ವರುಣನ ಅಬ್ಬರಕ್ಕೆ ನಲುಗಿದ ಜನ


Team Udayavani, Oct 23, 2019, 1:05 PM IST

23-October-10

ಹರಪನಹಳ್ಳಿ: ತಾಲೂಕಿನಾದ್ಯಂತ ಸೋಮವಾರ ಸಂಜೆ ಮತ್ತು ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಭತ್ತ, ಈರುಳ್ಳಿ ಸೇರಿದಂತೆ ನೂರಾರು ಎಕರೆ ಬೆಳೆ ಜಲಾವೃತಗೊಂಡಿವೆ.

ಸಿಡಿಲು ಬಡಿದು 1 ಆಕಳು, 2 ಕುರಿಗಳು ಬಲಿಯಾಗಿವೆ. ಹಲವು ಕೆರೆಗಳು ಕೋಡಿ ಬಿದ್ದ ಹರಿಯುತ್ತಿದ್ದು, 200ಕ್ಕೂ ಹೆಚ್ಚು ಮನೆಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕೊಚ್ಚಿ ಹೋದ ಬೆಳೆ: ಯಡಿಹಳ್ಳಿ ಗ್ರಾಮದಲ್ಲಿ 2, ದ್ಯಾಪನಾಯಕನಹಳ್ಳಿ-2, ಬೆಣ್ಣೆಹಳ್ಳಿ ಗ್ರಾಮದ 4 ಮನೆಗಳಿಗೆ ನೀರು ನುಗ್ಗಿ ಆಹಾರ ಧಾನ್ಯಗಳೆಲ್ಲಾ ನೀರು ಪಾಲಾಗಿವೆ. ಚಿಗಟೇರಿ ಹೋಬಳಿಯಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆ ನೀರು ಪಾಲಾಗಿದೆ. ಲೋಕೇಶ್ವರ ಗ್ರಾಮದಲ್ಲಿ ಈಶಪ್ಪ ಎಂಬುವವರ ಈರುಳ್ಳಿ ಬೆಳೆ ಹಗರಿ ಹಳ್ಳದ ನೀರಿಗೆ ಕೊಚ್ಚಿ ಹೋಗಿದೆ. ತೆಲಿಗಿ, ಚಿಗಟೇರಿ, ಹರಪನಹಳ್ಳಿ ಕಸಬಾ ಹೋಬಳಿಯಲ್ಲಿ ಈರುಳ್ಳಿ-66 ಹೆಕ್ಟೇರ್‌ ಮತ್ತು ಟಮೋಟೊ-20 ಹೆಕ್ಟೇರ್‌ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಧರೆಗುರುಳಿದ ಮನೆಗಳು: ಉಚ್ಚಂಗಿದುರ್ಗ-2, ತೌವಡೂರು-5, ಚಟ್ನಿಹಳ್ಳಿ-3, ಮಾದಿಹಳ್ಳಿ-2, ನೀಲಗುಂದ-13, ಬಾಗಳಿ-2, ಶೃಂಗಾರದೋಟ-2, ಅರೇಬಸಾಪುರ-5, ಕೂಲಹಳ್ಳಿ-5, ಮಾಡ್ಲಿಗೇರಿ-12, ಹಿರೇಮೇಗಳಗೆರೆ-2, ಪುಣಬಗಟ್ಟ-1, ಸಾಸ್ವಿಹಳ್ಳಿ-4, ನಂದಿಬೇವೂರು-6, ಮತ್ತಿಹಳ್ಳಿ-30, ಬೆಣ್ಣೆಹಳ್ಳಿ-40, ಕಣವಿಹಳ್ಳಿ-2, ಕೊಂಗನಹೊಸೂರು-2, ನಂದಿಬೇವೂರು ತಾಂಡ-3, ಮೈದೂರು-23, ಚಿಗಟೇರಿ-12, ಮುತ್ತಿಗಿ-2, ನಿಲುವಂಜಿ-2, ಕುಮಾರನಹಳ್ಳಿ-5, ಬಸಾಪುರ ತಾಂಡಾ-1, ಹಿಕ್ಕೀಂಗೆರೆ-3, ಕನಕನಬಸಾಪುರ-2, ದ್ಯಾಪನಾಯಕನಹಳ್ಳಿ-2, ಯಡಿಹಳ್ಳಿ-6, ಬಾಪೂಜಿನಗರ-4, ಹರಪನಹಳ್ಳಿ ಕಸಾಬಾ-6, ತೆಲಿಗಿ-16, ಹಳ್ಳಿಕೆರೆ-5, ಸಿಂಗ್ರಿಹಳ್ಳಿ-1 ಸೇರಿ ಒಟ್ಟು 248ಕ್ಕೂ ಮನೆಗಳು ಭಾಗಶಃ ಹಾನಿಯಾಗಿವೆ.

ರಸ್ತೆ ಸಂಪರ್ಕ ಕಡಿತ: ಹುಲಿಕಟ್ಟಿ, ಬೆಂಡಿಗೇರಿ ಸಣ್ಣತಾಂಡಾ, ಹಗರಿಹಳ್ಳ, ಅಲಗಿಲವಾಡ ಸೇರಿದಂತೆ ಅನೇಕ ಕೆರೆಗಳು ಕೋಡಿ ಬಿದ್ದು ಮೈದುಂಬಿ ಹರಿಯುತ್ತಿವೆ. ಕಣವಿ ಗ್ರಾಮದಿಂದ ಹಲುವಾಗಲು, ಇಟ್ಟಿಗುಡಿ ಗ್ರಾಮದಿಂದ ಕುಂಚೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್‌ ಆಗಿದೆ. ಹಗರಿಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಮತ್ತಿಹಳ್ಳಿ, ಆಲಹಳ್ಳಿ, ಪುಣ್ಯನಗರ ರಸ್ತೆ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಪೋತಲಕಟ್ಟೆ ಗ್ರಾಮದಿಂದ ಹಿರೇಮೆಗಳಗೆರೆ ತಲುಪಿಸುವ ಸೇತುವೆ ಮುಳುಗಡೆಯಾಗಿದ್ದರಿಂದ ಹೊಲ, ಗದ್ದೆಗಳಿಗೆ ತೆರಳುವ ರೈತರು ಪರದಾಡುತ್ತಿದ್ದರು. ಅರೇಬಸಾಪುರ-ಪುಟಗನಾಳ್‌
ರಸ್ತೆಯು ಸಂಪೂರ್ಣವಾಗಿ ಜಾಲಾವೃತವಾಗಿದ್ದು, ವಾಹನ ಸವಾರರು ಸಮೀಪದ ರಸ್ತೆಯನ್ನು ಬಿಟ್ಟು, 10ಕಿಮೀ ದೂರದ ರಸ್ತೆಯಲ್ಲಿ ಸಾಗುವಂತ ಅನಿವಾರ್ಯತೆ ಎದುರಿಸಿದರು.

ಹಿರೆಮೇಗಳಗೇರೆ, ವಡ್ಡಿನಹಳ್ಳಿ, ಚಿಕ್ಕಮೇಗಳಗೆರೆ, ಅರೆಬಸಾಪುರ, ಶ್ರೀಕಂಠಪುರ, ಜಂಬುಲಿಂಗನಹಳ್ಳಿ, ಮಳೆಯಿಂದ ಸುಮಾರು 400 ಹೆಕ್ಟೇರ್‌ ಕಾಟವು ಹಂತದಲ್ಲಿದ್ದ ಭತ್ತದ ಬೆಳೆ ಹಾನಿಯಾಗಿದೆ. ಗೋಕಟ್ಟೆ, ಚೆಕ್‌ ಡ್ಯಾಂಗಳು, ಕೃಷಿ ಹೊಂಡಗಳು ಭರ್ತಿಯಾಗಿದ್ದು, ಭದ್ರ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಟ್ಟ ಹಿರೇಮೆಗಳಗೆರೆ ಕೆರೆಗೆ ಕಾಲುವೆ ಮೂಲಕ ನೀರು ಹರಿದುಬರುತ್ತಿದೆ. ಕೆರೆಯ ಗೇಟ್‌ ಮೂಲಕ ನೀರನ್ನು ಹೊರಕ್ಕೆ ಬಿಡಲಾಗಿದೆ. ಕೆರೆಯ ಕೋಡಿ ಬಿದ್ದು ನೀರು ಉಕ್ಕಿ ಹರಿದಿವೆ. ಕೆರೆ ದಡದಲ್ಲಿ ಬಳಿ ಸೊಗಸಾಗಿ ಬೆಳೆದು ಕಟಾವಿನ ಹಂತದಲ್ಲಿದ್ದ ಭತ್ತದ ಬೆಳೆ ನೆಲಕಚ್ಚಿವೆ. ನಿರಂತರ ಹೊರ ಹರಿವು ಇರುವುದರಿಂದ ಕೆಲವೆಡೆ ಜಲಾವೃತವಾಗಿ ಭತ್ತದ ಬೆಳೆ ಕಣ್ಮರೆಯಾಗಿ ಕರೆಯ ಹಾಗೆ ಗೋಚರಿಸುತ್ತಿದೆ.

ಉಚ್ಚಂಗಿದುರ್ಗ ಗ್ರಾಮದ ಹೊಲಗಳಲ್ಲಿ ಸಂಗ್ರಹಿಸಲಾಗಿದ್ದ ಜೋಳದ ಬಣಿವೆಗೆ ನೀರು ನುಗ್ಗಿ ಹಾನಿಯಾಗಿದೆ. ಈಚೆಗೆ ಜೋಳ ಕೊಯ್ಲು ಮಾಡಿ ರಾಶಿ ಮಾಡಲಾಗಿತ್ತು. ರಭಸವಾಗಿ ಸುರಿದ ಮಳೆ ನೀರು ರಾಶಿಗೆ ನುಗ್ಗಿದ್ದರಿಂದ ಕೈ ಸೇರಿದ್ದ ಜೋಳ ಬಾಯಿಗೆ ಬರದಂತೆ ಮಳೆಯ ಪಾಲಾಗಿದೆ. ಹರಪನಹಳ್ಳಿ ಪಟ್ಟಣದ ವಿವಿಧ ಬಡಾವಣೆಗಳ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿತ್ತು. ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರ ಬಳಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿ ಅನುಕೂಲ ಮಾಡಿಕೊಟ್ಟರು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.