ಮಾಗಡಿ ಕೆರೆಯಲ್ಲಿ ವಿದೇಶಿ ಪಕ್ಷಿಗಳ ಕಲರವ!


Team Udayavani, Dec 8, 2019, 10:41 AM IST

8-December-1

„ಪ್ರಹ್ಲಾದಗೌಡ ಗೊಲ್ಲಗೌಡರ
ಗದಗ:
ಉತ್ತರ ಕರ್ನಾಟಕದ ರಂಗನತಿಟ್ಟು ಎಂದು ಖ್ಯಾತಿ ಪಡೆದಿರುವ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ವಲಸೆ ಪಕ್ಷಿಗಳ ಆಗಮನವಾಗಿದೆ. ದೇಶ-ವಿದೇಶಿ ಪಕ್ಷಿಗಳು ಆಹಾರ-ನೀರು ಅರಿಸಿ ಬರುವುದು ಈ ಕೆರೆಯ ವೈಶಿಷ್ಟ್ಯತೆ. ಮಳೆಗಾಲ ಕಳೆದು ಚಳಿಗಾಲ ಆರಂಭವಾಗುತ್ತಿದಂತೆ ಮಾಗಡಿ ಕೆರೆಯಲ್ಲಿ ವಲಸೆ ಪಕ್ಷಿಗಳ ಕಲರವ ಕಾಣಸಿಗುತ್ತೆ. ವರ್ಷಧಾರೆ ಆರ್ಭಟದಿಂದ ಕೆರೆ ಮೈದುಂಬಿದೆ.

ಪಕ್ಷಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ಪಕ್ಷಿ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ. ವಿವಿಧ ಜಾತಿಯ ಪಕ್ಷಿಗಳು ಕೆರೆ ಅಂಗಳದಲ್ಲಿ ಸ್ವತ್ಛಂದವಾಗಿ ವಿಹರಿಸುವ ಪರಿ ಮನಸ್ಸಿಗೆ ಆಹ್ಲಾದವುಂಟು ಮಾಡುತ್ತದೆ. 130ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. 5ರಿಂದ 6 ವಿದೇಶಿ ಜಾತಿಯ ಪಕ್ಷಿಗಳನ್ನು ಹೊರತುಪಡಿಸಿದರೆ ದೇಶಿ ಪಕ್ಷಿಗಳದ್ದೇ ಇಲ್ಲಿ ರಾಜ್ಯಭಾರ. ದೇಶದ ವಿವಿಧ ಮೂಲೆ ಮೂಲೆಗಳಿಂದ ಬರುವ ಪಕ್ಷಿಗಳು ತನ್ನ ಮೈಮಾಟ, ವೈಯಾರದಿಂದಲೇ ಜನರನ್ನು ಆಕರ್ಷಿಸುತ್ತವೆ.

ಗುಂಪು ಗುಂಪಾಗಿ ಬಂದು ನೀರಿಗಿಳಿಯುವ ಘಳಿಗೆ ಎಂತವರನ್ನೂ ಕ್ಷಣಕಾಲ ಮಂತ್ರಮುಗ್ಧರನ್ನಾಗಿ ಮಾಡುತ್ತವೆ. ಮಾಗಡಿ ಕೆರೆ ಸುಮಾರು 134 ಎಕರೆ 15 ಗುಂಟೆ ವಿಸ್ತಾರದಲ್ಲಿದೆ. ಎರಡು ಗ್ರಾಮಗಳಿಗೆ ಈ ಕೆರೆ ಸೇರಲ್ಪಟ್ಟಿದ್ದು, 98 ಎಕರೆ 3 ಗುಂಟೆ ಮಾಗಡಿಗೆ ಹಾಗೂ 69 ಎಕರೆ 36 ಗುಂಟೆ ಹೊಳಲಾಪುರ ಗ್ರಾಮದ ವ್ಯಾಪ್ತಿಗೆ ಒಳಪಡುತ್ತದೆ. ಹೂಳು ತೆಗೆದಿರುವುದರಿಂದ ಕೆರೆ ಮಧ್ಯಭಾಗದಲ್ಲಿ ಅಂದಾಜು 18 ಅಡಿ ಆಳದಲ್ಲಿ ನೀರು ಶೇಖರಣೆಗೊಂಡಿದೆ. ಹೀಗಾಗಿ ಪಕ್ಷಿಗಳಿಗೆ ಈ ಬಾರಿ ನೀರಿನ ಕೊರತೆ ಉದ್ಭವಿಸುವುದಿಲ್ಲ. ಮೂರು ವರ್ಷಗಳ ಹಿಂದೆ ಕೆರೆ ಸಂಪೂರ್ಣ ಬತ್ತಿ ಪಕ್ಷಿ ವಲಸೆಗೆ ಅವಕಾಶ ಸಿಕ್ಕಿರಲಿಲ್ಲ.

ಸಾಮಾನ್ಯವಾಗಿ ಮಾಗಡಿ ಕೆರೆಗೆ ಅಕ್ಟೋಬರ್‌ ಮಾಹೆ ಕೊನೆಯಲ್ಲಿ ಹಕ್ಕಿಗಳು ವಲಸೆ ಬರಲು ಪ್ರಾರಂಭಿಸುತ್ತವೆ. ಈ ಪ್ರದೇಶದಲ್ಲಿ ಸುಮಾರು ನಾಲ್ಕೈದು ತಿಂಗಳ ಕಾಲ ಉಳಿದು ತದನಂತರ ಮರಳಿ ಗೂಡಿನತ್ತ ಪ್ರಯಾಣಿಸುತ್ತವೆ. ಮಾಗಡಿ ಕೆರೆಯಲ್ಲಿ ಸಾಮಾನ್ಯವಾಗಿ 16 ಪ್ರಭೇದದ ಹಕ್ಕಿಗಳು ಹೆಚ್ಚು ಕಂಡು ಬರುತ್ತವೆ. ಬ್ರಾಹ್ಮಿನಿ ಡಕ್‌ ಎಂಬ ಹಕ್ಕಿ ಶ್ರೀಲಂಕಾ, ಕಾಶ್ಮೀರದಿಂದ ಆಗಮಿಸಿದರೆ, ನಾರ್ದನ್‌ ಶೆಲ್ವರ್‌, ಗ್ರಿವನ್‌ ಟೇಲ್‌, ಹೋಮ್‌ ಡಕ್‌ ಪಕ್ಷಿಗಳು ಆಸ್ಟ್ರೇಲಿಯಾ, ಇಂಡೋನೆಷ್ಯಾ, ಫಿಲಿಫೈನ್ಸ್‌ ದೇಶಗಳಿಂದ ಸುಮಾರು 30 ಸಾವಿರ ಕಿಮೀ ದೂರದಿಂದ ಇಲ್ಲಿಗೆ ಬರುತ್ತವೆ. ಮಾಗಡಿ ಕೆರೆಯ ವಿಶೇಷ ಪಕ್ಷಿ ಬಾರ್‌ ಹೆಡೆಡ್‌ ಗೊಸ್‌. ಇದರ ಮೂಲ ಮಂಗೋಲಿಯಾ, ಕಜಗಿಸ್ತಾನ್‌ ಎಂದು ಗುರುತಿಸಲಾಗಿದೆ.

ವಿಶ್ವದ ಅತಿ ಎತ್ತರದಲ್ಲಿ ಹಾರುವ ಪಕ್ಷಿಗಳಲ್ಲಿ ಇದೂ ಒಂದು. ಸುಮಾರು 23 ಸಾವಿರ ಅಡಿ ಎತ್ತರದಲ್ಲಿ ಬಾರ್‌ ಹೆಡೆಡ್‌ ತನ್ನ ಹಾರಾಟ ನಡೆಸುತ್ತದೆ. ಟಬೆಟ್‌ ಮಾರ್ಗವಾಗಿ ಭಾರತ ಪ್ರವೇಶಿಸುವ ಮೊದಲು ಮೌಂಟ್‌ ಎವರೆಸ್ಟ್‌ ಪರ್ವತ ದಾಟಿ ಬರುತ್ತದೆ. ಹಿಮಾಲಯ ಗಿರಿಶಿಖರ ದಾಟಲು ಕೇವಲ ಏಳು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ರಾಜಸ್ಥಾನ, ಗುಜರಾತ ರಾಜ್ಯಗಳಲ್ಲಿ ಬಾರ್‌ ಹೆಡೆಡ್‌ಗೆ ವಿಶೇಷ ಗೌರವ ಮನ್ನಣೆಯಿದೆ. ಮಾಗಡಿ ಕೆರೆಗೆ ದೇಶ-ವಿದೇಶ ಪಕ್ಷಿ ಪ್ರಿಯರು ಆಗಮಿಸುವುದು ಹೆಮ್ಮೆಯ ವಿಷಯ.

ಸ್ಥಳೀಯ ಯುವಕರು ಇಲ್ಲಿನ ಪಕ್ಷಿಗಳ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಬಹುದು. ಇದು ಪ್ರವಾಸಿ ತಾಣದ ಅಭಿವೃದ್ಧಿಗೆ ಸಹಕಾರಿ ಆಗುವ ಜತೆಗೆ ಉದ್ಯೋಗ ಸೃಷ್ಟಿ ಮಾಡುತ್ತದೆ ಎನ್ನುತ್ತಾರೆ ಧಾರವಾಡದ ಪಕ್ಷಿ ತಜ್ಞರಾದ ಹೇಮಂತ ಬ್ಯಾಟರಾಯ.

ಟಾಪ್ ನ್ಯೂಸ್

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೇವು?: ಖಂಡ್ರೆ

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.