲ್ಲಿನ ಔಷಧಿ ಸಸ್ಯಗಳು.

ಕಪ್ಪತಗುಡ್ಡ ಶ್ರೇಣಿಯ ಔಷಧಿ ಸಸ್ಯಗಳನ್ನು ಇಲ್ಲಿ ಕಾಣಬಹುದು. ಜನರಿಗೆ ಔಷಧಿ ಸಸ್ಯಗಳ ಮಾಹಿತಿಗಾಗಿ ಪ್ರತಿ ಸಸ್ಯದ ಎದುರು ಅವುಗಳ ಹೆಸರುಳ್ಳ ಫಲಕ ಅಳವಡಿಸಲಾಗದೆ. ಜತೆಗೆ ಫಲಕದಲ್ಲಿ ವೈಜ್ಞಾನಿಕ ಹೆಸರನ್ನೂ ಗುರುತಿಸಲಾಗಿದೆ. ಎಸ್ಪಿ ಶ್ರೀನಾಥ ಜೋಶಿ ಅವರ ಸಲಹೆಯಂತೆ ಕಳೆದ ಐದು ತಿಂಗಳಿಂದ ಆವರಣದಲ್ಲಿ ಔಷಧಿ ಸಸ್ಯ ಬೆಳೆಯಲಾಗಿದೆ. ಪರಿಸರದ ಬಗ್ಗೆ ಸಾಕಷ್ಟು ಕಾಳಜಿ ಹಾಗೂ ಜ್ಞಾನ ಹೊಂದಿರುವ ಎಸ್ಪಿ ಶ್ರೀನಾಥ ಜೋಶಿ ಅವರು ಸ್ವತಃ ಸಸ್ಯಗಳ ಬಗ್ಗೆ ನಿಗಾವಹಿಸಿದ್ದಾರೆ. ಬಿಡುವಿನ ವೇಳೆ ಸಸ್ಯೋದ್ಯಾನಕ್ಕೆ ತೆರಳಿ ಗಿಡಗಳ ಆರೈಕೆ ಕುರಿತು ಮಾಹಿತಿ-ಸಲಹೆ ನೀಡುತ್ತಾರೆ.

ಸಸಿಗಳ ಮೇಲ್ವಿಚಾರಣೆಗೆ ಇಬ್ಬರು ಸಿಬ್ಬಂದಿ ನೇಮಿಸಲಾಗಿದ್ದು, ಅವರು ಸಸ್ಯ ಪೋಷಣೆಯಲ್ಲಿ ತೊಡಗಿದ್ದಾರೆ. ಕಪ್ಪತಗುಡ್ಡ ಹಾಗೂ ಬೇರೆ ಬೇರೆ ಪ್ರದೇಶಗಳಿಂದ ಔಷಧಿ ಸಸ್ಯಗಳನ್ನು ತಂದು ಇಲ್ಲಿ ನೆಡಲಾಗಿದೆ. ವಿವಿಧ ಬಗೆಯ ಗಿಡಮೂಲಿಕೆಗಳು ಒಂದಡೆ ಇರುವುದರಿಂದ ಇಲ್ಲಿ ಸುಗಂಧದ ಪರಿಮಳ ಸದಾ ಘಮ ಘಮಿಸುತ್ತದೆ. ಸುಮಾರು 62 ಬಗೆಯ ಔಷಧಿ ಸಸ್ಯಗಳನ್ನು ಇಲ್ಲಿ ಬೆಳೆಸಲಾಗಿದೆ.

ಅಂದಾಜು ನಾಲ್ಕು ಎಕರೆ ಪ್ರದೇಶ ವ್ಯಾಪ್ತಿಯ ಕಚೇರಿ ಸ್ಥಳದಲ್ಲಿ ಔಷಧಿ ಸಸ್ಯ ಸೇರಿದಂತೆ ಸ್ಥಳೀಯವಾಗಿ ಸಿಗುವ 150ಕ್ಕೂ ಹೆಚ್ಚು ವಿವಿಧ ಗಿಡ ಮರಗಳನ್ನೂ ಬೆಳೆಸಲಾಗಿದೆ. ಎರಡು ಕೊಳವೆಬಾವಿಯಿಂದ ನೀರುಣಿಸಲಾಗುತ್ತಿದೆ. ಸ್ಥಳೀಯವಾಗಿ ಬೆಳೆಯುವ ಹುಲ್ಲನ್ನೇ ಆವರಣದಲ್ಲಿ ಬೆಳೆಸಲಾಗಿದೆ.

ಪಕ್ಕದ ಕಪ್ಪತಗುಡ್ಡದ ಔಷಧಿ ಸಸ್ಯಗಳಿಗೆ ಖ್ಯಾತಿ ಪಡೆದಿದೆ. ಅಲ್ಲಿ ಸಿಗುವ ಗಿಡಮೂಲಿಕೆಗಳನ್ನು ಇಲ್ಲಿಯೂ ಬೆಳೆಸಬಹುದು ಎಂಬ ಸದುದ್ದೇಶದಿಂದ ಕಳೆದ ಐದು ತಿಂಗಳಿಂದ ಕಚೇರಿ ಆವರಣದಲ್ಲಿ ವಿವಿಧ ಬಗೆಯ ಔಷಧಿ ಸಸಿ ಬೆಳೆಸಿದ್ದೇವೆ.

ಔಷಧಿ ಸಸ್ಯಗಳು ಎಲ್ಲೆಂದರಲ್ಲಿ ಸಿಗುವುದು ತುಂಬಾ ವಿರಳ. ಅವುಗಳ ಪೋಷಣೆ ಜತೆಗೆ ಸಂರಕ್ಷಿಸುವ ಉದ್ದೇಶ ನಮ್ಮದಾಗಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ.

ಟಾಪ್ ನ್ಯೂಸ್

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.