ಬಾಹುಬಲಿ ಕನ್ನಡ ರಥಕ್ಕೆ ಚಾಲನೆ
Team Udayavani, Dec 2, 2019, 4:06 PM IST
ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕು ಕೇಂದ್ರದಿಂದ ಮೈಸೂರಿಗೆ ಹೊಸದಾಗಿ ಸಂಚಾರ ಪ್ರಾರಂಭಿಸಿದ ರಾಜ್ಯ ರಸ್ತೆ ಸಾರಿಗೆಯ “ಬಾಹುಬಲಿ ಕನ್ನಡ ರಥ‘ಕ್ಕೆ ಘಟಕದ ವ್ಯವಸ್ಥಾಪಕ ಪಿ.ಬಿ.ನಾಗರಾಜು ಚಾಲನೆ ನೀಡಿದರು.
ನಿತ್ಯ ಬೆಳಗ್ಗೆ 7.45ಕ್ಕೆ ಚನ್ನರಾಯ ಪಟ್ಟಣದಿಂದ ಹೊರಡುವ ಬಾಹುಬಲಿಕನ್ನಡ ರಥದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಓದಲು ಕನ್ನಡದಿನಪತ್ರಿಕೆಯನ್ನು ವ್ಯವಸ್ಥೆಮಾಡಲಾಗುತ್ತದೆ. ದಿನವಹಿ ನಾಲ್ಕುಬಾರಿ ಮೈಸೂರು–ಚನ್ನರಾಯಪಟ್ಟಣಸಂಚಾರ ಮಾಡಲಿದೆ. ಬಸ್ನ ಎಲ್ಲಾ ಕಿಟಕಿಗಳಿಗೆ ಕನ್ನಡ ಸಾಹಿತಿಗಳ ಭಾವ ಚಿತ್ರವನ್ನು ಹಾಕಲಾಗಿದ್ದು, ಕನ್ನಡ ಪ್ರೇಮವನ್ನು ಚಾಲಕ ಯೋಗೇಶ್ ಮತ್ತು ನಿರ್ವಾಹಕ ಗುರು ತೋರಿದ್ದಾರೆ.
ಈಗಾಗಲೇ ಏಳು ದಿನ ಪ್ರಯೋಗಿಕವಾಗಿ ಸಂಚಾರ ಮಾಡಿ ನಿತ್ಯ 13 ರಿಂದ 16 ಸಾವಿರ ಹಣ ಸಂಗ್ರಹವಾಗುತ್ತಿದೆ.ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ಶಾಶ್ವತವಾಗಿ ಸಂಚಾರ ಮಾಡಲು ಘಟಕವು ತೀರ್ಮಾನ ಮಾಡಿದೆ.
ಬಾಹುಬಲಿ ನಾಡಿನಿಂದ ಚಾಮುಂಡಿ ಬೀಡಿಗೆ ಎಂಬ ವಾಕ್ಯವನ್ನು ಬಸ್ ಮೇಲೆ ಹಾಕಲಾಗಿದ್ದು, ಸಾಹಿತಿ ಎಸ್.ಎಲ್. ಭೈರಪ್ಪ, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪು.ತಿ. ನರಸಿಂಹಾಚಾರ್, ಯು.ಆರ್.ಅನಂತಮೂರ್ತಿ,ಗಿರೀಶ್ ಕಾರ್ನಾಡ್, ಕುವೆಂಪು, ಹರಿಹರ, ಬಸವಣ್ಣ, ರಾಘವಾಂಕ, ಕುಮಾರವ್ಯಾಸ, ರನ್ನ, ಜನ್ನ, ಪೊನ್ನ, ಕೆ.ಎಸ್. ನರಸಿಂಹಸ್ವಾಮಿ ಚಿತ್ರಗಳು ಬಸ್ಸಿನಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ