ಎಚ್.ಡಿ.ರೇವಣ್ಣ ದುರ್ವರ್ತನೆ: ಆರೋಪ
Team Udayavani, May 31, 2021, 7:35 PM IST
ಸಕಲೇಶಪುರ: ಶುದ್ಧ ಕುಡಿಯುವ ನೀರನ್ನು ಕೇಳಿದಕ್ಕೆ ಅಲ್ಪಸಂಖ್ಯಾತ ಜನಾಂಗದಸಮಾಜ ಸೇವಕನೋರ್ವನಿಗೆ ಮಾಜಿ ಸಚಿವ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ರೇವಣ್ಣ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯಎಂದು ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಸಂಗಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಹಲವಾರುವರ್ಷಗಳಿಂದ ಪುರಸಭೆಯಲ್ಲಿ ಜೆಡಿಎಸ್ ಪಕ್ಷವೇ ಅಧಿಕಾರ ನಡೆಸುತ್ತಿದ್ದು, ಜೊತೆಗೆಕಳೆದ 13 ವರ್ಷಗಳಿಂದಲೂ ಶಾಸಕರಾಗಿ ಎಚ್.ಕೆ.ಕುಮಾರಸ್ವಾಮಿ ತಾಲೂಕಿನಲ್ಲಿಸೇವೆ ಸಲ್ಲಿಸುತ್ತಿದ್ದರೂ ಸಹ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ನೀಡಲುವಿಫಲರಾಗಿದ್ದಾರೆ.
ಕೊರೊನಾದಂತಹ ಮಾರಕ ರೋಗ ತಾಂಡವಾಡುತ್ತಿರುವಸಮಯದಲ್ಲಿ ಪಟ್ಟಣದ ಜನ ಅಶುದ್ಧ ನೀರು ಕುಡಿಯಬೇಕಾಗಿರುವುದುದುರಂತವಾಗಿದೆ. ಈ ಕುರಿತು ರೇವಣ್ಣ ಅವರಲ್ಲಿ ಇದ್ರೀಸ್ ಎಂಬ ಯುವಕ ಕೇಳಿದಕ್ಕೆದುರ್ವರ್ತನೆ ತೋರಿದ್ದಾರೆಂದು ದೂರಿದರು.
ಸಕಲೇಶಪುರ ಕ್ಷೇತ್ರದ ಬಗ್ಗೆಅವರಿಗೂ ಕಿಂಚತ್ತು ಕಾಳಜಿಯಿಲ್ಲ. ಸುಮ್ಮನೆ ಅದು ಕೊಟ್ಟಿದ್ದೇವೆ, ಇದು ಕೊಟ್ಟಿದ್ದೇವೆಎಂದು ಹೇಳುತ್ತಿದ್ದಾರೆ ಎಂದರು. ತಾ.ಪಂ ಮಾಜಿ ಸದಸ್ಯ ಸಿಮೆಂಟ್ ಮಂಜುನಾಥ್ಮಾತನಾಡಿದರು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್, ನಗರಅಧ್ಯಕ್ಷ ಉಮೇಶ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ