ತಹಶೀಲ್ದಾರ್ ವಿರುದ್ಧ ಕೈ ರೋಷಾವೇಶ
Team Udayavani, Aug 21, 2022, 3:53 PM IST
ಚನ್ನರಾಯಪಟ್ಟಣ: ಪಟ್ಟಣದಲ್ಲಿ ಬಿಜೆಪಿ ವಿರುದ್ದ ಧರಣಿ ನಡೆಸಿದ ಕಾಂಗ್ರೆಸ್ ಮುಖಂಡರು ಮಿನಿ ವಿಧಾನಸೌಧಕ್ಕೆ ತೆರಳಿ ಮನವಿ ಸಲ್ಲಿಸಲು ಮುಂದಾದರು ಈ ವೇಳೆ ಮನವಿ ಸ್ವೀಕರಿಸಲು ತಹ ಶೀಲ್ದಾರ್ ತಡವಾಗಿ ಆಗಮಿಸಿದರು ಎಂದು ಕಾಂಗ್ರೆಸ್ ಮುಖಂಡರು ತಹಶೀಲ್ದಾರ್ ಗೋವಿಂದರಾಜು ಮೇಲೆ ಎರಗಿದ ಪ್ರಸಂಗ ನಡೆಯಿತು. ತಹಶೀಲ್ದಾರ್ ವಿರುದ್ಧ ದಿಕ್ಕಾರ ಕೂಗಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ. ರಾಮ ಚಂದ್ರ, ಜಿಪಂ ಮಾಜಿ ಉಪಾಧ್ಯಕ್ಷ ವಿಜಯ ಕುಮಾರ್, ಪಿಕಾರ್ಡ್ ಬ್ಯಾಂಕ್ ನಿರ್ದೇ ಶಕ ಎಂ.ಶಂಕರ್ ತಹಶೀಲ್ದಾರ್ ಮಿನಿ ವಿಧಾನಸೌಧದ ಬಾಗಿಲಿಗೆ ಆಗಮಿಸಿದ ಅವರ ಮೇಲೆ ಎರಗಲು ಹೋದರು. ಈ ವೇಳೆ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿದಾಗ ತಲ್ಲಾಟ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರು ತಹಶೀ ಲ್ದಾರ್ ಗೋವಿಂದರಾಜುಗೆ ವಿರುದ್ಧ ಧಿಕ್ಕಾರ ಕೂಗಿದಲ್ಲದೆ ಜೆಡಿಎಸ್ ಏಜೆಂಟ್ ರೀತಿ ವರ್ತಿಸುತ್ತಾರೆ ಎಂದು ಆರೋಪಿಸಿದರು.
ತಹಶೀಲ್ದಾರ್ ಗೋವಿಂದ ತಹಶೀಲ್ದಾರ್ ವಿರುದ್ಧ ಕೈ ರೋಷಾ ವೇ ಶ ರಾಜು ಉತ್ತರಿಸಿ, ಜಿಲ್ಲಾಧಿಕಾರಿ ಆದೇಶದ ಮೇಲೆ ಅರ್ಚಕರ ಸಭೆ ನಡೆಯುತ್ತಿತ್ತು. ಬರುವುದು 10 ನಿಮಿಷ ತಡವಾಗಿದೆ ಹಾಗೆಂದು ನನ್ನ ಮೇಲೆ ಕೈ ಮಾಡಲು ಮುಂದಾದರೆ ಪರಿಣಾಮ ಎದುರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು