ತುರ್ತು ವಿಧಾನಸಭೆ ಅಧಿವೇಶನ ಕರೆಯಿರಿ


Team Udayavani, Jun 20, 2021, 8:53 PM IST

hasana news

ಹಾಸನ: ಕೊರೊನಾ 2ನೇ ಅಲೆ ನಿರ್ವಹಣೆಯಲ್ಲಿಮಾಡಿರುವ ವೆಚ್ಚ, 3ನೇ ಅಲೆ ಸಿದ್ಧತೆ ಬಗ್ಗೆ ಚರ್ಚೆಗೆವಿಧಾನಸಭಾ ಅಧಿವೇಶನ ಕರೆಯಬೇಕು ಎಂದುವಿಧಾನಸಭೆ ಸ್ಪೀಕರ್‌ ಮತ್ತು ಮುಖ್ಯಮಂತ್ರಿ ಅವರನ್ನುಜೆಡಿಎಸ್‌ ಮುಖಂಡ,ಮಾಜಿಸಚಿವಎಚ್‌.ಡಿ. ರೇವಣ್ಣ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿಮಾತನಾಡಿದಅವರು, ಮುಖ್ಯಮಂತ್ರಿ ಘೋಷಿಸಿರುವ ಪರಿಹಾರದ ಪ್ಯಾಕೇಜ್‌ಫ‌ಲಾನುಭವಿಗಳಿಗೆ ಇನ್ನೂ ತಲಪಿಲ್ಲ. ಕೊರೊನಾನಿರ್ವಹಣೆಗೆ ಗ್ರಾಪಂಗಳಿಗೆ 50 ಸಾವಿರ ರೂ.ಬಿಡುಗಡೆಮಾಡಿರುವುದಾಗಿ ಸಿಎಂ ಘೋಷಿಸಿದ್ದರೂ ಹಣ ಇದುವರೆಗೂ ತಲುಪಿಲ್ಲ. ಸರ್ಕಾರದಲ್ಲಿ ಹಣ ಇಲ್ಲದಿದ್ದರೂಸಿಎಂ ಜನರ ಕಣ್ಣೊರೆಸಲು ಪರಿಹಾರದ ಪ್ಯಾಕೇಜ್‌ಘೋಷಣೆ ಮಾಡಿದ್ದಾರೆ. ಸರ್ಕಾರದ ಆರ್ಥಿಕ ಸ್ಥಿತಿಗತಿಬಗ್ಗೆ ಜನರಿಗೆ ತಿಳಿಯಬೇಕಾಗಿದೆ.

ತುರ್ತಾಗಿ ವಿಧಾನಸಭೆ ಅಧಿವೇಶನ ಕರೆಯಬೇಕು. ವಿಧಾನಸಭೆಯವಿವಿಧ ವಿಷಯ ಸಮಿತಿಗಳ ಸಭೆ ನಡೆಸಲು ಸ್ಪೀಕರ್‌ಸೂಚನೆ ನೀಡಬೇಕು ಎಂದರು.

ಕೊರೊನಾ 2ನೇ ಅಲೆ ಎದುರಿಸಲು ಸರ್ಕಾರಪೂರ್ವ ಸಿದ್ಧತೆ ಮಾಡಿಕೊಳ್ಳದ ಪರಿಣಾಮ ಸಾವಿರಾರುಜನ ಬಲಿಯಾದರು. 3ನೇ ಅಲೆ ಎದುರಾಗುವುದರೊಳಗೆ ಸರ್ಕಾರ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಈನಿಟ್ಟಿನಲ್ಲಿ ವಿಧಾನಸಭೆ ಅಧಿವೇಶನ ಕರೆದು ಶಾಸಕರಸಲಹೆ ಪಡೆಯಲಿ ಎಂದೂ ಆಗ್ರಹಿಸಿದರು.

ದೂರುಗಳಿಗೆಲ್ಲಾ ಹೆದರಲ್ಲ: ಐಎಂಎ ದೌರ್ಜನ್ಯ ತಡೆಸಮಿತಿ ಅಧ್ಯಕ್ಷ ಪುತ್ತೂರಿನ ವೈದ್ಯ ಡಾ.ಗಣೇಶ್‌ ಪ್ರಸಾದ್‌ಮುದ್ರಜೆ ಎಂಬವರು ಪುತ್ತೂರು ಠಾಣೆಯಲ್ಲಿ ತಮ್ಮವಿರುದ್ಧ ದೂರು ದಾಖಲಿಸಿರುವ ಸಂಬಂಧಪ್ರತಿಕ್ರಿಯಿಸಿ, ಖಾಸಗಿ ಆಸ್ಪತ್ರೆಗಳ ವಸೂಲಿ, ಸುಲಿಗೆಮಾಡುತ್ತಿರುವುದನ್ನು ಜಿಲ್ಲಾಡಳಿತ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ನಾನೇ ಜನರ ಕಳುಹಿಸಿ ಹೊಡೆಸ್ತೀನಿ ಎಂದು ಎಚ್ಚರಿಕೆ ನೀಡಿದ್ದೆ. ನಾನು ಹೇಳಿದ್ದುಹಾಸನದ ಒಂದೆರಡು ಆಸ್ಪತ್ರೆಗಳ ವಿರುದ್ಧವೇ ಹೊರತು ಎಲ್ಲ ಖಾಸಗಿ ಆಸ್ಪತ್ರೆಗಳ ವಿರುದ್ಧವಲ್ಲ. ದೂರು ದಾಖಲುಮಾಡುವುದಿದ್ದರೆ ಹಾಸನದಲ್ಲಿ ಇಲ್ಲಿನ ವೈದ್ಯರ ಸಂಘದಮೂಲಕವೇ ದಾಖಲಿಸಬೇಕಾಗಿತ್ತು. ಪುತ್ತೂರಿನಲ್ಲಿದೂರು ನೀಡುವ ಅಗತ್ಯವೇನಿತ್ತು. ಇಂತಹ ದೂರುಗಳಿಗೆಲ್ಲ ನಾನು ಹೆದರಲ್ಲ ಎಂದು ಸ್ಪಷ್ಟಪಡಿಸಿದರು.

ಶಿವಮೊಗ್ಗದ ಮಾದರಿ ಹಾಸನ ಏರ್ಪೋರ್ಟ್ನಿರ್ಮಿಸಿ: ಶಿವಮೊಗ್ಗದ ವಿಮಾನ ನಿಲ್ದಾಣದ ಮಾದರಿಯಲ್ಲೇ ಹಾಸನದ ವಿಮಾನ ನಿಲ್ದಾಣವನ್ನೂ ನಿರ್ಮಿಸಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ 1250 ಕೋಟಿರೂ. ಯೋಜನೆ ರೂಪಿಸಿ ಟೆಂಡರ್‌ ಕರೆಯುವ ಸಿದ್ಧತೆಮಾಡಿದ್ದೆ. ಕಳೆದ2ವರ್ಷಗಳಿಂದ ಬಿಜೆಪಿ ಸರ್ಕಾರ ಈಯೋಜನೆ ತಡೆ ಹಿಡಿದಿತ್ತು. ಈಗ ಸಿಎಂ ಖುದ್ದಾಗಿವಿಮಾನ ನಿಲ್ದಾಣ ಕಾಮಗಾರಿ ಆರಂಭಿಸುವುದಾಗಿಹೇಳಿರುವುದು ಸ್ವಾಗತಾರ್ಹ. ಶಿವಮೊಗ್ಗದ ವಿಮಾನನಿಲ್ದಾಣದ ಮಾದರಿಯಲ್ಲೇ ಹಾಸನದ ವಿಮಾನನಿಲ್ದಾಣ ನಿರ್ಮಾಣ ಆಗಬೇಕು ಎಂಬುದು ನಮ್ಮಒತ್ತಾಯ.

ಈಗಾಗಲೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ಶಂಕುಸ್ಥಾಪನೆ ನೆರವೇರಿಸಿ  ಭೂಮಿಪೂಜೆ ಮಾಡಿದಾರೆ. ª ಹೀಗಾಗಿ ಈಗ ಶಂಕುಸ್ಥಾಪನೆಮಾಡುವ ಅಗತ್ಯವಿಲ್ಲ. ತ್ವರಿತವಾಗಿ ಕಾಮಗಾರಿಆರಂಭಿಸಲಿ ಎಂದು ಒತ್ತಾಯಿಸಿದರು.

 

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.