ಪಪಂ: 44.39 ಕೋಟಿ ರೂ. ಬಜೆಟ್ ಮಂಡನೆ
Team Udayavani, Feb 24, 2021, 2:09 PM IST
ಅರಕಲಗೂಡು: ಪಪಂನ 2021-22ನೇ ಸಾಲಿನ 44,39,37,610 ರೂ.ನ ಆಯ-ವ್ಯಯವನ್ನು ಅಧ್ಯಕ್ಷ ಹೂವಣ್ಣ ಮಂಡಿಸಿದರು. ದೊಡ್ಡ ಮೊತ್ತದ ಮೊದಲ ಬಜೆಟ್ ಇದಾಗಿದ್ದು, 44,34,67,840 ರೂ. ಖರ್ಚು, 4,69,770 ರೂ. ಉಳಿತಾಯ ತೋರಿಸಲಾಗಿದೆ. ಬಜೆಟ್ ಮಂಡನೆ ನಂತರ ಮಾತನಾಡಿದ ಪಪಂ ಅಧ್ಯಕ್ಷ ಹೂವಣ್ಣ, ಎಲ್ಲಾ ವಾರ್ಡ್ಗಳನ್ನು ಆಧುನೀಕರಣ ಮಾಡುವ ಹಿನ್ನೆಲೆಯಲ್ಲಿ ಈ ಬಾರಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಪೌರಕಾರ್ಮಿಕರಿಗಿಲ್ಲ ಆದ್ಯತೆ: ಸಭೆಯಲ್ಲಿ ಸದಸ್ಯ ವಾಟಾಳ್ ರಮೇಶ್ ಮಾತನಾಡಿ, ಇದೇಮೊದಲ ಬಾರಿಗೆ ದೊಡ್ಡ ಗಾತ್ರದ ಬಜೆಟ್ ತಯಾರಿಸಿದ್ದು ಸ್ವಾಗತಾರ್ಹ. ಇದರ ಗುರಿಯನ್ನುಮುಟ್ಟಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಆದರೆ, ಪಪಂನ ಸರ್ವತೋಮುಖ ಅಭಿವೃದ್ಧಿಗೆಶ್ರಮಿಸುವ ತಳಹದಿ ಆಗಿರುವ ಪೌರಕಾರ್ಮಿಕರಿಗೆ ಆದ್ಯತೆ ನೀಡದಿರುವುದುಬೇಸರದ ಸಂಗತಿ ಎಂದು ಹೇಳಿದರು.
ನೀರಿನ ತೆರಿಗೆ ಮನ್ನಾ ಮಾಡಿ: ಪಪಂ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮೀಣ ಜನರು ಇದ್ದು, ಶೇ.70 ಬಡತನ ರೇಖೆಯಲ್ಲಿ ಜೀವಿಸುತ್ತಿದ್ದಾರೆ. ಹೀಗಾಗಿ ಕುಡಿಯುವ ನೀರಿನತೆರಿಗೆಯನ್ನು ಮನ್ನಾ ಮಾಡುವ ಮೂಲಕ ಕೋವಿಡ್ ಸಂಕಷ್ಟದಲ್ಲಿರುವ ನಾಗರಿಕರಿಗೆ ಸಹಕಾರ ನೀಡುವಂತೆ ಸಭೆಯಲ್ಲಿ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಪಪಂ ಅಧ್ಯಕ್ಷ ಹೂವಣ್ಣ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು, ಹೆಚ್ಚು ಅನುದಾನವನ್ನು ಗಳಿಸುವ ಮೂಲಕ ಇದಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ನಿರ್ಣಯಿಸಿ: ಸಭೆ ಮುಗಿದು 15 ದಿನ ಕಳೆದರೂ ಸಭಾ ನಡಾವಳಿ ಬರೆಯದೇ ಸಭೆಗೆ ಅಗೌರವ ತರುತ್ತಿರುವುದು ಒಳಿತಲ್ಲ ಎಂದು ಪಪಂ ಸಿಬ್ಬಂದಿಯನ್ನು ಎಚ್ಚರಿಸಿದ ಸದಸ್ಯ ಕೃಷ್ಣಯ್ಯ, ಅರಕಲಗೂಡು ಪಪಂನಲ್ಲಿಆಯ್ಕೆಯಾದ ದಿನದಿಂದಲೂ ಅನೇಕ ಸಭೆಗಳು ನಡೆದಿವೆ. ಆ ಸಭೆಯಲ್ಲಿ ನಿರ್ಣಯಿಸುವ ನಿರ್ಣಯಗಳನ್ನು ಸಭೆಯೊಳಗೆ ನಮೂದಿಸದೇ,ಸಭೆಯ ನಂತರದಲ್ಲಿ ಬರೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ನಡಾವಳಿ ಪುಸ್ತಕ ಬರೆಯುತ್ತಿಲ್ಲ: ಇತ್ತೀಚಿನ ದಿನಗಳಲ್ಲಿ ಪಪಂನ ಸಭೆಯ ನಡಾವಳಿಯನ್ನು 15 ದಿನಗಳಾದರೂ ಬರೆಯಲ್ಲಿ ಪಪಂನ ಕಟ್ಟಡ ದಿಂದ ಹೊರಭಾಗಕ್ಕೆ ತೆಗೆದುಕೊಂಡು ಹೋಗಿಬರೆಯುತ್ತಾರೆ. ಇದು ಸರಿಯಾದ ಬೆಳವಣಿಗೆ ಯಲ್ಲ. ಅಧ್ಯಕ್ಷರು ಇತ್ತ ಗಮನ ನೀಡಿ ಸಭೆ ಯಲ್ಲೇ ನಡಾವಳಿ ಪುಸ್ತಕವನ್ನು ಬರೆಯುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಪ್ರಸಂಗವು ನಡೆಯಿತು. ಇವರ ಪ್ರಶ್ನೆಗೆ ಉತ್ತರಿಸದೇ ಅಧಿಕಾರಿಗಳು ಮೌನಕ್ಕೆ ಶರಣಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್ಡಿಡಿ
Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ
Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್ಗೆ ಲಾಭ?
Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್ ರೇವಣ್ಣ ಪ್ರಚಾರಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್