ಹೊಸೂರು ಕೊಪ್ಪಲು ಮುಖ್ಯ ರಸ್ತೆ ಕೆಸರು ಗದ್ದೆ
ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ; ಸ್ಥಳೀಯರಿಗೆ ನಿತ್ಯ ಸಂಕಷ್ಟ
Team Udayavani, Aug 22, 2021, 4:30 PM IST
ಆಲೂರು: ಮಾತೆತ್ತಿದರೆ ಆ ರಸ್ತೆಗೆ ಅಷ್ಟು ಕೋಟಿ ಈ ರಸ್ತೆಗೆ ಇಷ್ಟು ಕೋಟಿ ಎನ್ನುವ ಜನಪ್ರತಿನಿಧಿಗಳು ಒಂದು ಬಾರಿ ಕೆ. ಹೊಸಕೋಟೆ ಹೋಬಳಿ ಕಡೆ ಕಣ್ಣು ಹಾಯಿಸಿದರೆ ಕೆಸರುಮಯವಾದ ಗುಂಡಿ ಬಿದ್ದ ರಸ್ತೆಗಳೇ ಕಣ್ಣು ಮುಂದೆ ಬರುತ್ತವೆ.
ಸಾಕಷ್ಟು ಉದಾಹರಣೆ: ಹೋಬಳಿ ವ್ಯಾಪ್ತಿಯ ಮಗ್ಗೆ ಗ್ರಾಪಂಗೆ ಸೇರಿದ ಹೊಸೂರು ಕೊಪ್ಪಲು ಗ್ರಾಮ ಮುಖ್ಯ ರಸ್ತೆ ಸೇರಿ ಕೆಲವು ಗ್ರಾಮದ ರಸ್ತೆ ಗಳು ಸ್ವಲ್ಪ ಮಳೆಯಾದರೆ ಸಾಕು ಕೆಸರುಗದ್ದೆಯಂತಾಗುತ್ತವೆ. ಡಾಂಬರಿಕರಣ ಕಾಣದೆ ರಸ್ತೆಗಳು ಭಾರೀ ಪ್ರಮಾಣದಲ್ಲಿ ಹದಗೆಟ್ಟಿದ್ದು ಇದು ರಸ್ತೆಯೇ ಎಂಬ ಸಂದೇಹ ಜನಸಾಮಾನ್ಯರಲ್ಲಿ ಮೂಡುತ್ತಿದೆ. ರಾತ್ರಿ ವೇಳೆ ಗುಂಡಿಗಳು ಕಾಣದೆ ಎಷ್ಟೋ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಈ ಮಾರ್ಗದಲ್ಲಿ ಓಡಾಡುವ ಜನ ಜೀವ ಕೈಯಲ್ಲಿಡಿದು ಓಡಾಡುವಂತಾಗಿದೆ.
ಕೂಡಲೇ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ವಾಹನ ಸವಾರರು ಮತ್ತು ಪಾದಚಾರಿಗಳು ಸ್ಥಳೀಯ ಆಡಳಿತಕ್ಕೆ ಹಲವು ಬಾರಿ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಮಟ್ಟ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಜನಸಾಮಾನ್ಯರಿಗೆ ಹಲವು ಅನುಮಾನ ಮೂಡುವಂತಾಗಿದೆ.
ಇದನ್ನೂ ಓದಿ:ನದಿ ನೀರು ವಿಚಾರವಾಗಿ ಪರಿಹಾರ ಸಾಧ್ಯವಾಗದಿದ್ದರೆ ಜೆಡಿಎಸ್ ನಿಂದ ಹೋರಾಟ: ದೇವೇಗೌಡ
ಕಾಡಾನೆಗಳ ಉಪಟಳವೂ ಹೆಚ್ಚಳ: ಬೇಡದ ವಿಷಯಕ್ಕೆ ಬೊಬ್ಬೆ ಹೊಡೆಯುವ ಜನಪ್ರತಿನಿಧಿಗಳು ಸಂಘಟನೆಗಳು, ರಾಜಕೀಯ ಪಕ್ಷದ ಮುಖಂಡರು, ಹದಗೆಟ್ಟ ರಸ್ತೆಗಳ ವಿಷಯದಲ್ಲಿ ಮೌನವಷ್ಟೇ ಅಲ್ಲ ಜಾಣ ಕುರುಡುತನವನ್ನು ಪ್ರದರ್ಶನ ಮಾಡುತ್ತಾರೆ. ಕೆ.ಹೊಸಕೋಟೆ ಹೋಬಳಿ ಭಾರತದಲ್ಲಿ ಶೇ.60 ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದುಈಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು ಅವುಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.
ತಾಲೂಕು ಆಡಳಿತಕ್ಕೆ ತಿಳಿಸಿದ್ದರೂ ಪ್ರಯೋಜನವಿಲ್ಲ
ಹಲವು ವರ್ಷಗಳಿಂದ ಹದಗೆಟ್ಟ ರಸ್ತೆ ಬಗ್ಗೆ ಹೋಬಳಿ ಮಟ್ಟದ ರೈತ ಸಂಘತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೂ ಇದುವರೆಗೂ ಗಮನ ಹರಿಸಿಲ್ಲ. ಈ ಭಾಗದ ಜನ ಒಂದು ಕಡೆಕಾಡಾನೆಯಿಂದ ಇನ್ನೊಂದೆಡೆ ಹದಗೆಟ್ಟ ರಸ್ತೆಯಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಮೂಲಕ ಮೂಲಭೂತ ಸೌಕರ್ಯ ಪಡೆಯಬೇಕಾದ ಪರಿಸ್ಥಿತಿ ಇದೆ ಎಂದು ಕೆ.ಹೊಸಕೋಟೆ ಹೋಬಳಿ ರೈತಸಂಘದ ಮುಖಂಡರಾದ ಜಯಣ್ಣ ಹೈದೂರು ತಿಳಿಸಿದ್ದಾರೆ.
ಕೆಲವು ರಸ್ತೆಗಳ ಬಗ್ಗೆ ಹಲವು ದೂರು ಬಂದಿದ್ದು ಮಳೆ ನಿಂತ ತಕ್ಷಣ ರಸ್ತೆಗಳ ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು, ಗ್ರಾಪಂ ಸಭೆಯಲ್ಲಿ ಸದಸ್ಯರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
– ಶಿವಲಿಂಗಪ್ಪ, ಪಿಡಿಒ, ಮಗ್ಗೆ ಗ್ರಾಪಂ
– ಟಿ.ಕೆ.ಕುಮಾರಸ್ವಾಮಿ ಆಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ