ಬೀನ್ಸ್ಗೆ ಬೇಡಿಕೆ ಕುಸಿತ: ಬೆಳೆಗಾರರಲ್ಲಿ ಆತಂಕ
Team Udayavani, May 24, 2021, 7:23 PM IST
ಸಕಲೇಶಪುರ: ಲಾಕ್ಡೌನ್ ಪರಿಣಾಮ ತಾಲೂಕಿನಲ್ಲಿಬೆಳೆಯುವ ಬೀನ್ಸ್ಗೆ ಬೇಡಿಕೆಯಿಲ್ಲದಂತಾಗಿದ್ದು, ಖರ್ಚುಮಾಡಿ ಲಾಭದ ಕನಸು ಕಂಡಿದ್ದ ಕೃಷಿಕರು ಇದೀಗ ನಷ್ಟಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನ ಹೊಂಗಡಹಳ್ಳ, ಅತ್ತಿಹಳ್ಳಿ, ಬಿಳುತಾಳ್ ಇನ್ನುಹಲವೆಡೆ ಉಪಬೆಳೆಯಾಗಿ ಬೆಳೆಯುತ್ತಿದ್ದ ಬೀನ್ಸ್ನ್ನು ಇತ್ತೀಚಿನದಿನಗಳಲ್ಲಿ ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತಿದೆ.
ಈ ಹಿಂದೆ ಮ®ಯ ೆ ಅಗತ್ಯವನ್ನು ಪೂರೈಸಿಕೊಳ್ಳಲು ಬೆಳೆಯಲಾಗುತ್ತಿದ್ದ ಬೀನ್ಸ್ ನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಆರಂಭಿಸಿದ್ದರಿಂದ ಬೆಳೆಯಮಾರುಕಟ್ಟೆ ರಾಜ್ಯದ ಹಲವೆಡೆಗೆ ವಿಸ್ತರಿಸಿದೆ.ಬೆಲೆಕುಸಿತ:ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು,ಹಾಸನ,ರಾಮನಗರ ಇನ್ನು ಹಲವೆಡೆಗೆ ತಾಲೂಕಿನಿಂದ ಬೀನ್ಸ್ ಮಾರುಕಟ್ಟೆಗೆಹೋಗುತ್ತಿದ್ದು, ಉತ್ತಮ ಧಾರಣೆ ದೊರಕುತ್ತಿತ್ತು.
ಇದೀಗ ಲಾಕ್ಡೌನ್ ಪರಿಣಾಮ ಬೀನ್ಸ್ಗೆ ಬೇಡಿಕೆಯಿಲ್ಲದಂತಾಗಿ ಬೆಲೆಸಂಪೂರ್ಣವಾಗಿ ಕುಸಿತ ಕಂಡಿದೆ.ಸಾಮಾನ್ಯವಾಗಿ ಫೆಬ್ರವರಿಯಿಂದ ಜೂನ್ ವರೆಗೆ ಬೀನ್ಸ್ ಬೆಳೆಬೆಳೆಯಲಾಗುತ್ತಿದ್ದು, ಸುಮಾರು 200ಕ್ಕೂ ಹೆಚ್ಚು ಕುಟುಂಬಗಳುತಾಲೂಕಿನಲ್ಲಿಈ ಕೃಷಿಯಲ್ಲಿ ತೊಡಗಿಸಿಕೊಂಡಿದೆ.
ಈಹಿಂದೆಕೆಲವರುಮಾತ್ರ ಸಾಂಪ್ರಾದಾಯಿಕ ಶೈಲಿಯಲ್ಲಿ ಬೀನ್ಸ್ ಬೆಳೆಯುತ್ತಿದ್ದರು.ಆದರೆ, ಇತ್ತೀಚೆಗೆ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿಗ್ರಾಮಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಹಲವು ಯುವಕರು ಹನಿನೀರಾವರಿಪದ್ಧತಿಯನ್ನು ಅಳವಡಿಸಿಕೊಂಡು ವ್ಯಾಪಕಖರ್ಚುಮಾಡಿಬೀನ್ಸ್ ಬೆಳೆಯಲು ಮುಂದಾಗಿದ್ದು, ಇದರಿಂದ ಉತ್ಪಾದನೆ ಹೆಚ್ಚಾಗಿಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸಲು ಆಗುತ್ತಿಲ್ಲ.
ಕುಯ್ಲು ಮಾಡಿಲ್ಲ: ಮಾರುಕಟ್ಟೆಗೆ ಜನ ಸಹ ಹೆಚ್ಚಾಗಿ ಬರುತ್ತಿಲ್ಲದಕಾರಣ ಮಧ್ಯವರ್ತಿಗಳು ಸಹ ಬೀನ್ಸ್ ಕೊಳ್ಳಲು ಮುಂದಾಗುತ್ತಿಲ್ಲ.ಕಳೆದ ವರ್ಷ ಕೆ.ಜಿ.ಗೆ 20ರಿಂದ 25 ರೂ.ಗಳಿದ್ದ ಬೀನ್ಸ್ ಇದೀಗಕೆ.ಜಿ.ಗೆ5 ರಿಂದ8 ರೂ.ಗಳಿಗೆಕುಸಿದಿದ್ದು, ಇದರಿಂದ ರೈತರಿಗೆ ಅಪಾರನಷ್ಟವುಂಟಾಗುತ್ತಿದ್ದು, ಹಲವು ರೈತರು ಬೇಸತ್ತು ಬೀನ್ಸ್ ಕುಯ್ಲುಮಾಡದೆ ಹಾಗೆಯೇ ಬಿಟ್ಟಿದ್ದಾರೆ.
ಸುಧೀರ್ಎಸ್.ಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್ಡಿಡಿ
Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ
Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್ಗೆ ಲಾಭ?
Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್ ರೇವಣ್ಣ ಪ್ರಚಾರಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ