ವಚನ ಸಾಹಿತ್ಯ ವಿಚಾರ ಕ್ರಾಂತಿಗೆ ಅಡಿಪಾಯ

ಸಾಮಾಜಿಕ ಸಮಾನತೆ ಸಾಧಿಸಿದ ಸಮಾಜ ಸುಧಾರಕ, ಕಾಯಕ ನಿಷ್ಠೆಯ ಪ್ರತಿಪಾದಕ ಬಸವಣ್ಣ

Team Udayavani, Aug 26, 2019, 4:13 PM IST

26-Agust-35

ಗುರುಮಠಕಲ್: ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಬಸವ ಯುಗ ಒಂದು ಮಹತ್ತರ ಘಟ್ಟ. ಸಮಷ್ಟಿ ಜಾಗೃತಿಗಾಗಿ ಈ ಕಾಲದ ಶರಣರು ಕನ್ನಡ ಭಾಷೆ ಬಳಸಿಕೊಂಡರು. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಬೀರಿದ ಪ್ರಭಾವ ಆ ಕಾಲದ ಯುಗ ಧರ್ಮವನ್ನು ರೂಪಿಸಿತು. ವಿಚಾರ ಕ್ರಾಂತಿಗೆ ಅಡಿಪಾಯ ಹಾಕಿತು. ವಚನವೆಂಬ ವಿಶಿಷ್ಟ ಪ್ರಕಾರವನ್ನು ಶರಣರು ಬಹು ಶಕ್ತಿಯುತವಾಗಿ ಬೆಳೆಸಿದರು. ಇಂತಹ ಶರಣ ಪರಂಪರೆಯಲ್ಲಿ ಪ್ರಮುಖರು ಬಸವಣ್ಣ ಎಂದು ಉಪನ್ಯಾಸಕ ಗುಂಡೇರಾವ ಮುಡುಬಿ ಹೇಳಿದರು.

ಗುರುಮಠಕಲ್ ಪಟ್ಟಣದ ಖಾಸಾ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ ಅವರು, ಬಸವಣ್ಣ ಅನುಭಾವಿ, ಧಾರ್ಮಿಕ ಮುಖಂಡ, ಕ್ರಾಂತಿಕಾರಿ, ಕಾಯಕ ನಿಷ್ಠೆಯ ಪ್ರತಿಪಾದಕ, ಸಾಮಾಜಿಕ ಸಮಾನತೆಯನ್ನು ಸಾಧಿಸಿದ ಸಮಾಜ ಸುಧಾರಕ ಎಂದು ಬಣ್ಣಿಸುತ್ತಾರೆ ಎಂದರು.

ಅಸ್ಪೃಶ್ಯತೆ ನಿವಾರಣೆ ಹಾದಿಯಲ್ಲಿ ಪ್ರಜಾ ಪ್ರಭುತ್ವವಾದಿ ಸರ್ಕಾರಗಳು ಸಾಗುವುದಕ್ಕೆ ಬಹಳ ಮುಂಚೆಯೇ ರಾಜಪ್ರಭುತ್ವದಲ್ಲಿ ಅವರದ್ದು, ಜಾತಿ ಭೇದ ನಿರಸನ ಶಸ್ತ್ರ. ಇಲ್ಲಿ ಅವರಿಗೆ ಶಸ್ತ ್ರವಾದದ್ದು ವಚನಗಳು. ಸಮಗಾರ ಹರಳಯ್ಯ ಒಮ್ಮೆ ಶರಣು ಎಂದರೆ ಬಸವಣ್ಣ ‘ಶರಣು ಶರಣು’ ಎಂದು ನುಡಿದರು. ಬಸವ‌ಣ್ಣನವರ ಅನುಭವ ಮಂಟಪದ ಪ್ರಯೋಗದ ಫಲವಾಗಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವಾತಂತ್ರ್ಯ ಏಕಕಾಲಕ್ಕೆ ಬಹು ಸಂಖ್ಯೆಯ ಜನರಿಗೆ ನೀಡಿದವರಾಗಿದ್ದಾರೆ ಎಂದು ಹೇಳಿದರು.

ಭಾರತೀಯ ಸಾಂಪ್ರದಾಯಿಕ ಪರಂಪರೆಗೆ, ಅದರ ರೀತಿನೀತಿಗಳಿಗೆ ವಿರುದ್ಧವಾಗಿ ನಿಂತವರು ಮತ್ತು ನಡೆದವರು ಬಸವಣ್ಣ. ಅವರು ಬಾಳಿ ಬದುಕಿದ ಕಾಲ 12ನೇ ಶತಮಾನ. ಈ ಕಾಲವನ್ನು ಚಾರಿತ್ರಿಕ ಘಟ್ಟವಾಗಿಸಿದ್ದು ಶರಣ ಚಳವಳಿ. ಈ ಚಳವಳಿಯಲ್ಲಿ ಮೂಡಿ ಬಂದ ವಚನಗಳು ಕನ್ನಡ ಭಾಷೆಗೆ ನೀಡಿದ ಶಕ್ತಿ ಅಪೂರ್ವವಾದುದು. ಅವುಗಳ ಓದು, ಮರು ಓದು ಹೊಸ ಹೊಸ ಅರ್ಥಗಳನ್ನು, ವಿಚಾರಧಾರೆಗಳನ್ನು ಮುಖಾಮುಖೀಯಾಗಿಸುತ್ತದೆ ಎಂದರು.

ಗುರುತಿಸುವಿಕೆಗೆ ಸಂಬಂಧಿಸಿದ ಈ ವಚನ ಆಧುನಿಕ ಕಾಲಘಟ್ಟದಲ್ಲಿ ಪ್ರಮುಖ ರಾಜಕೀಯ ನಾಯಕರ ಭಾಷಣದಲ್ಲಿ ಪ್ರಸ್ತಾಪಿಸಲ್ಪಟ್ಟಿತ್ತು ಎಂದರೆ ಅದು ಆ ವಚನದ ಶಕ್ತಿ ಮತ್ತು ಸಾರ್ವಕಾಲಿಕ ಪ್ರಸ್ತುತತೆಗೆ ಒಂದು ಸಾಕ್ಷಿ. ಭಕ್ತಿ ಮತ್ತು ಕಾಯಕವನ್ನು ಮುಖ್ಯವಾಹಿನಿಗೆ ತಂದರು ಬಸವಣ್ಣ ಎಂದು ತಿಳಿಸಿದರು. ಬಸವಣ್ಣನವರ ವಚನಗಳ ಅಂಕಿತ ‘ಕೂಡಲಸಂಗಮದೇವ’ ಈ ವಚನಗಳು ಜೀವನದರ್ಶನವಾಗಿದ್ದವೇ ಹೊರತು ಸಾಹಿತ್ಯಕೃತಿ ಗಳಾಗಬೇಕು ಎಂದು ರಚಿತವಾದಂತಹವಲ್ಲ. ಈ ವಚನಗಳಿಗೆ ಅವರು ಬಳಸಿದ ಭಾಷೆ ಕನ್ನಡ. ನುಡಿದಂತೆ ನಡೆ ಎಂದರು. ಸಮಾನ ಅವಕಾಶದ ಆದರ್ಶ ಸಮಾಜ ರಚನೆಗೆ ಮುಂದಾದರು. ಅವರು ನಿರ್ದೇಶಿಸಿದ ಕಾಯಕ ಒಂದು ಮಟ್ಟದಲ್ಲಿ ಉದ್ಯೋಗದಲ್ಲಿ ಮೇಲು ಕೀಳಿಲ್ಲ ಎಂಬುದನ್ನು ಸಾರಲು ಶಕ್ತವಾಯಿತು ಎಂದರು.

ಖಾಸಾ ಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ನಾಗುರಾವ ನಾಮೋಜಿ ನಾರಾಯಣಪೇಟ್, ರತನ ಪಾಂಡುರಂಗರೆಡ್ಡಿ, ಸಿದ್ರಾಮಪ್ಪ ಜಾಜಾಪೂರ, ಡಾ| ಸಾಯಿಬಾಬಾ, ವಿಶ್ವನಾಥ ಮಾಟೂರ, ಸತ್ಯನಾರಾಯಣ ಎಲೆØೕರಿ, ಬೂಸಯ್ಯ ಸ್ವಾಮೀಜಿ, ನಂದೂ ನಾಮೋಜಿ, ಪ್ರಭಾಕರ ವರ್ಧನ, ಮನೋಹರಗೌಡ, ಸರಾಫ್‌ ಕೃಷ್ಣ, ಪವಾಡಿ ಮಲ್ಲಿಕಾರ್ಜುನ, ಸತ್ಯನಾರಾಯಣ, ಸೂರ್ಯಕಾಂತ ಇದ್ದರು.

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.