ಅರೆಮಲೆನಾಡ ಹಚ್ಚ ಹಸಿರಾಗಿಸಿದ ಹೇಮೆ


Team Udayavani, Oct 14, 2020, 4:03 PM IST

hasan-tdy-2

ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ, ಕಸಬಾ ಹಾಗೂ ದಂಡಿಗನಹಳ್ಳಿ ಹೋಬಳಿಯ ನೂರಾರುಎಕರೆ ಕೃಷಿ ಭೂಮಿಯನ್ನು ಹಚ್ಚ ಹಸಿರಾಗಿಸಿರುವ ಹೇಮಾವತಿ ಜಲಾಶಯದ ನೀರು, ರೈತರ ಮೊಗದಲ್ಲಿ ಸಂಭ್ರಮತರಿಸಿದೆ.

ಕಳೆದ ವರ್ಷ ಹೊರತು ಪಡಿಸಿದರೆ, ನಾಲ್ಕು ವರ್ಷ ದಿಂದತಾಲೂಕಿನಲ್ಲಿ ಬರಗಾಲ ಆವರಿಸಿತ್ತು. ಹೇಮಾವತಿ ಅಣೆಕಟ್ಟೆ ನೀರನ್ನುಕೃಷಿಗೆ ಬಳಸದಂತೆ ನೀರಾವರಿ ಇಲಾಖೆಕಟ್ಟುನಿಟ್ಟಿನ  ಆದೇಶ ನೀಡಿತ್ತು. ಪ್ರಸಕ್ತ ವರ್ಷ ಮಳೆ ತಡವಾಗಿ ಆರಂಭ ವಾದ್ರೂ ವಾರದಲ್ಲೇ ಹೇಮಾವತಿ ಜಲಾಶಯ ಸಂಪೂರ್ಣ ಭರ್ತಿಯಾಗಿ ಒಂದು ಲಕ್ಷ ಕ್ಯೂಸೆಕ್‌ ನೀರು ನದಿಗೆ ಹರಿಸಲಾಗಿದೆ. ಪರಿಣಾಮ, ತೀರದ ಗ್ರಾಮಗಳು, ಕೃಷಿ ಭೂಮಿ ನೆರೆಗೆ ತುತ್ತಾಗುವಂತಾಯಿತು.

ಝುಳು ಝುಳು ನಿನಾದ: ಪೂರ್ವ ಮುಂಗಾರು ಕೈ ಕೊಟ್ಟಾಗ ತಾಲೂಕಿನಲ್ಲಿ ಬರಗಾಲ ಆವರಿಸಲಿದೆ ಎಂದುಕೊಂಡಿದ್ದ ರೈತರು, ಈಗ ಸಂತೃಪ್ತಗೊಂಡಿದ್ದಾರೆ. ಉತ್ತಮಮಳೆಯಿಂದ ಹೇಮಾವತಿ ಜಲಾಶಯ ತುಂಬಿ ಎಡದಂಡೆ ನಾಲೆಯ ಭಾಗದ ಕೃಷಿ ಚಟುವಟಿಕೆಗೆ ನೀರುಹರಿಸಲು ಇಲಾಖೆಯು ಕಳೆದ ವರ್ಷದಿಂದ ಅವಕಾಶ ಮಾಡಿಕೊಟ್ಟಿದೆ. ಮುಖ್ಯ ನಾಲೆಯಿಂದ ಸಣ್ಣ ನಾಲೆಗಳಲ್ಲಿ ಝುಳು ಝುಳು ನಿನಾದ ಕೇಳಿ ಬರುತ್ತಿದೆ. ಮಲೆ ನಾಡನ್ನು ನಾಚಿಸುವ ಮಟ್ಟಿಗೆ ಅರೆ ಮಲೆನಾಡಿನಲ್ಲಿ ಹಸಿರುಕಂಗೊಳಿಸುತ್ತಿದೆ.

ಬೇಸಿಗೆಯಲ್ಲಿ ನೀರು ಹರಿಯದೆ ಸೂರ್ಯನ ತಾಪಕ್ಕೆ ಕಾದ ಕಾವಲಿಯಂತಾಗಿದ್ದ ಗದ್ದೆಗಳು ಈತ ತಂಪಾಗಿವೆ,ಬಾಗೂರು ಹೋಬಳಿಯಲ್ಲಿ ಕಾರೇಹಳ್ಳಿ ಹಾಗೂ ಓಬಳಾಪುರ ಗ್ರಾಮದಲ್ಲಿ ಹೇಮಾವತಿ ನಾಲೆಯಿಂದ ಏತ ನೀರಾವರಿ ಯಂತ್ರಗಳು ಹಗಲಿರುಳು ನೀರೆತ್ತುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಇದರಿಂದ ಆ ಭಾಗದ ಕೆರೆಕಟ್ಟೆತುಂಬಿ, ಅಂತರ್ಜಲ ವೃದ್ಧಿ ಆಗಿದೆ. ಇನ್ನು ಬಾಗೂರು ಕೆರೆ ಸಂಪೂರ್ಣ ಭರ್ತಿಯಾಗುವ ಮಟ್ಟಕ್ಕೆ ತಲುಪಿದೆ. ಕುರು ವಂಕ ಗ್ರಾಮದ ಕೆರೆಯೂ ಭರ್ತಿಯಾಗುವ ಲಕ್ಷಣಗಳು ಕಾಣುತ್ತಿವೆ.

ಮನೆ ತುಂಬಲಿದೆ ಬೆಳೆ: ಹಲವು ವರ್ಷದಿಂದ ಬತ್ತಿದ್ದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಇದರಿಂದ ರೈತರು ಹರ್ಷರಾಗಿದ್ದಾರೆ.ಕಳೆದ15 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ತೆಂಗಿನ ತೋಟದಲ್ಲಿ ನೀರು ನಿಂತಿದೆ. ರೈತರು ಕೊಳವೆ ಬಾವಿ ನೀರನ್ನು ಬಳಕೆ ಮಾಡುತ್ತಿಲ್ಲ, ನಾಲೆ ಭಾಗವನ್ನು ಹೊರತು ಪಡಿಸಿ, ಕೊಳವೆ ಬಾವಿ ನೀರನ್ನು ನಂಬಿರುವ ರೈತರು ಬಾಳೆ, ತರಕಾರಿ, ಮೆಕ್ಕೆಜೋಳ, ರಾಗಿ ಬೆಳೆದಿದ್ದಾರೆ. ಏತ ನೀರಾವರಿ ಭಾಗದಗ್ರಾಮಗಳಲ್ಲಿ ಈ ಬಾರಿ ಉತ್ತಮ ಬೆಳೆ ಆಗಿ ದವಸ ಧಾನ್ಯ ವನ್ನು ಮನೆ ತುಂಬಿಕೊಳ್ಳಲು ರೈತರು ಕಾತರದಿಂದ ಕಾಯುತ್ತಿದ್ದಾರೆ.

ನುಗ್ಗೇಹಳ್ಳಿ ಏತ ನೀರಾವರಿಗೆ ಚಾಲನೆ: ಯಡಿಯೂರಪ್ಪ ಈ ಹಿಂದೆ ಸಿಎಂ ಆಗಿದ್ದಾಗ ನುಗ್ಗೇಹಳ್ಳಿ ಏತನೀರಾವರಿ ಚಾಲನೆ ನೀಡಲಾಗಿತ್ತು. ಹಲವು ಎಡರು ತೊಡರುಗಳ ನಡುವೆ ಕುಟುಂತ ಸಾಗಿದ್ದ ಕಾಮಗಾರಿ ಈಗ ಪೂರ್ಣ ಗೊಂಡಿದ್ದು, 33 ಕ್ಯೂಸೆಕ್‌ ನೀರು ಹೇಮಾವತಿ ನಾಲೆಯಿಂದ ನುಗ್ಗೇಹಳ್ಳಿ ಹೋಬಳಿ 36 ಕೆರೆಗಳಿಗೆ ಹರಿಯುತ್ತಿದ್ದು, ಈಗಾಗಲೆ ಪ್ರಯೋಗಿಕವಾಗಿ ಚಾಲನೆ ನೀಡಲಾಗಿದೆ.

ತುಮಕೂರು, ಮಂಡ್ಯಕ್ಕೆ ಹೆಚ್ಚು ನೀರು :  ಹೇಮಾವತಿ ಅಣೆಕಟ್ಟೆ ಹೊಂದಿರುವ ಹಾಸನ ಜಿಲ್ಲೆಗೆ ಹೋಲಿಸಿದರೆ ತುಮಕೂರು ಹಾಗೂ ಮಂಡ್ಯ ಜಿಲ್ಲೆಗೆ ಹೆಚ್ಚು ಉಪಯೋಗವಾಗುತ್ತಿದೆ, ಆ.8 ರಿಂದ ಹೇಮಾವತಿ ಎಡದಂಡೆ ನಾಲೆಯಲ್ಲಿ ನಿತ್ಯ ನೀರು ಹರಿಯುತ್ತಿದ್ದು, ತುಮಕೂರಿಗೆ2,069ಕ್ಯೂಸೆಕ್‌, ಮಂಡ್ಯಕ್ಕೆ1,041 ಕ್ಯೂಸೆಕ್‌ ನೀರು ನಿರಂತರವಾಗಿ ಹರಿಯುತ್ತಿದೆ. ಡಿಸೆಂಬರ್‌ ಅಂತ್ಯದವರೆಗೆ ನಿತ್ಯವೂ3,110 ಕ್ಯೂಸೆಕ್‌ ನೀರು ಈ ಎರಡು ಜಿಲ್ಲೆಗೆ ಹರಿಯಲಿದೆ.

ಏತ ನೀರಾವರಿಯಿಂದ ಕೃಷಿಆರಂಭ :  ಹೇಮಾವತಿ ನಾಲೆಯಿಂದ ಬಾಗೂರು ಹಾಗೂ ಓಬಳಾಪುರ ಏತನೀರಾವರಿ ಯೋಜನೆಯಿಂದ58ಕ್ಯೂಸೆಕ್‌ ನೀರು ಹರಿದು5 ಸಾವಿರ ಎಕರೆಕೃಷಿ ಭೂಮಿಗೆ ಅನುಕೂಲವಾಗಿದೆ.ಕಾರೇಹಳ್ಳಿ ಏತನೀರಾವರಿಯಿಂದ58ಕ್ಯೂಸೆಕ್‌ ನೀರು ಹರಿದು5 ಸಾವಿರಕೃಷಿ ಭೂಮಿಗೆ ನೀರು ಒದಗಿಸಲಾಗುತ್ತಿದೆ. ಆ ಭಾಗದ ರೈತರು ಪ್ರಸಕ್ತ ಸಾಲಿನಿಂದಲೇಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

ಹೇಮಾವತಿ ಜಲಾಶಯದಅಚ್ಚು ಕಟ್ಟು ಪ್ರದೇಶ :  ಹೇಮಾವತಿ ಎಡದಂಡೆ ನಾಲೆ ಹಾದುಹೋಗುವ ಪ್ರದೇಶದಲ್ಲಿ ಶ್ರವಣಬೆಳಗೊಳ, ದಂಡಿಗನಹಳ್ಳಿ ಹಾಗೂ ಕಸಬಾ ಹೋಬಳಿಯಿಂದ19,400 ಎಕರೆ ಅಚ್ಚುಕಟ್ಟು ಪ್ರದೇಶವಿದ್ದರೆ, ಶ್ರೀರಾಮದೇವರ ನಾಲೆ ಹಾದು ಹೋಗಿರುವ ದಂಡಿಗನಹಳ್ಳಿ ಹೋಬಳಿ ಹಾಗೂ ಮಂಡ್ಯ ಜಿಲ್ಲೆಕಿಕ್ಕೇರಿ ಹೋಬಳಿ ಭಾಗದಲ್ಲಿ6,700 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಸಕ್ತ ವರ್ಷ ರೈತರು ಭತ್ತ ನಾಟಿ ಮಾಡಿದ್ದಾರೆ.

‌ಪ್ರಸಕ್ತ ವರ್ಷ ಉತ್ತಮವಾಗಿ ಮಳೆಯಾಗಿದೆ.ಹೇಮವತಿ ಅಣೆಕಟ್ಟುಭರ್ತಿಯಾಗಿದೆ. ಹಾಗಾಗಿ ಮುಂಗಾರಿನ ವೇಳೆ ರೈತರುಭತ್ತಬೇಸಾಯ ಮಾಡಲು ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆ ಕಟ್ಟೆ ತುಂಬಿಸಲಾಗುತ್ತಿದೆ. ರಂಗೇಗೌಡ, ತಾಂತ್ರಿಕ ವಿಭಾಗ, ಕಾವೇರಿ ನೀರಾವರಿ ನಿಗಮ.

ಹೇಮಾವತಿ ನಾಲೆಯಿಂದ ಕೃಷಿ ಚಟುವಟಿಕೆಗೆ ಸಕಾಲಕ್ಕೆ ನೀರು ಪೂರೈಸುತ್ತಿರುವುದರಿಂದ ಭತ್ತದಬೆಳೆ ಉತ್ತಮವಾಗಿದೆ. ಕೋವಿಡ್ ವೇಳೆ ಮನೆಯಲ್ಲಿ ಕುಳಿತು ಸೋಮಾರಿಗಳಾಗಿದ್ದರು. ನಾಲೆಗೆ ನೀರು ಹರಿಸಿದ್ದರಿಂದ ಮನೆಗೆಬೇಕಾದಷ್ಟು ಭತ್ತ, ಇತರೆಬೆಳೆಬೆಳೆದುಕೊಳ್ಳಲು ಅನುಕೂಲವಾಗಿದೆ. ಪುನೀತ್‌ ರಘುಸ್ವಾಮಿ, ರೈತ, ಚಿಕ್ಕಬಿಳತಿ ಗ್ರಾಮ.

 

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.