“ಶುಂಠಿಗೆ ತಗಲುವ ರೋಗದ ಬಗ್ಗೆ ರೈತರು ಎಚ್ಚರವಹಿಸಿ”


Team Udayavani, Aug 26, 2017, 12:36 PM IST

ginger.jpg

ಬೇಲೂರು: ರೈತರು ಬೆಳೆಯುವ ಶುಂಠಿ ಬೆಳೆಯಲ್ಲಿ ಕೊಳೆ ಹಾಗೂ ಎಲೆ ಚುಕ್ಕಿ ರೋಗಗಳು ಇತ್ತೀಚಿಗೆ ಹೆಚ್ಚಾಗಿ ಕಂಡು ಬರುತ್ತಿದ್ದು ರೈತರು ಇದನ್ನು ಗಮನಹರಿಸಬೇಕು ಎಂದು ಕೃಷಿ ಮಹಾವಿದ್ಯಾಲಯ ತೋಟಗಾರಿಕೆ ವಿಭಾಗದ ವಿಜ್ಞಾನಿ ಡಾ.ಸುನೀತಾ ಹೇಳಿದರು. ತಾಲೂಕಿನ ಗೊರೂರು ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ, ಕಾರೆಕೆರೆ ವತಿಯಿಂದ ಆಯೋಜಿಸಿದ ಕೃಷಿ ಕಾರ್ಯನುಭವ ಶಿಬಿರದಡಿ ಕ್ಷೇತ್ರ ಭೇಟಿ ನಡೆಸಿ ಮಾತನಾಡಿ, ಶುಂಠಿ ಬೆಳೆಯಲ್ಲಿ ಕಂಡುಬರುವ ಕೊಳೆರೋಗ ಹತೋಟಿಗಾಗಿ ಎತ್ತರದ ಮಡಿಗಳನ್ನು ಮಾಡಬೇಕು ಹಾಗೂ ಆಳವಾದ ಬಸುಕಾಲುವೆ ತೆಗೆದು ಸುಲಭವಾಗಿ ನೀರು ಹರಿಯುವಂತೆ ನೋಡಿಕೊಳ್ಳಬೇಕು ಎಂದರು. ಶಿಲೀಂಧ್ರಗಳನ್ನು ಸಾಯಿಸಿ: ಬಿತ್ತನೆ ಮಾಡುವ ಮೊದಲು ಮ್ಯಾಂಕೋಜೆಬ್‌ ಅನ್ನು 4ಗ್ರಾಂ/ ಲೀ ನೀರಿಗೆ ಬೆರಸಿ ಬಿತ್ತನೆ ಶುಂಠಿಯನ್ನು ಅದ್ದಿ ತೆಗೆಯಬೇಕು. ರೋಗ ಕಂಡು ಬಂದಲ್ಲಿ ರೋಗದಿಂದ ಕೂಡಿರುವ ಶುಂಠಿಯನ್ನು ಬುಡದಿಂದ ಕಿತ್ತು, ಸುಡಬೇಕು, ಕಿತ್ತ ಜಾಗಕ್ಕೆ ತಾಮ್ರದ ಆಕ್ಸಿ ಕ್ಲೋರೈಡ್‌ 3ಗ್ರಾಂ ಮತ್ತು ರೆಡೋಮಿಲ್‌ 2ಗ್ರಾಂ/ ಲೀಟರ್‌ ನೀರಿಗೆ ಬೆರಸಿ ಬಸಿಯುವಂತೆ ಹುಯ್ಯಬೇಕು ಅಥವಾ ಬ್ಲೀಚಿಂಗ್‌ ಹುಡಿ ಚೆಲ್ಲುವುದರಿಂದ ಶಿಲೀಂಧ್ರಗಳು ಸತ್ತು ಹೋಗುತ್ತದೆ ಎಂದು ತಿಳಿಸಿದರು. ರೋಗ ಹತೋಟಿಗೆ ಕ್ರಮ: ಡಾ. ಉಮಾಶಂಕರ್‌
ಮಾತನಾಡಿ, ಶುಂಠಿಯಲ್ಲಿ ಬರುವ ಎಲೆಚುಕ್ಕಿ ರೋಗಕ್ಕೆ ಕಾರ್ಬೆಂಡೇಜಿಯಮ್‌ 2ಗ್ರಾಂ/ ಲೀಟರ್‌ ನೀರಿಗೆ ಬೆರಸಿ ಸಿಂಪಡಿಸುದಲ್ಲದೆ ಇತ್ತೀಚಿನ ದಿನಗಳಲ್ಲಿ ರೈತರು ಶುಂಠಿಯಲ್ಲಿ ಮಡಿ ಮುಚ್ಚಲು ಜೋಳದ ಕಾಂಡ ಬಳಸುತ್ತಿದ್ದು ಅದು ಒಳ್ಳೆಯದಲ್ಲ. ಜೋಳದ ಕಾಂಡವು ತಾನು ಕರಗಲು ಮಣ್ಣಿನಿಂದ ಹೆಚ್ಚು ಸಾರಜನಕವನ್ನು ಹೀರಿಕೊಳ್ಳುವುದರಿಂದ ಶುಂಠಿಯ ಬೆಳವಣಿಗೆ ಕುಂಟಿತವಾಗುತ್ತದೆ. ಆದರಿಂದ ಭತ್ತ, ರಾಗಿಯ ಹುಲ್ಲು, ಮರದ ಎಲೆ, ಕೊಂಬೆಯನ್ನು ಬಳಸುವುದರಿಂದ ಅದು ಕರಗಿದ ನಂತರ ಉತ್ತಮ ಗೊಬ್ಬರವಾಗುವುದಲ್ಲದೇ, ಕಳೆಗಳ ಹತೋಟಿಯಲ್ಲೂ ಯಶಸ್ವಿಯಾಗಬಹುದು ಎಂದರು. ಎಲೆ ಚುಕ್ಕಿ ರೋಗ: ಡಾ.ಅನಂತ್‌ ಕುಮಾರ್‌ ಮಾತನಾಡಿ, ಶುಂಠಿ ಬೆಳೆಯಲ್ಲಿ ಕೊಳೆ ರೋಗವು ಬಾರದಂತೆ ಎಲ್ಲಾ ಮುನ್ನೆಚ್ಚರಿಕೆಗಳು ತೆಗೆದುಕೊಂಡಿದ್ದು ಅಲ್ಲಲ್ಲಿ ಕೆಲವು ಕಬ್ಬಿಣದ ಕೊರತೆ ಮತ್ತು ಎಲೆ ಚುಕ್ಕಿ ರೋಗವು ಕಂಡುಬಂದಿದ್ದು ಮಾರುಕಟ್ಟೆಯಲ್ಲಿ ದೊರೆಯುವ ಜಿಂಜರ್‌ ಮಿಕ್ಸ್‌ ಪೋಷಕಾಂಶಗಳ ಮಿಶ್ರಣ ಅಥವಾ ಕಬ್ಬಿಣದ ಸಲ್ಫೇಟ್‌ 10-15 ಕೆ.ಜಿ./ಎಕರೆಗೆ ಬಳಸಬೇಕು ಎಂದು ಮಾಹಿತಿ ನೀಡಿದರು. ಡಾ.ಬಸವರಾಜು ಮಾತನಾಡಿ, ಮೆಣಸಿನಕಾಯಿಯಲ್ಲಿ ಎಲೆಚುಕ್ಕಿ ರೋಗ ಹಾಗೂ ಬೂದುರೋಗ ಹೆಚ್ಚಿನ ಹೊಲಗಳಲ್ಲಿ ಕಂಡುಬಂದಿದ್ದು ಈಗಾಗಲೇ ಕೊಯ್ಲು ಮುಗಿದಿದ್ದರಿಂದ ರೈತರಿಗೆ ಅವುಗಳ ತಡೆಗಟ್ಟುವಿಕೆ ಬಗ್ಗೆ ಮಾಹಿತಿ ನೀಡಲಾಯಿತು. ಈಶ್ವರ್‌ ಎಂಬವರ ಕಬ್ಬಿನ ಹೊಲದಲ್ಲಿ ಬಿಳಿ ಉಣ್ಣೆ ಕಂಡು ಬಂದಿದ್ದು ಇದು ಎಲೆಯಿಂದ ರಸ ಹೀರುವುದರಿಂದ ಎಲೆ ಅರಿಶಿಣ ಬಣ್ಣಕ್ಕೆ ತಿರುಗಿ, ಒಣಗುತ್ತದೆ. ಅಲ್ಲದೇ ಇವುಗಳು ಅಂಟು ದ್ರಾವಣ ಬಿಡುಗಡೆ ಮಾಡುವುದರಿಂದ ಅದರಲ್ಲಿ ಕಪ್ಪು ಬಣ್ಣದ ಶಿಲೀಂಧ್ರಗಳುಳೆದು ಗಿಡದ ದ್ವಿತಿಸಂಶ್ಲೇಷಣೆ ಕ್ರಿಯೆ ಕಡಿಮೆ ಮಾಡುತ್ತದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ಇದನ್ನು ಹತೋಟಿಗೆ ತರಲು ಕ್ಲೋರೋಪೈರಿಪಾಸ್‌ 2 ಮಿ.ಲೀ/ ಲೀಟರ್‌ ನೀರಿಗೆ ಅಥವಾ ಡೈಮೀಥೋವೇಟ್‌ 1.7 ಮಿ.ಲೀ/ ಲೀಟರ್‌ ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕೆಂದು ತಿಳಿಸಿದರು. ರೈತರು ಹಾಗೂ ಶಿಬಿರಾರ್ಥಿಗಳಾದ ಅಜಿತ್‌, ಕೀರ್ತಿರಾಜ್‌, ಸಿಬಾನಂದ್‌, ಶಿವಪ್ಪ, ವೀರೇಶ್‌, ಮಧು, ಶಫಾ°ಸ್‌, ಸುಷ್ಮಾ, ರಂಜಿತ, ಚೈತ್ರಾ ಇತರರು ಇದ್ದರು.

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.