ಕಾಫಿ ತೋಟದಲ್ಲಿ ಈಗ ಹೂ ನಗೆ

ಅಕಾಲಿಕ ಮಳೆಯಿಂದ ಅವಧಿಗೂ ಮೊದಲೇ ಅರಳಿದ ಹೂ ,ಬೆಳೆಗಾರರಲ್ಲಿ ಸಂತಸ

Team Udayavani, Mar 2, 2021, 4:22 PM IST

ಕಾಫಿ ತೋಟದಲ್ಲಿ ಈಗ ಹೂ ನಗೆ

ಸಕಲೇಶಪುರ: ತಾಲೂಕಿನ ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿ ಗಿಡದಲ್ಲಿ ಸಮೃದ್ಧವಾಗಿ ಹೂವು ಬಿಟ್ಟಿದ್ದು, ತೋಟವು ಘಮ ಘಮಿಸುತ್ತಿದೆ. ಹಸಿರು ಎಲೆಯ ಮೇಲೆ ಮೊಸರು ಚೆಲ್ಲಿದಂತೆ ಹೂ ಅರಳಿ ನಿಂತಿದ್ದು,ನೋಡುಗರ ಕಣ್ಮನ ಸೆಳೆಯುತ್ತಿದೆ. ಹಿಂದಿಗಿಂತಬಹುಬೇಗನೆ ಹೂ ಅರಳಿರುವುದು ಈಗಾಗಲೇಕೊಯ್ಲು ಮಾಡಿದ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದರೆ, ಇನ್ನೂ ಕೊಯ್ಲು ಬಾಕಿ ಇರುವವರಿಗೆ ತೊಂದರೆ ಆಗಿದೆ.

ಸಾಮಾನ್ಯವಾಗಿ ಡಿಸೆಂಬರ್‌ ಕೊನೆವಾರದಿಂದ ಫೆಬ್ರುವರಿ ಅಂತ್ಯದವರೆಗೂ ಕಾಫಿ ಫ‌ಸಲನ್ನು ಕೊಯ್ಲು ಮಾಡುವುದು ವಾಡಿಕೆ. ಆದರೆ, ಈ ಬಾರಿ ಜನವರಿ ಮೊದಲ ವಾರಾಂತ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿಗೆ ವ್ಯಾಪಕ ಹಾನಿಯುಂಟಾಗಿತ್ತು. ಸುಮಾರು ಒಂದು ವಾರ ಮೋಡ ಮುಸುಕಿದ ವಾತಾವರಣ ಇತ್ತು. ಈ ಕಾರಣದಿಂದ ಕಾಫಿ ಕೊಯ್ಲು ಮಾಡಿದವರು ಒಣಗಿಸಲು ಪರದಾಡಿದರೆ, ಕಾಫಿ ಕೊಯ್ಲು ಮಾಡದವರು ಬೆಲೆ ನಷ್ಟದ ಆತಂಕ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಎಲ್ಲಾ ಆತಂಕದಿಂದ ಚೇತರಿಸಿಕೊಂಡ ಬೆಳೆಗಾರರು, ಕಾಫಿ ಕೊಯ್ಲು ನಡೆಸಿದ್ದರು.ಆದರೆ, ಕಳೆದ ವಾರ ಅಕಾಲಿಕ ಮಳೆಯಿಂದಇದೀಗ ಕಾಫಿ ಗಿಡಗಳಲ್ಲಿ ಹೂವು ಬಿಟ್ಟಿದ್ದು, ತೋಟಗಳಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಖರ್ಚು ಉಳಿತಾಯ: ಕಾಫಿ ಕೊಯ್ಲು ನಡೆಸಿದವರಿಗೆ ಕಳೆದ ವಾರ ಸುರಿದ ಅಕಾಲಿಕ ಮಳೆ ಸಂತೋಷ ತಂದಿದೆ. ಒಂದು ಇಂಚಿಗೂ ಹೆಚ್ಚು ಮಳೆ ತಾಲೂಕಿನ ಹಲವೆಡೆ ಸುರಿದಿತ್ತು. ಇದರಿಂದಾಗಿ ಬೆಳೆಗಾರರು ಕಾಫಿ ಗಿಡಗಳಿಗೆ ಕೃತಕವಾಗಿ ನೀರು ಸಿಂಪಡಿಸುವುದು ತಪ್ಪಿದೆ. ಹನಿ ನೀರಾವರಿ ಅಥವಾ ಸ್ಪಿಂಕ್ಲರ್‌ ಮೂಲಕ,ಇಲ್ಲದೆ, ಕೃತಕವಾಗಿ ಆಯಿಲ್‌ ಎಂಜಿನ್‌ ಇಟ್ಟು, ಕೋಟ್ಯಂತರ ರೂ. ಡೀಸೆಲ್‌ ಖರ್ಚು ಮಾಡಿ ಗಿಡಗಳಿಗೆ ನೀರು ಉಣಿಸಬೇಕಿತ್ತು. ಇದೀಗ ಆ ಖರ್ಚು ಸಮಯ ಉಳಿಕೆ ಆಗಿದೆ. ಜೊತೆಗೆ ಕಾರ್ಮಿಕರಿಗೆ ಕೊಡಬೇಕಾಗಿದ್ದ ಕೂಲಿ ಸಹಉಳಿದಿದೆ.

ಕಾಯಿ ಕಟ್ಟಲು ಸಹಕಾರಿ: ಒಂದು ವೇಳೆ ಮಳೆ ಒಂದು ಇಂಚಿಗೂ ಕಡಿಮೆ ಆಗಿದ್ದರೆ, ಕೃತಕವಾಗಿ ನೀರು ಸಿಂಪಡಿಸಬೇಕಾಗಿತ್ತು. ಆದರೆ, ಮಳೆಪೂರ್ಣ ಪ್ರಮಾಣದಲ್ಲಿ ಬಿದ್ದಿರುವುದರಿಂದ ಇನ್ನು 20 ದಿನಗಳ ಕಾಲ ಕೃತಕವಾಗಿ ನೀರುಸಿಂಪಡಿಸುವ ಅಗತ್ಯವಿಲ್ಲ. ಮಳೆಯಿಂದಾಗಿಹೂವು ಬಂದಿದ್ದು, ಮುಂದಿನ ಹಂಗಾಮಿಗೆಕಾಯಿ ಕಟ್ಟಲು ಸಹಾಯಕಾರಿಯಾಗಿದೆ.ಇದೇ ವೇಳೆ ಕೂಲಿ ಕಾರ್ಮಿಕರ ಕೊರತೆಯಿಂದ ಶೇ.25ಕ್ಕೂ ಹೆಚ್ಚು ಕಾಫಿ ಕೊಯ್ಲು ಮಾಡುವುದು ಹಲವು ತೋಟಗಳಲ್ಲಿಬಾಕಿ ಇದ್ದು, ಇಂತಹ ತೋಟಗಳಲ್ಲಿ ಒಂದೆಡೆ ಹೂವು ಬಿಟ್ಟಿರುವುದು, ಮತ್ತೂಂದೆಡೆ ಹಣ್ಣುಗಿಡಗಳಲ್ಲಿ ಇರುವುದು ಬೆಳೆಗಾರರ ತಲೆ ಬಿಸಿಮಾಡಿದೆ. ಫೆಬ್ರವರಿ ಮೂರನೇ ವಾರಾಂತ್ಯದಲ್ಲಿಸುರಿದ ಮಳೆ ಮಾರ್ಚ್‌ ಮೊದಲ ವಾರದಲ್ಲಿ ಸುರಿದಿದ್ದಲ್ಲಿ ಎಲ್ಲರಿಗೂ ಅನುಕೂಲವಾಗುತ್ತಿತ್ತು.ಒಟ್ಟಾರೆಯಾಗಿ ಅಕಾಲಿಕ ಮಳೆ ಕೆಲವರಿಗೆಸಂತೋಷ ತಂದರೆ, ಮತ್ತೆ ಕೆಲವರಿಗೆ ದುಃಖ ಉಂಟು ಮಾಡಿದೆ.

ಕಳೆದ ವಾರ ಬಿದ್ದ ಅಕಾಲಿಕಮಳೆಯಿಂದಾಗಿ ಗಿಡಗಳಲ್ಲಿ ಹೂವು ಮೂಡಿದೆ. ಈಗಾಗಲೆ ಕಾಫಿ ಕೊಯ್ಲು ಮಾಡಿರುವುದರಿಂದ ಗಿಡಗಳಲ್ಲಿ ಹೂವು ಕಟ್ಟಿರುವುದು ಸಂತೋಷ ತಂದಿದೆ. ಭೋಜೇಗೌಡ, ಕಾಫಿ ಬೆಳೆಗಾರ, ಕುಡುಗರಹಳ್ಳಿ.

ಕೆಲವೊಂದು ತೋಟಗಳಲ್ಲಿ ಕಾಫಿ ಕೊಯ್ಲು ಮಾಡಲು ಗುತ್ತಿಗೆ ಪಡೆದಿದ್ದೆ. ಸುರಿದ ಅಕಾಲಿಕಮಳೆಯಿಂದಾಗಿ ಕೊಯ್ಲು ಸಂಪೂರ್ಣವಾಗಿ ಮುಗಿಸಲು ಆಗಲಿಲ್ಲ. ಇದೀಗ ಗಿಡಗಳಲ್ಲಿ ಹೂವು ಮೂಡಿದೆ. ಹೀಗಾಗಿ ಹಣ್ಣುಕೊಯ್ಲು ಮಾಡಲು ತೀವ್ರ ತೊಂದರೆ ಆಗಿದೆ. ಎಸ್‌.ಎಸ್‌.ಅಸ್ಲಾಂ, ಕಾಫಿ ಹಾಗೂ ಮೆಣಸು ವರ್ತಕ.

 

ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್‌ಡಿಡಿ

BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್‌ಡಿಡಿ

Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ

Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ

13

Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್‌ಗೆ ಲಾಭ? 

Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್‌ ರೇವಣ್ಣ ಪ್ರಚಾರಕ್ಕೆ ಚಾಲನೆ

Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್‌ ರೇವಣ್ಣ ಪ್ರಚಾರಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.