ಧರ್ಮೋತ್ಥಾನಕ್ಕೆ ಪೇಜಾವರ ಶ್ರೀಗಳ ಕೊಡುಗೆ ಅವಿಸ್ಮರಣೀಯ
ಪೇಜಾವರ ಶ್ರೀಗಳಿಗೆ ಮಧ್ವ ಮಠದೊಂದಿಗೆ ಅವಿನಾಭಾವ ಸಂಬಂಧ ಸ್ಮರಿಸಿದ ವಿಪ್ರ ಸಮಾಜ
Team Udayavani, Dec 30, 2019, 7:15 PM IST
ಹರಪನಹಳ್ಳಿ: ಪಟ್ಟಣದ ಮಧ್ವ ಮಠದಲ್ಲಿ ಶ್ರೀಗುರು ಮಧ್ವ ಸೇವಾ ಸಮಿತಿ ಹಾಗೂ ಬ್ರಾಹ್ಮಣ ಸಮಾಜದ ವತಿಯಿಂದ ಪೇಜಾವರ ಮಠಾಧಿಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹರಿಪಾದ ಸೇರಿದ ಹಿನ್ನೆಲೆಯಲ್ಲಿ ಗುರುಗಳಿಗೆ ನಮನ ಸಭೆ ನಡೆಯಿತು.
ಧಾರ್ಮಿಕ, ಶೈಕ್ಷಣಿಕ ಮತ್ತು ರಾಷ್ಟ್ರಾಭಿಮಾನ ಸಂಸ್ಕೃತಿ ಸಂವರ್ಧನೆಯಲ್ಲಿ ಪೇಜಾವರ ಶ್ರೀಗಳ ಪಾತ್ರ ದೊಡ್ಡದು. ಪೇಜಾವರ ಶ್ರೀಗಳಿಗೆ ಮಧ್ವ ಮಠದೊಂದಿಗೆ ಅವಿನಾಭಾವ ಸಂಬಂಧವಿತ್ತು. ಶ್ರೀಗಳ ದೇಹಾಂತ್ಯದಿಂದ ಹಿಂದೂ ಧರ್ಮದ ಪ್ರಮುಖ ಮಾರ್ಗದರ್ಶಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಹಿಂದೂ ಧರ್ಮದ ಉತ್ಥಾನಕ್ಕೆ ಶ್ರೀಗಳ ಕೊಡುಗೆ ಅವಿಸ್ಮರಣೀಯ ಎಂದು ಅವರನ್ನು ಸ್ಮರಿಸಿದರ ಜೊತೆಗೆ ಮಠದಲ್ಲಿ ಶ್ರೀಗಳಿಂದ ಆಗಿರುವ ಉಪಕಾರಗಳನ್ನು ನೆನಪಿಸಿಕೊಂಡರು. ಸಮಿತಿ ಅಧ್ಯಕ್ಷ
ಟಿ. ವ್ಯಾಸರಾಜು, ಕಾರ್ಯದರ್ಶಿ ಬಿ.ಸುಬ್ಬರಾವ್, ಖಜಾಂಚಿ ಆರ್.
ಶ್ರೀಕಾಂತ್, ಸದಸ್ಯರಾದ ಬಿ.ಶ್ರೀನಿ , ವೈದ್ಯ ವಾದಿರಾಜ್, ಎ.ಗಿರಿಧರ, ಎನ್.ವಿ.ಹನುಮಂತರಾವ್ ಭಾಗವಹಿಸಿದ್ದರು.