ಹಾಸನ ಜಿಲ್ಲಾ ಪಂಚಾಯ್ತಿ ಕ್ಷೇತ್ರ 40 ರಿಂದ 44ಕ್ಕೆ ಏರಿಕೆ

8 ತಾಪಂಗಳ ಕ್ಷೇತ್ರಗಳ ಸಂಖ್ಯೆ 153 ರಿಂದ 120ಕ್ಕೆ ಇಳಿಕೆ › ಜಿಪಂ, ತಾಪಂ ಕ್ಷೇತ್ರಗಳ ಪುನರ್‌ರಚನೆ ಬಹುತೇಕ ಪೂರ್ಣ

Team Udayavani, Feb 13, 2021, 4:27 PM IST

ಹಾಸನ ಜಿಲ್ಲಾ ಪಂಚಾಯ್ತಿ ಕ್ಷೇತ್ರ 40 ರಿಂದ 44ಕ್ಕೆ ಏರಿಕೆ

ಹಾಸನ: ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಅಧಿಕಾರಾವಧಿ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಆಯೋಗವು ಸಕಲ ಸಿದ್ಧತೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಪುನರ್‌ ವಿಂಗಡಣೆಗೆ ಮಾರ್ಗ ಸೂಚಿಗಳನ್ನು ಸಿದ್ಧಪಡಿಸಲು ಆಯಾ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು.

ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಆಧರಿಸಿ ಹಾಸನ ಜಿಲ್ಲಾಡಳಿತವು ಜಿಲ್ಲಾ ಮತ್ತುತಾಲೂಕು ಪಂಚಾಯ್ತಿ ಸಂಖ್ಯೆಯನ್ನು ನಿಗದಿಪಡಿಸಿದ್ದು, ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಸಂಖ್ಯೆ 40 ರಿಂದ 44ಕ್ಕೆ ಏರಿಕೆಯಾಗುತ್ತಿದೆ. ಜಿಲ್ಲೆಯ ಎಂಟು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಸಂಖ್ಯೆ 153 ರಿಂದ 120ಕ್ಕೆ ಇಳಿಯುತ್ತಿದೆ. ಪುನರ್‌ರಚಿತ ಕ್ಷೇತ್ರಗಳ ಗಡಿಗಳನ್ನು ಗುರುತಿಸಲಾಗುತ್ತಿದೆ. ಹಾಸನ ಜಿಲ್ಲಾ ಪಂಚಾಯ್ತಿಯ 44 ಕ್ಷೇತ್ರಮತ್ತು ತಾಲೂಕು ಪಂಚಾಯ್ತಿಯ 120 ಕ್ಷೇತ್ರಗಳ ಗಡಿ ಮತ್ತು ನಕಾಶೆಯನ್ನು ಸಿದ್ಧಪಡಿಸಿ ಫೆ.22 ರಂದು ಅಂಗೀಕರಿಸಲು ಚುನಾವಣಾ ಆಯೋಗವು ಸಭೆಯನ್ನು ನಿಗದಿಪಡಿಸಿದೆ.

ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು ಬೇಲೂರು ಮತ್ತು ಚನ್ನರಾಯಪಟ್ಟಣದಲ್ಲಿ ಹಿಂದಿದ್ದಷ್ಟೇ ಇವೆ. ಆದರೆ,ಹಾಸನ ತಾಲೂಕಿನಲ್ಲಿ ಒಂದು ಜಿಪಂ ಕ್ಷೇತ್ರ ಕಡಿಮೆಯಾಗಿದೆ. ಇನ್ನುಳಿದಂತೆ 5 ತಾಲೂಕುಗಳಲ್ಲಿಒಂದೊಂದು ಜಿಪಂ ಕ್ಷೇತ್ರ ಹೆಚ್ಚಳವಾಗಿದೆ. ತಾಪಂಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಸನ ನಗರಕ್ಕೆ ಹೊಂದಿಕೊಂಡ ಗ್ರಾಮಗಳು, ನಗರಸಭೆ ವ್ಯಾಪ್ತಿಗೆ ಸೇರಿದ್ದರಿಂದ ಹಾಸನ ತಾಲೂಕಿನಲ್ಲಿ ಒಂದು ಜಿಪಂ ಕ್ಷೇತ್ರ ಹಾಗೂ 10 ತಾಪಂ ಕ್ಷೇತ್ರಗಳು ಕಡಿಮೆಯಾಗಿವೆ. ಅರಸೀಕೆರೆ ತಾಪಂ ನಲ್ಲಿ 6 ಕ್ಷೇತ್ರ ಕಡಿಮೆಯಾಗಿದ್ದರೆ, ಹೊಳೆನಸೀಪುರ ತಾಪಂನಲ್ಲಿ 3 ಕ್ಷೇತ್ರ, ಚನ್ನರಾಯಪಟ್ಟಣ ತಾಪಂನಲ್ಲಿ 5 ಕ್ಷೇತ್ರ,ಸಕಲೇಶಪುರ ತಾಪಂನಲ್ಲಿ 2 ಕ್ಷೇತ್ರ, ಬೇಲೂರುತಾಪಂನಲ್ಲಿ 4 ಕ್ಷೇತ್ರ, ಅರಕಲಗೂಡು ತಾಪಂ ನಲ್ಲಿ 3 ಕ್ಷೇತ್ರಗಳು ಕಡಿಮೆಯಾಗಿವೆ.

ಜನಸಂಖ್ಯೆ ಆಧರಿಸಿ ಕ್ಷೇತ್ರ ರಚನೆ: 2011ರ ಜನಗಣತಿ ಆಧರಿಸಿ ಪ್ರತಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ 35ಸಾವಿರದಿಂದ 40 ಸಾವಿರ, ತಾಲೂಕು ಪಂಚಾಯ್ತಿ ಕ್ಷೇತ್ರವನ್ನು 12,500 ರಿಂದ 15 ಸಾವಿರ ಜನಸಂಖ್ಯೆಗೆ ಒಂದೊಂದು ಕ್ಷೇತ್ರವನ್ನು ನಿಗದಿಪಡಿಸಲಾಗುತ್ತಿದೆ. ಈಹಿಂದೆಯೂ 2011ರ ಜನಗಣಗತಿ ಆಧರಿಸಿ ಕ್ಷೇತ್ರಗಳ ಪುನರ್‌ರಚನೆಯಾಗಿತ್ತು. ಆದರೆ, ತಾಪಂ ಕ್ಷೇತ್ರಗಳ ಪೈಕಿ 33 ಕ್ಷೇತ್ರಗಳು ಕಡಿಮೆಯಾಗಿರುವುದು ಕುತೂಹಲ ಮೂಡಿಸಿದೆ. ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್‌ ರಚನೆ ಮಾಡಿ ಅಯಾಯ ತಾಲೂಕು ವ್ಯಾಪ್ತಿಯೊಳಗೇ ಗಡಿಗಳನ್ನು ನಿಗದಿಪಡಿಸಲು ಸೂಚಿಸಲಾಗಿದೆ.

ಯಾವುದಾದರೂ ಒಂದು ಕ್ಷೇತ್ರಕ್ಕೆ ಜನಸಂಖ್ಯೆ ತುಂಬಾ ಕಡಿಮೆ ಇದ್ದರೆ ಆ ಕ್ಷೇತ್ರದ ಗಡಿಗೆ ಹೊಂದಿ ಕೊಂಡಂತಿರುವ ಪಕ್ಕದ ತಾಲೂಕಿನ ಒಂದು ಗ್ರಾಮ ಪಂಚಾಯ್ತಿಯನ್ನು ಸಂಪೂರ್ಣವಾಗಿ ಸೇರಿಸಿಕೊಂಡು, ಕ್ಷೇತ್ರ ಪುನರ್‌ರಚಿಸಬೇಕು. ಅಯಾಯ ಜಿಪಂ,ತಾಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಗ್ರಾಮದ ಹೆಸರನ್ನೇ ಕ್ಷೇತ್ರಕ್ಕೆ ನಮೂದಿಸಬೇಕು ಎಂದು ಚುನಾವಣಾ ಆಯೋಗವು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಪುನರ್‌ರಚಿತ ಹೊಸ ಜಿಪಂ ಕೆ Òàತ್ರಗಳು ಹಾಗೂ ತಾಪಂ ಕ್ಷೇತ್ರಗಳ ಸ್ಪಷ್ಟ ಚಿತ್ರಣ ಫೆ.22ರ ವೇಳೆಗೆ ಸಿಗಲಿದೆ. ಏಕೆಂದರೆ ಅಷ್ಟರೊಳಗೆ ಜಿಲ್ಲಾಡಳಿತ ಕ್ಷೇತ್ರಗಳನ್ನು ಪುನರ್‌ರಚಿಸಿ, ಪೂರ್ಣ ದಾಖಲಾತಿಗಳೊಂದಿಗೆ ಚುನಾವಣಾಆಯೋಗದ ಸಭೆಗೆ ಮಂಡಿಸಬೇಕಾಗಿದೆ. ಹಾಗಾಗಿಡೀಸಿ ಕಚೇರಿಯ ಚುನಾವಣಾ ಶಾಖೆಯು ಕ್ಷೇತ್ರಗಳ ಪುನರ್‌ ರಚನೆಯಲ್ಲಿ ನಿರತವಾಗಿದೆ.

 

ಜಿಪಂ ಕ್ಷೇತ್ರಗಳ ತಾಲೂಕುವಾರು ವಿವರ :

 

ತಾಲೂಕು        ಪ್ರಸ್ತುತ      ಮುಂದೆ

ಆಲೂರು             2               3

ಅರಕಲಗೂಡು     5               6

ಅರಸೀಕೆರೆ           7                8

ಬೇಲೂರು           5               5

ಚನ್ನರಾಯಪಟ್ಟಣ 7               7

ಹಾಸನ               7               6

ಹೊಳೆನರಸೀಪುರ  4              5

ಸಕಲೇಶಪುರ        3              4

ಒಟ್ಟು               40              44

 

ಜಿಲ್ಲೆಯ 8 ತಾಪಂನ ಕ್ಷೇತ್ರಗಳ ವಿವರ :

 

ತಾಲೂಕು              ಪ್ರಸ್ತುತ        ಮುಂದೆ

ಆಲೂರು                11                  11

ಅರಕಲಗೂಡು       19                   16

ಅರಸೀಕೆರೆ             27                   21

ಬೇಲೂರು            17                   13

ಚನ್ನರಾಯಪಟ್ಟಣ  25                   20

ಹಾಸನ                27                   17

ಹೊಳೆನರಸೀಪುರ ‌ 16                  13

ಸಕಲೇಶಪುರ        11                 09

ಒಟ್ಟು               153                 120

 

ಎನ್‌.ನಂಜುಂಡೇಗೌಡ

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್‌ಡಿಡಿ

BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್‌ಡಿಡಿ

Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ

Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ

13

Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್‌ಗೆ ಲಾಭ? 

Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್‌ ರೇವಣ್ಣ ಪ್ರಚಾರಕ್ಕೆ ಚಾಲನೆ

Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್‌ ರೇವಣ್ಣ ಪ್ರಚಾರಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.