ಮುಖ್ಯ ರಸೆ ಅಗಲೀಕರಣಕ್ಕೆ ಡೀಸಿ ಆದೇಶ

ಸಾರ್ವಜನಿಕರಿಗೆ ಸಂತೋಷ, ವರ್ತಕರಲ್ಲಿ ಆತಂಕ „ ನಿಯಮಾನುಸಾರ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಿ

Team Udayavani, Nov 10, 2021, 2:41 PM IST

Road reconstructon

ಕಲೇಶಪುರ: ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಜಿಲ್ಲಾಧಿಕಾರಿ ಆದೇಶ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಸಂತೋಷ ತಂದರೆ, ವರ್ತಕರ ವಲಯ ದಲ್ಲಿ ಆತಂಕ ಉಂಟಾಗಿದ್ದು, ಮುಂದೇನಾಗತ್ತದೆ ಎಂದು ಕಾದು ನೋಡಬೇಕಾಗಿದೆ. ಪಟ್ಟಣದಲ್ಲಿ ಹಾದುಹೋಗಿರುವ ಬೆಂಗಳೂರು- ಮಂಗಳೂರು ಹೆದ್ದಾರಿ ಪಟ್ಟಣದ ವ್ಯಾಪ್ತಿಯಲ್ಲಿ ಅತಿಕಿರಿದಾಗಿದ್ದು, ನಿತ್ಯ ವಾಹನ ದಟ್ಟಣೆ, ಅಪಘಾತಗಳು ನಡೆಯುತ್ತಿವೆ ಎಂಬ ಕಾರಣ ನೀಡಿ, 2018ರಲ್ಲಿ ಉಪಭಾಗಾಧಿಕಾರಿಯಾಗಿದ್ದ ಲಕ್ಷ್ಮೀಕಾಂತ ರೆಡ್ಡಿ ಸುರಿಯುವ ಮಳೆಯ ನಡುವೆ ಮುಖ್ಯ ರಸ್ತೆಯಲ್ಲಿದ್ದ ಸರ್ಕಾರಿ ಕಟ್ಟಡಗಳನ್ನು ತೆರವುಗೊಳಿ ಸಿದ್ದರು. ಇದರಿಂದ ಬೆದರಿದ ಹಲವು ವರ್ತಕರು ತಮ್ಮ ಕಟ್ಟಡಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದ್ದರು.

ಆದರೆ, ಉಪ ವಿಭಾಗಾಧಿಕಾರಿ ಕಾರ್ಯಾ ಚರಣೆ ಖಂಡಿಸಿ ವರ್ತಕ ಷಾಪ್‌ ಲಿಂಗರಾಜ್‌ ನೇತೃತ್ವ ದಲ್ಲಿ ನ್ಯಾಯಾಲಯದ ಮೊರೆಹೋದ ವರ್ತಕರು, ಯಾವುದೆ ಮುಂಜಾಗ್ರತ ಕ್ರಮ ಕೈಗೊಳ್ಳದೆ ರಸ್ತೆ ಅಗಲೀಕರಣಕ್ಕೆ ಉಪಭಾಗಾಧಿಕಾರಿ ಮುಂದಾಗಿದ್ದಾರೆ. ಆದ್ದರಿಂದ, ನೆಲಸಮಗೊಂಡ ಕಟ್ಟಡದ ಒಂದು ಮೀಟರ್‌ ವಿಸ್ತೀರ್ಣಕ್ಕೆ 19300 ರೂ.ನಂತೆ ಅದರ ಹತ್ತುಪಟ್ಟು ಪರಿಹಾರ ಹಾಗೂ ಕಟ್ಟಡ ತೆರವುಗೊಳಿಸಿದ ವೇಳೆ ಕಟ್ಟಡಕ್ಕಾದ ಹಾನಿಯ ಪರಿಹಾರವಾಗಿ 10 ಲಕ್ಷ ರೂ., ಗಳನ್ನು ತಪ್ಪಿತಸ್ಥ ಅಧಿಕಾರಿಗಳು ಪ್ರತಿಯೊಬ್ಬ ವರ್ತಕರಿಗೂ ನೀಡ ಬೇಕು ಎಂದು ಮನವಿ ಸಲ್ಲಿಸಿದ್ದರು. 3 ವರ್ಷದ ನಂತರ ತೀರ್ಪು: ರಾಜ್ಯ ಉಚ್ಚನ್ಯಾಯಾ ಲಯ ವಾದ ಪ್ರತಿವಾದ ಆಲಿಸಿದ ನಂತರ ಜಿಲ್ಲಾಧಿ ಕಾರಿಗಳ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾ ಯಿಸಿತ್ತು. ಆದರೆ, ಕಳೆದ ಮೂರು ವರ್ಷದಲ್ಲಿ ಹಲವು ಜಿಲ್ಲಾಧಿಕಾರಿಗಳು ಬದಲಾದರು.

ರಸ್ತೆ ಅಗಲೀಕರಣದ ಸಂಭಂದ ಯಾವುದೇ ತೀರ್ಪು ನೀಡಿರಲಿಲ್ಲ. ಆದರೆ, ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಪ್ರಕರಣ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ನ್ಯಾಯಾಲಯ ಅಗಲೀಕರಣಕ್ಕೆ ಕೆಲ ಅಂಶಗಳನ್ನು ಪಟ್ಟಿಮಾಡಿದೆ.

ಅಗಲೀಕರಣಕ್ಕೆ ಪಟ್ಟಿಮಾಡಿದ ಅಂಶಗಳು: ರಸ್ತೆ ಅಗಲಿಕರಣಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಒತ್ತಡ ಕೇಳಿ ಬರುತ್ತಿದೆ. ಕಳೆದ ಹಲವು ವರ್ಷಗಳಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆದಿರುವ ಅಪಘಾತ ಗಳಿಗೆ ರಸ್ತೆ ಕಿರಿದಾಗಿರುವುದೇ ಕಾರಣ. 2015ರಿಂದ 2018 ಒಟ್ಟು 3.5 ವರ್ಷದ ಅವಧಿಯಲ್ಲಿ ಬಿ.ಎಂ ರಸ್ತೆಯಲ್ಲಿ 180 ಅಪಘಾತಗಳು ಸುಮಾರು 14 ಮಂದಿ ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ಹೆದ್ದಾರಿ ಗಳು 30ರಿಂದ 40 ಮೀಟರ್‌ ಅಗಲವಾಗಿರಬೇಕು. ಆದರೆ, ಪಟ್ಟಣದ ಮುಖ್ಯರಸ್ತೆ 10ರಿಂದ 12 ಮೀಟರ್‌ ಮಾತ್ರ ಅಗಲವಿದೆ.

ಸರ್ಕಾರಿ ನಿಯಮ ಉಲ್ಲಂಘನೆ: ಹೆದ್ದಾರಿಯಿಂದ 40 ಮೀಟರ್‌ ದೂರದಲ್ಲಿ ಕಟ್ಟಡಗಳನ್ನು ನಿರ್ಮಿಸಬೇಕು. ಆದರೆ, ಪಟ್ಟಣದಲ್ಲಿ 10ರಿಂದ 15 ಮೀಟರ್‌ ದೂರದಲ್ಲೇ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸರ್ಕಾರದ ನಿಯಮಗಳನ್ನು ಉಲ್ಲಂ ಸಿ ಕಟ್ಟಡ ನಿರ್ಮಾಣ ಮಾಡಿರುವುದನ್ನು ತೆರವುಗೊಳಿ ಸಲು ಸರ್ಕಾರದ ಸುತ್ತೋಲೆಯಲ್ಲಿ ನಿರ್ದೇಶನ ವಿದ್ದು, 10ರಿಂದ 15 ಮೀಟರ್‌ ಅಂತರದಲ್ಲೇ ಕಟ್ಟಡ ನಿರ್ಮಾಣ ಮಾಡಿರುವುದು ಸರ್ಕಾರದ ನಿಯಮಗಳ ಸ್ವಷ್ಟ ಉಲ್ಲಂಘನೆಯಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ 21 ಅಪಘಾತಗಳು ನಡೆದಿದ್ದು, ಇದಕ್ಕೆಲ್ಲ ರಸ್ತೆ ಕಿರಿದಾಗಿರುವುದೆ ಕಾರಣ.

ಇದನ್ನೂ ಓದಿ:- ಬಿಜೆಪಿ ಒಂದು ಹೆಜ್ಜೆ ಮುಂದು

ಕರ್ನಾಟಕ ಪುರಸಭಾ ಅದಿನಿಯಮ 1964ರ ಪ್ರಕಾರ ಪಟ್ಟಣದ ಶೇ.90ರಷ್ಟು ಕಟ್ಟಡಗಳನು ನಿಯಮ ಬಾಹಿರವಾಗಿ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿ ಸಿರುವುದು ಕಂಡುಬಂದಿದೆ. ಆದ್ದರಿಂದ, ಪುರಸಭೆ ವ್ಯಾಪ್ತಿಯ ಪರಿಮಿತಿಯೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಸರ್ಕಾರದ ಸುತ್ತೋಲೆಯನ್ವಯ ರಸ್ತೆಗಳ ಎರಡು ಬದಿಗಳಲ್ಲಿಯು 40 ಮೀಟರ್‌ ಅಗಲೀಕರಣಗೊಳಿಸ ಬೇಕು.

ಯೋಜನಾ ವರದಿ ಸಿದ್ಧಪಡಿಸಿ: ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ರಸ್ತೆಯ ಇಕ್ಕೆಲ್ಲಗಳಲಿರುವ ಎಲ್ಲ ಕಟ್ಟಡ ಮಾಲೀಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು, ರಸ್ತೆ ಅಗಲೀಕರಣದ ಸರ್ವೆ ನಡೆಸಿ, ಭೂ ಮಾಲೀಕತ್ವದ ಬಗ್ಗೆ ಖಾತರಿಪಡಿಸಿಕೊಂಡು ನಿಯಮಾನುಸಾರ ರಸ್ತೆ ಅಗಲೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಅಗಲೀಕರಣಗೊಳ್ಳಬೇಕಿರುವ ಸಕಲೇಶಪುರ ಮುಖ್ಯರಸ್ತೆ.

“ವರ್ತಕರ ವಲಯದಿಂದ ಜಿಲ್ಲಾಧಿಕಾರಿಗಳಿಗೆ ಮತ್ತೂಂದು ಮನವಿ ಸಲ್ಲಿಸಲಾಗುವುದು. ನಿಯಮ ಅನುಸಾರವಾಗಿ ಸರ್ಕಾರ ಭೂಮಿಯನ್ನು ಪಡೆದು ಪರಿಹಾರ ನೀಡಿ ತೆರವುಗೊಳಿಸಿದರೆ ನಮ್ಮ ತಕರಾರಿಲ್ಲ.” – ಷಾಪ್‌ ಲಿಂಗರಾಜ್‌, ವರ್ತಕರು

 “ಜಿಲ್ಲಾಧಿಕಾರಿ ಆದೇಶ ಅತ್ಯಂತ ಸಾರ್ವಜನಿಕ ವಲಯಕ್ಕೆ ಸಂತೋಷ ತಂದಿದ್ದು, ಇನ್ನು ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ವಿಳಂಬ ಮಾಡದೆ ರಸ್ತೆ ಅಗಲೀಕರಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು.” – ನಾರಾಯಣ ಆಳ್ವ, ಸಮಾಜಸೇವಕ

 “ವರ್ತಕರ ವಲಯದಿಂದ ಜಿಲ್ಲಾಧಿಕಾರಿಗಳಿಗೆ ಮತ್ತೂಂದು ಮನವಿ ಸಲ್ಲಿಸಲಾಗುವುದು. ನಿಯಮ ಅನುಸಾರವಾಗಿ ಸರ್ಕಾರ ಭೂಮಿಯನ್ನು ಪಡೆದು ಪರಿಹಾರ ನೀಡಿ ತೆರವುಗೊಳಿಸಿದರೆ ನಮ್ಮ ತಕರಾರಿಲ್ಲ.” – ಷಾಪ್‌ ಲಿಂಗರಾಜ್‌, ವರ್ತಕರು

 “ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಸೂಚಿರುವ ಎಲ್ಲ ಅಂಶಗಳನ್ನು ಪಾಲಿಸುವ ಮೂಲಕ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಶೀಘ್ರದಲ್ಲಿ ಸಭೆ ಕರೆಯಲಾಗುವುದು.” –ಪ್ರತೀಕ್‌ ಬಯಾಲ್‌, ಉಪವಿಭಾಗಾಧಿಕಾರಿ, ಸಕಲೇಶಪುರ ಉಪವಿಭಾಗ

 – ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

6-uv-fusion

UV Fusion: ಯುಗಾದಿ ಸಂಭ್ರಮೋತ್ಸವ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

5-uv-fusion

Yugadi: ವರುಷದ ಆದಿ ಯುಗಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.