ಕಳಪೆ ತೊಗರಿಬೇಳೆ ತಿರಸ್ಕರಿಸಲು ಜಿಪಂ ತೀರ್ಮಾನ
Team Udayavani, Jun 23, 2020, 6:24 AM IST
ಹಾಸನ: ಜಿಲ್ಲೆಗೆ ಅಕ್ಷರ ದಾಸೋಹ ಯೋಜನೆಯಡಿ ಸರಬರಾಜಾಗಿರುವ ತೊಗರಿಬೇಳೆ ಕಳಪೆಯಾಗಿದ್ದು, ಇದನ್ನು ತಿರಸ್ಕರಿಸಲು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.
ಶ್ವೇತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಎಚ್.ಡಿ ರೇವಣ್ಣ, ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಕಳಪೆ ಬೇಳೆಯ ವಿಷಯ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ತೊಗರಿ ಬೇಳೆಯ ಗುಣಮಟ್ಟ ಕಳಪೆ ಯಾಗಿರು ವುದರಿಂದ ತಿರಸ್ಕರಿಸಲಾಗಿದೆ ಎಂದರು.
ಸಭೆಗೆ ಆಗಮಿಸಿದ್ದ ಎಸ್.ಐ.ಆರ್.ಡಿ. ಸಂಪನ್ಮೂಲ ವ್ಯಕ್ತಿ ಗಣೇಶ್ ಪ್ರಸಾದ್ ಅವರು 15ನೇ ಹಣಕಾಸು ಆಯೋಗ ದಿಂದ ಬಿಡುಗಡೆಯಾಗಿರುವ ಅನುದಾನ ದಲ್ಲಿ ಜಿಪಂ ಗೆ ಶೇ.5, ತಾಪಂಗೆ ಶೇ.10 ಹಾಗೂ ಗ್ರಾಮ ಪಂಚಾಯಿತಿಗಳಿಗೆ ಶೇ. 85 ರಷ್ಟು ಹಂಚಿಕೆ ಮಾಡಬೇಕು ಎಂದರು. ಕಾಮಗಾರಿಗಳ ಯೋಜನಾ ಚಟುವಟಿಕೆಗಳ ಪಟ್ಟಿಯನ್ನು ನಿದಿಪಡಿಸಿದ ದಿನಾಂಕದೊಳಗೆ ಸಲ್ಲಿಸಬೇಕು ಎಂದರು.
ಶಾಸಕ ಎಚ್.ಡಿ ರೇವಣ್ಣ, ಶಿವ ಲಿಂಗೇ ಗೌಡ, ಸಿ.ಎನ್. ಬಾಲಕೃಷ್ಣ.ಲಿಂಗೇಶ್ ಮಾತನಾಡಿ, ಯೋಜನಾ ವೆಚ್ಚದ ನಿರ್ವಹಣೆಗೆ ನಿಯಮವನ್ನು ತಾಪಂ ಹಾಗೂ ಜಿ ಪಂ ಗಳಿಗೂ ಅನ್ವಯಿಸಬೇಕು ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ಶಾಸಕರಾದ ಲಿಂಗೇಶ್, ಎಚ್. ಕೆ.ಕುಮಾರಸ್ವಾಮಿ ಹಾಗೂ ಪ್ರೀತಂ ಜೆ.ಗೌಡ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ