ಹಳೇಬೀಡಿನಲ್ಲಿ ಮೇವಿನ ಕೊರತೆ: ಪರದಾಟ
Team Udayavani, Jul 17, 2019, 12:11 PM IST
ಹಳೇಬೀಡು ಪಟ್ಟಣದ ಸಮೀಪದ ಬಂಡಾರಿಕಟ್ಟೆ ಬಳಿ ಇರುವ ಬಯಲು ರಂಗಮಂದಿರ ಬಳಿ ಮೇವು ಕೇಂದ್ರದಲ್ಲಿ ಮೇವುತುಂಬುತ್ತಿರುವ ರೈತರು.
ಹಳೇಬೀಡು: ಮುಂಗಾರು ಕೈಕೊಟ್ಟಿ ರುವ ಹಿನ್ನೆಲೆಯಲ್ಲಿ ಹೋಬಳಿಯಲ್ಲಿ ಮೇವಿನ ಕೊರತೆಯಾಗಿದ್ದು, ರೈತರು ಮೇವು ಪಡೆಯಲು ದಿನನಿತ್ಯ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕು ಆಡಳಿತ ಹೋಬಳಿಯ ನಾಡ ಕಚೇರಿಗಳ ಅಧಿಕಾರಿಗಳ ಮುಖಾಂತರ ಪ್ರತಿ ಹಳ್ಳಿಗಳ ರೈತರ ರಾಸುಗಳಿಗೆ ಪ್ರತಿನಿತ್ಯ ಪ್ರತಿನಿತ್ಯ ಐದು ಲಾರಿ ಮೇವನ್ನು ಐದು ಗ್ರಾಮ ಪಂಚಾ ಯಿತಿಗೆ ಒದಗಿಸುತ್ತಿದ್ದರೂ ಸಾಲುತ್ತಿಲ್ಲ.
2 ರೂ.ಗೆ ಕೇಜಿ ಮೇವು ವಿತರಣೆ: ತಾಲೂಕು ಆಡಳಿತ ದಿಂದ ತಲಾ ಐದು ಹೋಬಳಿಗೆ ಒಂದು ಮೇವು ಕೇಂದ್ರ ತರೆದಿದೆ. ರೈತರು ಹೊಂದಿರುವ ಪ್ರತಿ ರಾಸಿಗೆ ತಲಾ 5 ಕೇಜಿ ಮೇವನ್ನು ಹಳೇ ಬೀಡು, ಗೋಣಿಸೋಮನಹಳ್ಳಿ, ರಾಜನಶಿರಿಯೂರು, ಚಟಚಟ್ಟಿಹಳ್ಳಿ ಯಲಹಂಕ ಗ್ರಾಮ ಪಂಚಾಯಿತಿ ಗಳಿಗೆ ವಿತರಿಸಲಾಗುತ್ತಿದೆ.
ಒಂದೊಂದು ಗ್ರಾಪಂನಲ್ಲಿ ಬಹುತೇಕ ರೈತರೇ ಇದ್ದಾರೆ. ಒಂದೊಂದು ಕುಟುಂಬವು ಮೂರರಿಂದ ನಾಲ್ಕು ದನಕರುಗಳನ್ನು ಹೊಂದಿದ್ದು, ತಾಲೂಕು ಆಡಳಿತ ನೀಡುತ್ತಿರುವ ಮೇವು ಒಂದು ದಿನಕ್ಕೆ ಒಂದು ಗ್ರಾಮ ಪಂಚಾಯಿತಿಗೆ ಮಾತ್ರ ಸಾಕಾಗುತ್ತದೆ. ಹೀಗಾಗಿ ಮೇವು ಕೊರತೆ ಉಂಟಾಗಿ ದಿನವಿಡಿ ಮೇವಿಗಾಗಿ ರೈತರು ಕೆಲಸ ಕಾರ್ಯ ಬಿಟ್ಟು ಕಾಯ ಬೇಕಾಗಿದೆ.
ಐದು ಟನ್ ಮೇವು ಕೊರತೆ: ತಾಲೂಕಿ ನಾದ್ಯಂತ ಮುಂಗಾರು ಕೈಕೊಟ್ಟಿದ್ದು, ಸರಿಯಾಗಿ ಮಳೆಯಾಗದೇ ಬಿತ್ತನೆ ಕಾರ್ಯ ವಿಳಂಬವಾಗಿದೆ. ಮುಂದೆಯೂ ದನಕರುಗಳಿಗೆ ಮೆವು ಕೊರತೆ ಎದು ರಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ದಿನಿತ್ಯ ರೈತರು ಮೇವು ಪಡೆಯಲು ಬೆಳಗ್ಗೆ 8 ಗಂಟೆಗೆ ಮೇವು ವಿತರಣೆ ಕೇಂದ್ರಕ್ಕೆ ಬಂದು ಕಾದು ಕುಳಿತಿರುತ್ತಾರೆ. ಮೇವು ಕಡಿಮೆ ಬಂದಿರುವುದು ಗೊತ್ತಾದ ತಕ್ಷಣ ಮೇವು ಪಡೆಯಲು ದುಂಬಾಲು ಬಿದ್ದು ಮೇವಿಗಾಗಿ ಕಿತ್ತಾಡುವ ವಾತಾ ವರಣ ನಿರ್ಮಾಣವಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ 5 ಲಾರಿ ಮೇವು ಅಗತ್ಯವಾಗಿದೆ.
ಜಾನುವಾರುಗಳ ಅನುಕೂಲಕ್ಕಾಗಿ ತಾಲೂಕು ಆಡಳಿತ ಇನ್ನೂ ಎರಡು ತಿಂಗಳು ಮೇವು ವಿತರಣೆ ಮಾಡಬೇಕು ಎಂದು ಮಾಯಗೊಂಡನಹಳ್ಳಿ ರೈತರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mollywood: ಸೂಪರ್ ಹಿಟ್ ʼಪ್ರೇಮಲುʼ ಸೀಕ್ವೆಲ್ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ