ಗ್ಯಾಸ್ ರೀಪೀಲ್ಲಿಂಗ್ ವೇಳೆ ಬೆಂಕಿ: ಆಟೋ ಭಸ್ಮ
Team Udayavani, Apr 18, 2021, 2:48 PM IST
ಸಕಲೇಶಪುರ: ಆಟೋಗೆ ಗ್ಯಾಸ್ ತುಂಬುವಾಗಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಆಟೋಹಾಗೂ ಮನೆಯೊಂದಕ್ಕೆ ಹಾನಿಯಾಗಿರುವಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಅಗ್ರಹಾರ ಬಡಾವಣೆಯಚನ್ನಕೇಶವ (29) ಎಂಬ ಆಟೋ ಚಾಲಕ ತಮ್ಮಆಟೋಗೆ ಅನಿಲ ತುಂಬಿಸಿಕೊಳ್ಳಲುಕುಶಾಲನಗರ ಬಡಾವಣೆ 10ನೇ ವಾರ್ಡ್ನಲ್ಲಿಅಕ್ರಮವಾಗಿ ವ್ಯಕ್ತಿಯೋರ್ವರಿಂದ ಅನಿಲತುಂಬಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಬೆಂಕಿಹೊತ್ತಿಕೊಂಡ ಪರಿಣಾಮ ಆಟೋ ಬಹುತೇಕಸುಟ್ಟು ಹೋಗಿದೆ. ಮನೆಯೊಂದರ ಮುಂಭಾಗಭಾಗಶಃ ಹಾನಿಯಾದರೆ ಕೋಳಿಸಾವಿಗೀಡಾಗಿದೆ. ಅದೃಷ್ಟವಶಾತ್ ಆಟೋಚಾಲಕ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾನೆ.
ಸ್ಥಳೀಯರು ತಕ್ಷಣ ಬೆಂಕಿ ನಂದಿಸಿದ್ದರಿಂದಹೆಚ್ಚಿನ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆಆಗಮಿಸಿದ ನಗರ ಠಾಣೆ ಪಿಎಸ್ಐ ಬಸವರಾಜ್ ಚಿಂಚೋಳಿ ಈ ಕುರಿತು ಪರಿಶೀಲನೆ ಮಾಡಿನಗರ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಪಟ್ಟಣದಲ್ಲಿ ಆಟೋ ಅನಿಲತುಂಬಿಸುವ ಬಂಕ್ಗಳು ಇಲ್ಲದಿರುವುದರಿಂದಅಕ್ರಮವಾಗಿ ತಾಲೂಕಿನ ಕೆಲವರು ಅಡುಗೆಅನಿಲ ಸಿಲಿಂಡರ್ ಗಳ ಮುಖಾಂತರವಾಹನಗಳಿಗೆ ಹೆಚ್ಚಿನ ಬೆಲೆಗೆ ಗ್ಯಾಸ್ ತುಂಬಿಸುವ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಪಟ್ಟಣದಲ್ಲಿ ಬೆಂಕಿ ಆಕಸ್ಮಿಕವಾಗಿ ಸಾವುನೋವುಗಳು ಸಂಭವಿಸುವ ಮೊದಲು ಅಕ್ರಮವಾಗಿ ಅನಿಲ ತುಂಬಿಸುವವರ ವಿರುದ್ಧಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರುಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?