ಹೋಳಿ ಹಬ್ಬ: ರಾಸಾಯನಿಕಯುಕ್ತ ಬಣ್ಣ ಬಳಕೆ ಅಪಾಯ
Team Udayavani, Mar 29, 2021, 3:21 PM IST
ಚನ್ನರಾಯಪಟ್ಟಣ: ಹೋಳಿ ಹಬ್ಬ ಎಂದರೆ ಬಣ್ಣದಓಕುಳಿ ಆಡುವ ಮೂಲಕ ಆಚರಣೆ ಮಾಡಲಾ ಗುತ್ತದೆ. ಆದರೆ ಪ್ರಸಕ್ತ ವರ್ಷ ಹೋಳಿಯಾಡುವಮೂದಲು ನೂರು ಸಲ ಯೋಚನೆ ಮಾಡುವಂತಹ ಸ್ಥಿತಿ ದೇಶದಲ್ಲಿ ನಿರ್ಮಾಣ ಆಗಿರುವುದರಿಂದ ತಾಲೂಕಿನ ಯುವಕರು ಈ ಬಗ್ಗೆ ಕೊಂಚ ಆಲೋಚನೆ ಮಾಡುವುದು ಒಳಿತು.
ಮಾರುಕಟ್ಟೆಯ ಲ್ಲಿ ನಾನಾ ಬಣ್ಣಗಳ ಮಾರಾಟ ಜೋರಾಗಿ ನಡೆಯುತ್ತದೆ. ಕೆಂಪು, ಹಳದಿ, ಹಸಿರು,ನೀಲಿ, ಗುಲಾಬಿ, ಸಿಲ್ವರ್, ಗೋಲ್ಡ್ ಸೇರಿದಂತೆಬಗೆಬಗೆಯ ಬಣ್ಣಗಳು ಲಭ್ಯವಿದ್ದರು ಇವುಗಳನ್ನುನೀರಿನಲ್ಲಿ ಕಲಸಿ ಎರಚುವ ಮೊದಲು ಆಲೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ಎರಡನೇ ಅಲೆ ಈಗಾಗಲೇ ಹಲವು ರಾಜ್ಯದ ಮಹಾನಗರದಲ್ಲಿ ತನ್ನ ನರ್ತನ ತೋರುತ್ತಿದೆ. ಈ ವೇಳೆ ನಾವು ರಾಸಾಯನಿಕ ಯುಕ್ತ ಬಣ್ಣದಿಂದ ಹೋಳಿಯಾಡಿ ಚರ್ಮದ ಕಾಯಿಲೆ ತಂದುಕೊಳ್ಳುವುದ ತರವಲ್ಲ.
ಪ್ರಮುಖರೇ ದೂರ ಉಳಿದಿದ್ದಾರೆ ಇನ್ನು ನಾವು: ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕಬಣ್ಣಗಳು ರಾಸಾಯನಿಕದಿಂದ ಕೂಡಿರುತ್ತವೆ. ಇದರಬದಲಾಗಿ ನೈಸರ್ಗಿಕ ಬಣ್ಣವನ್ನು ಬಳಕೆ ಮಾಡಿಹೋಳಿ ಆಡುವುದು ಉತ್ತಮ, ಇಲ್ಲವೆ ಇದೊಂದುವರ್ಷ ಹೋಳಿಯಿಂದ ದೂರ ಉಳಿದರೆ ದೇಶಕ್ಕೂ ಹಾಗೂ ಸಮಾಜಕ್ಕೂ ಓಳಿತು.
ರಾಸಾಯನಿಕ ಬಣ್ಣದ ಸಮಸ್ಯೆ: ಬಣ್ಣಗಳಲ್ಲಿ ವಿಷ ಕಾರಿರಾಸಾಯನಿಕ ಇದ್ದರೆ ಕಣ್ಣಿಗೆ ಬಿದ್ದ ಕೂಡಲೆ ಕಣ್ಣು ಕೆಂಪಾಗುವುದು. ಕಾರ್ನಿಯಾಗೆ ಹಾನಿಯಾ ಗುವಸಾಧ್ಯತೆ ಇರುತ್ತದೆ, ಅಸ್ತಮಾ ಕಾಯಿಲೆ ಉಸಿರಾಟತೊಂದರೆ ಇರುವವರು ಬಣ್ಣದ ಕಣ ದಿಂದ ದೂರಉಳಿಯುವುದೇ ಒಳಿತು, ಇಲ್ಲವಾದಲ್ಲಿ ಶ್ವಾಸಕೋಶದತೊಂದರೆ ಅನುಭವಿಸಬೇಕಾಗುತ್ತದೆ. ಗುಣಮಟ್ಟಇಲ್ಲದ ಬಣ್ಣ ಬಳಸಿ ಅಲರ್ಜಿ ತುರಿಕೆಯಂತಹ ಚರ್ಮದ ಸಮಸ್ಯೆ ಎದುರಿಸಬೇಕಾಗುತ್ತದೆ.
ಯುವಕ-ಯುವತಿಯರಲ್ಲಿ ಮೊಡವೆ,ಗುಳ್ಳೆಗಳು ಮುಖದ ಮೇಲೆ ಇರುತ್ತದೆ ಇಂಥವರುಸಾಂಕೇತಿಕವಾಗಿ ಹೋಳಿಯಲ್ಲಿ ಪಾಲ್ಗೊಳ್ಳದೇಇರುವುದು ಒಳಿತು, ಎಂದು ಚರ್ಮರೋಗ ತಜÒರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಪತ್ತೆ ಹಚ್ಚುವುದು ಹೇಗೆ: ಅಕ್ಕಿ ಹಿಟ್ಟು, ಬೇವು, ತುಳಸಿ ಎಲೆಗಳು, ಅರಿಶಿನ ಕೊಂಬು, ಹೂವಿನ ದಳವನ್ನುಬಳಸಿ ಪರಿಸರ ಸ್ನೇಹಿ ಬಣ್ಣವನ್ನುತಯಾರಿಸಲಾಗುತ್ತದೆ. ಇವುಗಳನ್ನು ಗುರುತಿಸುವುದುಸುಲಭ, ರಾಸಾಯನಿಕಯುಕ್ತ ಬಣ್ಣಗಳು ಮುಟ್ಟಿದರೆಕೈಗೆ ಅಂಟಿಕೊಳ್ಳುತ್ತದೆ ಹಾಗೂ ತೊಳೆದರೆ ಬಣ್ಣಒಮ್ಮೆಗೆ ಹೋಗದೆ ಎರಡುರಿಂದ ಮೂರು ದಿನಉಳಿಯುತ್ತದೆ. ಆದರೆ ನೈಸರ್ಗಿಕ ಬಣ್ಣ ಸ್ವಲ್ಪ ತರಿತರಿಯಾಗಿರುತ್ತದೆ. ನೀರಿನಲ್ಲಿ ಕಲಸಿದರೆ ಬಣ್ಣನೀರಲ್ಲಿ ಬೆರತು ಅಕ್ಕಿ ಹಿಟ್ಟು ತಳ ಸೇರುತ್ತದೆ.
ಹೋಳಿ ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸುವುದರ ಜತೆಗೆ ನೀರು ಬಳಸದೆ ಕೇವಲಬಣ್ಣಗಳಿಂದ ಆಚರಣೆ ಮಾಡುವುದು ಉಳಿತು. ನಮ್ಮಆರೋಗ್ಯಕ್ಕಿಂತ ಒಂದು ದಿವಸದ ಸಂತೋಷ ಮುಖ್ಯವಲ್ಲಹಾಗಾಗಿ ಕೊರೊನಾ ಎರಡನೇ ಅಲೆ ರಾಜ್ಯವ್ಯಾಪ್ತಿ ಪಸರಿಸುವ ಮೂಲಕ ನಾವು ಎಚ್ಚರಿಕೆಯಿಂದ ಇರುವುದು ಸೂಕ್ತ. ● ಡಾ. ವಿ.ಮಹೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ
ಶಾಮಸುಂದರ್ ಕೆ.ಅಣ್ಣೇನಹಳ್ಳಿ