ಐಐಟಿಗೆ ಸ್ವಾಧೀನವಾಗಿದ್ದ ಪ್ರದೇಶದಲ್ಲಿ ವಸತಿ ಬಡಾವಣೆ
Team Udayavani, Jul 23, 2021, 6:44 PM IST
ಹಾಸನ: ನಗರ ಹೊರ ವಲಯ ಕೈಗಾರಿಕಾಭಿವೃದ್ಧಿಕೇಂದ್ರಕ್ಕೆ ಹೊಂದಿಕೊಂಡಂತೆ ಐಐಟಿ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಸ್ಥಾಪನೆಗೆ ಒಂದು ದಶಕದ ಹಿಂದೆ ಸ್ವಾಧೀನಪಡಿಸಿಕೊಂಡಿದ್ದ 1,513 ಎಕರೆಭೂಮಿಯನ್ನು ನಿವೇಶನವಾಗಿ ಮಾರ್ಪಡಿಸಲುತೀರ್ಮಾನಿಸಲಾಗಿದೆ.
ಈ ಬೆಳವಣಿಗೆಯಿಂದಾಗಿಹಾಸನದ ಐಐಟಿ ಅಥವಾ ಉನ್ನತ ಶಿಕ್ಷಣದ ಕನಸುನುಚ್ಚು ನೂರಾಗಿದೆ.ಭೂ ಮಾಲೀಕರ ಸಮ್ಮತಿ: ಗವೇನಹಳ್ಳಿಯಸಮುದಾಯ ಭವನದಲ್ಲಿ ಗುರುವಾರ ಶಾಸಕಪ್ರೀತಂ ಜೆ.ಗೌಡ ಅವರ ಸಮ್ಮುಖದಲ್ಲಿ ನಡೆದಕೆಐಎಡಿಬಿ ಹಿರಿಯ ಅಧಿಕಾರಿಗಳು ಮತ್ತು ಐಐಟಿಗೆಭೂಮಿ ಬಿಟ್ಟುಕೊಟ್ಟಿದ್ದ ಭೂ ಮಾಲೀಕರ ಸಭೆಯಲ್ಲಿಸ್ವಾಧೀನಪಡಿಸಿಕೊಂಡಿದ್ದ ಭೂಮಿಗೆ ಪರಿಹಾರದಬದಲು ಒಂದು ಎಕರೆಗೆ ಚದರ 10,781 ಅಡಿನಿವೇಶನವನ್ನು ಭೂ ಮಾಲೀಕರಿಗೆಅಭಿವೃದ್ಧಿಪಡಿಸಿಕೊಟ್ಟು ಉಳಿದ ಭೂಮಿಯನ್ನುವಸತಿ ಬಡಾವಣೆ ನಿರ್ಮಾಣಕ್ಕೆ ಬಳಸಲು ಒಪ್ಪಂದ ಮಾಡಿಕೊಳ್ಳಲಾಯಿತು.
ಈ ಒಡಂಬಡಿಕೆಗೆ ಭೂಮಾಲೀಕರು ಸಮ್ಮತಿಳಿಸಿದರು.ಸ್ವಾಧೀನ ಪ್ರಕ್ರಿಯೆ ಆರಂಭವಾಗಿತ್ತು: ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗಹಾಸನದಲ್ಲಿ ಐಐಟಿ ಸ್ಥಾಪನೆಯ ಪ್ರಯತ್ನಆರಂಭವಾಯಿತು.
ಆನಂತರ ಧರ್ಮಸಿಂಗ್ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಉಸ್ತುವಾರಿಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರು ಐಐಟಿಮಂಜೂರಾತಿಗೆ ತೀವ್ರ ಪ್ರಯತ್ನ ನಡೆಸಿಐಐಟಿಗಾಗಿ ಭೂಮಿ ಸ್ವಾಧೀನ ಪ್ರಕ್ರಿಯೆಆರಂಭವಾಗಿತ್ತು.ಗವೇನಹಳ್ಳಿ, ಬೊಮ್ಮನಾಯ್ಕನಳ್ಳಿ,ಬುಸ್ತೇನಹಳ್ಳಿ, ಕಸ್ತೂರವಳ್ಳಿ, ಚಿಕ್ಕ ಬಸವನಹಳ್ಳಿಮತ್ತಿತರ ಹಳ್ಳಿಗಳ ವ್ಯಾಪ್ತಿಯ 1,513 ಎಕರೆಪ್ರದೇಶದ ಭೂ ಸ್ವಾಧೀನ ಪ್ರಕ್ರಿಯೆ ಕೆಐಎಡಿಬಿಮೂಲಕ ನಡೆದಿತ್ತು. ಐಐಟಿಗಾಗಿ 1053 ಎಕರೆಯನ್ನೂ ಹಂಚಿಕೆ ಮಾಡಲಾಗಿತ್ತು. ಆದರೆ ಎನ್ಡಿಎಸರ್ಕಾರದಲ್ಲಿ ಐಐಟಿ ಧಾರವಾಡದ ಪಾಲಾಯಿತು.
ಎಕರೆಗೆ ಚದರ 10,781 ಅಡಿ ಭೂಮಿ:ಒಂದೂವರೆ ದಶಕದಿಂದ ಐಐಟಿಗಾಗಿಸ್ವಾಧೀನಪಡಿಸಿಕೊಂಡಿದ್ದ ಭೂಮಿಯಲ್ಲಿ ವಸತಿಬಡಾವಣೆ ನಿರ್ಮಿಸಲು ತೀರ್ಮಾನಿಸಲಾಗಿದ್ದು,ಈಗಾಗಲೇ ಭೂ ಪರಿಹಾರ ಪಡೆದುಕೊಂಡಿರುವರೈತರು ಬಡ್ಡಿ ಸಹಿತ ಪರಿಹಾರದ ಮೊತ್ತಹಿಂತಿರುಗಿಸಿದರೆ, ಎಕರೆಗೆ 10,781 ಅಡಿ ಭೂಮಿಬಿಟ್ಟುಕೊಡಲು ಗುರುವಾರ ನಡೆದ ಸಭೆಯಲ್ಲಿತೀರ್ಮಾನಿಸಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್ಡಿಡಿ
Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ
Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್ಗೆ ಲಾಭ?
Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್ ರೇವಣ್ಣ ಪ್ರಚಾರಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ