ಕಾಮಗಾರಿಗೆ ಜಲ್ಲಿ, ಮರಳು ಕೊರತೆಯಾಗದಂತೆ ವ್ಯವಸ್ಥೆ ಮಾಡಿ: ರೇವಣ್ಣ
Team Udayavani, Apr 8, 2021, 3:32 PM IST
ಹಾಸನ: ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 102 ಕಲ್ಲು ಕ್ವಾರಿಗಳಿಗೆ ಲೈಸೆನ್ಸ್ ನೀಡಿದ್ದರೂ 82 ಮಾತ್ರ ನಡೆಯುತ್ತಿವೆ. 83 ಕಲ್ಲು ಕ್ರಷರ್ ಗಳಿಗೆ ಲೈಸೆನ್ಸ್ ನೀಡಿದ್ದರೂ 48 ಕ್ರಷರ್ ಗಳು ಮಾತ್ರ ನಡೆಯುತ್ತಿವೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಗಣಿಗಾರಿಕೆ ನಡೆಸದ ಮತ್ತು ಸ್ಥಗಿತವಾಗಿರುವ ಕ್ರಷರ್ ಗಳ ಲೈಸೆನ್ಸ್ ಏಕೆ ರದ್ದು ಮಾಡಿಲ್ಲ ಎಂದು ಪ್ರಶ್ನಿಸಿದರು.
ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿ ಕಲ್ಲೋಡೆಬೋರೆ ಕಾವಲ್ನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಮಾಜಿ ಸಚಿವ ಎ.ಮಂಜು ಮತ್ತು ತಾತನಹಳ್ಳಿ ಗ್ರಾಮಸ್ಥ ಯೋಗಾಚಾರ್ ಅವರ ದೂರಿನ ಮೇರೆ ತಾಲೂಕು ಆಡಳಿತ ಜಿಲ್ಲಾಧಿಕಾರಿಯವರಿಗೆ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಕ್ರಮ ಕೈಗೊಳ್ಳಬೇಕು. ಏತ ನೀರಾವರಿ ಯೋಜನೆಗೆ ತೊಂದರೆ ಆಗುವುದನ್ನು ತಡೆಯಬೇಕು ಎಂದು ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಸ್ಫೋಟಕಗಳ ಸಾಗಾಣೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದರು.
ಅಕ್ರಮ ಗಣಿಗಾರಿಕೆ ತಡೆಯುವ ಭರದಲ್ಲಿ ಜಿಲ್ಲಾಡಳಿತವು ಅಭಿವೃದ್ಧಿ ಕಾಮಗಾರಿಗಳಿಗೆ ಜಲ್ಲಿ, ಎಂ ಸ್ಯಾಂಡ್ ಕೊರತೆಯಾಗದಂತೆಯೂ ನೋಡಿಕೊಳ್ಳ ಬೇಕು. ಜಲ್ಲಿ ಮತ್ತು ಮರಳು ಕೊರತೆಯಿಂದ ಹೇಮಾವತಿ ಯೋಜನೆಯ ನಾಲೆಗಳ ಲೈನಿಂಗ್ ಕಾಮಗಾರಿ ಒಂದು ವಾರದಿಂದ ಸ್ಥಗಿತಗೊಂಡಿದೆ. ಜಿಲ್ಲಾಧಿ ಕಾರಿ ಮತ್ತು ಎಸ್ಪಿಯವರು ಕ್ರಷರ್ ಮಾಲೀಕರು ಹಾಗೂ ಎಂಜಿನಿಯರುಗಳ ಸಭೆ ಕರೆದು ಕಾಮಗಾರಿಗಳಿಗೆ ಸಾಮಗ್ರಿ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ ಮಳೆಗಾಲ ಆರಂಭವಾಗುವುದರೊಳಗೆ ನಾಲಾ ಲೈನಿಂಗ್ ಕಾಮಗಾರಿ ಮುಗಿಯಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’