ಸಕಲೇಶಪುರ : ರೈಲು ಹಳಿಗಳ ಮೇಲೆ ಒಂಟಿಸಲಗ ಓಡಾಟ! ಜನರಲ್ಲಿ ಆತಂಕ
Team Udayavani, Mar 30, 2021, 8:10 PM IST
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಿರುಗಾಡಿ ಆತಂಕ ಮೂಡಿಸಿದ್ದ ಒಂಟಿ ಸಲಗ ಇದೀಗ ರೈಲು ಹಳಿಗಳ ಮೇಲೆ ತಿರುಗಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನಲ್ಲಿ ಸಲಗವೊಂದು ತಿರುಗಾಡುತ್ತಿದ್ದು, ವಕೀಲ್ ಎಂಬ ರಾಜಸ್ಥಾನ ಮೂಲದ ಲಾರಿಚಾಲಕನ ಸಾವಿಗೂ ಈ ಆನೆ ಕಾರಣವಾಗಿತ್ತು. ಇದೀಗ ಇದೇ ಆನೆ ರೈಲುಹಳಿಗಳ ಮೇಲೆ ತಿರುಗಾಡುತ್ತಿದೆ ಎಂದು ಹೇಳಲಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ.
ತಾಲೂಕಿನ ಕಡಗರಹಳ್ಳಿ ಸಮೀಪ 60/600 ಮೈಲುಗಲ್ಲಿನ ಹತ್ತಿರವಿರುವ ಸುರಂಗದಿಂದ ರಾಜಾರೋಷವಾಗಿ ಬರುವ ಕಾಡಾನೆ ರೈಲು ಸೇತುವೆ ಮೇಲೆ ಬಂದು ನಂತರ ಪಕ್ಕಕ್ಕೆ ಹೋಗಿದೆ. ಕಾಡಾನೆ ರೈಲು ಹಳಿಗಳ ಮೇಲೆ ಸಂಚರಿಸುವುದನ್ನು ಅಲ್ಲೇ ಇದ್ದ ಕೆಲವರು ದೂರದಿಂದ ವಿಡಿಯೊ ಮಾಡಿರುವುದು ವೈರಲ್ ಆಗಿದೆ. ಆನೆ ಸಂಚರಿಸುವ ವೇಳೆ ರೈಲು ಬಂದಲ್ಲಿ ಕಾಡಾನೆಗೆ ಅಪಾಯವಾಗುವ ಸಾಧ್ಯತೆಯಿದೆ. ಶಿರಾಡಿ ಘಾಟ್ನಲ್ಲಿ ತಿರುಗಾಡುತ್ತಿರುವ ಒಂಟಿಸಲಗ ಅರಣ್ಯ ಇಲಾಖೆಯವರಿಗೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ :ಮುಂಬೈ: ಕೋವಿಡ್ ನಿಯಮ ಉಲ್ಲಂಘಿಸಿ ಸಮುದ್ರ ಪ್ರವೇಶಿಸಿದ ಐವರಿಗೆ ‘ಕೋಳಿ ನಡಿಗೆ’ ಶಿಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ