ರೈಲು ಡಿಕ್ಕಿಯಾಗಿ ಆನೆಗಳ ಸಾವು
Team Udayavani, Jun 5, 2018, 6:10 AM IST
ಸಕಲೇಶಪುರ: ಗೂಡ್ಸ್ ರೈಲಿಗೆ ಅಡ್ಡ ಬಂದ ಎರಡು ಮರಿಯಾನೆಗಳು ಮೃತಪಟ್ಟಿರುವ ಘಟನೆ ತಾಲೂಕಿನ ಕಾಗಿನಹರೆ ಸಮೀಪ ನಡೆದಿದೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಗೂಡ್ಸ್ ರೈಲಿಗೆ ಸೋಮವಾರ ಬೆಳಗ್ಗಿನ ಜಾವ 71ನೇ ಮೈಲು ಸಮೀಪ ಎರಡು ಮರಿ ಆನೆಗಳು ಅಡ್ಡಬಂದಿವೆ. ಡಿಕ್ಕಿ ರಭಸಕ್ಕೆ ಅವು ಸ್ಥಳದಲ್ಲೇ ಮೃತಪಟ್ಟಿವೆ. ಇದರಿಂದ ರೈಲು ಸಂಚಾರಕ್ಕೆ ಕೆಲಕಾಲ ಅಡಚಣೆಯಾಗಿತ್ತು. ಮರಿಯಾನೆ ಜೊತೆಗೆ ಮತ್ತೂಂದು ಆನೆ ಮೃತಪಟ್ಟಿರುವ ಶಂಕೆ ಇದ್ದು, ಈ ಬಗ್ಗೆ ಪರೀಶೀಲನೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಆನೆ ಕಾರಿಡಾರ್ ನಿರ್ಮಾಣವಾದಲ್ಲಿ ಮಾತ್ರ ವನ್ಯಜೀವಿಗಳಿಗೆ ಹಾಗೂ ಜನಸಾಮಾನ್ಯರ ರಕ್ಷಣೆ ಸಾಧ್ಯ. ಜೊತೆಗೆ ರೈಲು ಹಳಿಗಳ ಎರಡು ಬದಿಯಲ್ಲೂ ಬೇಲಿ ಹಾಕಬೇಕೆಂಬ ಯೋಜನೆ ಇದ್ದರೂ ಇನ್ನು ಕಾರ್ಯಗತವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಇತ್ತೀಚೆಗಷ್ಟೇ ಬೆಳಗಾವಿಯ ಖಾನಾಪುರದಲ್ಲಿ ಆನೆಯೊಂದು ರೈಲಿಗೆ ಸಿಲುಕಿ ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿತ್ತು. ಇದಷ್ಟೇ ಅಲ್ಲ, ದೇಶದಲ್ಲಿ ರೈಲಿಗೆ ಸಿಲುಕಿ ಆನೆಗಳು ಸಾಯುವುದು ಅಸ್ಸಾಂನಲ್ಲಿ ಮಾಮೂಲಿನಂತಾಗಿದೆ. ಕಳೆದ ಎರಡು ವರ್ಷಗಳಲ್ಲೇ ಸುಮಾರು 11 ಆನೆಗಳು ಸಾವನ್ನಪ್ಪಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ