ರೈತ ಕುಟುಂಬ ದತ್ತು ಪಡೆದ ಎಂಎಲ್ಸಿ
Team Udayavani, Apr 19, 2020, 2:51 PM IST
ಚನ್ನರಾಯಪಟ್ಟಣ: ಸಂಕಷ್ಟಕ್ಕೆ ಸಿಲುಕಿದ ರೈತನ ಕುಟುಂಬವನ್ನು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ದತ್ತು ತೆಗೆದುಕೊಂಡು ಮಾನವೀಯತೆ ಮೆರೆದಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ದಡದಹಳ್ಳಿ ಗ್ರಾಮದ ರೈತ ನಂಜೇಗೌಡರ ಪುತ್ರ ಸಂತೋಷ್ ಕುರಿ, ಮೇಕೆ, ಖರೀದಿಸಲು ಹೋಗಿ ಲಾಕ್ಡೌನ್ನಿಂದ ಗ್ರಾಮಕ್ಕೆ ಹಿಂತಿರುಗಲು ಸಾಧ್ಯವಾಗಿಲ್ಲ. ಗ್ರಾಮದಲ್ಲಿ ಇರುವ ಕುರಿ ಮೇಕೆಗೆ ಮೇವಿನ ಕೊರತೆ ಇದ್ದರಿಂದ ಎಂ.ಎ. ಗೋಪಾಲಸ್ವಾಮಿ ಅವರು, ನಂಜೇಗೌಡ ಅವರ ಕುರಿ ಮೇಕೆಗಳಿಗೆ ಒಂದು ಟ್ರ್ಯಾಕ್ಟರ್ ಜೋಳದ ಮೇವು ಒದಗಿಸಿದ್ದಾರೆ.
ಸಂತೋಷ್ ಗ್ರಾಮಕ್ಕೆ ಹಿಂತಿರುಗುವವರೆಗೆ ಕುರಿ ಮೇಕೆ ಮೇವಿನ ಜವಾಬ್ದಾರಿಯನ್ನು ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ವಹಿಸಿಕೊಂಡಿದ್ದು ಅವರ ಕುಟುಂಬವನ್ನು ದತ್ತು ತೆಗೆದುಕೊಂಡಿದ್ದಾರೆ. ಶಾಸಕರು ನಂಜೇಗೌಡರ ಜಮೀನನ್ನು ಸ್ವತಃ ನೇಗಿಲು ಹಿಡಿದು ಮೇವಿನ ಬಿತ್ತನೆ ಮಾಡುವ ಮೂಲಕ ಧೈರ್ಯ ತುಂಬಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ