ಬೆಲೆ ಏರಿಕೆ ತಡೆಯುವಲ್ಲಿಕೇಂದ್ರ ವಿಫಲ
Team Udayavani, Mar 17, 2021, 1:59 PM IST
ಅರಸೀಕೆರೆ: ನಿತ್ಯ ಅವಶ್ಯಕ ವಸ್ತುಗಳ ಬೆಲೆ ದಿನವೂ ಏರಿಕೆ ಆಗುತ್ತಿದೆ. ಗ್ರಾಮೀಣ ಜನರ ಬದುಕುದುಸ್ತರವಾಗುತ್ತಿದೆ. ಗಗನಕ್ಕೆ ಏರುತ್ತಿರುವ ಬೆಲೆತಡೆಯುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಶಾಸಕ ಕೆ. ಎಂ.ಶಿವಲಿಂಗೇಗೌಡ ಎಚ್ಚರಿಸಿದರು.
ತಾಲೂಕಿನ ಗಂಡಸಿ ಹೋಬಳಿ ಹೋರಿ ಮಂಗಳಾಪುರದಲ್ಲಿ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ವತಿಯಿಂದ ಜಲ ಜೀವನ್ಮಿಷನ್ ಅಡಿ ಪ್ರತಿ ಮನೆಗೆ ಗಂಗೆ ಯೋಜನೆಯಡಿಪ್ರತಿ ಮನೆಗೂ ನೀರು ಒದಗಿಸಲು ನಲ್ಲಿ ಅಳವಡಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪೆಟ್ರೋಲ್ ಮತ್ತು ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದ್ದು, ಶ್ರೀಸಾಮಾನ್ಯರ ಜೀವನ ತತ್ತರಿಸಿದೆ ಎಂದು ಹೇಳಿದರು.
ನಲ್ಲಿ ಮೂಲಕ ನೀರು: ಹೇಮಾವತಿ ನದಿ ಮೂಲದಿಂದ ತಾಲೂಕಿನ 530 ಹಳ್ಳಿಗಳಿಗೆ ಕುಡಿಯುವ ನೀರು ತಂದಿದ್ದು, ಈಗ ಮನೆ ಮನೆಗೆ ನಲ್ಲಿ ಅಳವಡಿಸಲು 200ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಯೋಜನೆಯಲ್ಲಿ 450 ಓವರ್ಹೆಡ್ ಟ್ಯಾಂಕ್ಗಳನ್ನು ನಿರ್ಮಾಣ ಮಾಡಿ, ಮನೆ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರನ್ನು ತಲುಪಿಸಲಾಗುವುದು ಎಂದು ವಿವರಿಸಿದರು.
ಕೇವಲ ರಸ್ತೆ ಅಭಿವೃದ್ಧಿಪಡಿಸಿಲ್ಲ: ಕ್ಷೇತ್ರದ ಸಮಗ್ರಅಭಿವೃದ್ಧಿ ಮಾಡಿದ್ದಿನೆಯೇ ಹೊರತು, ಕೇವಲ ರಸ್ತೆ ಅಭಿವೃದ್ಧಿಯೊಂದನ್ನೇ ಮಾಡಿಲ್ಲ, ಕ್ಷೇತ್ರದ 10ಸಾವಿರಕ್ಕೂ ಹೆಚ್ಚು ಮಂದಿ ಬೆಂಗಳೂರು ನಗರದಲ್ಲಿಕೂಲಿ, ನಾಲಿ ಮಾಡಿ ಜೀವನ ನಡೆಸುತ್ತಿದ್ದರು. ಅಂತಹ ಜನರಿಗೆ ಉದ್ಯೋಗ ಕಲ್ಪಿಸಲು ಕ್ಷೇತ್ರದಲ್ಲಿನ ಹಲವು ಜನರ ವಿರೋಧದೊಂದಿಗೂ ಪುನಃ ಕರೆ ತಂದುಗಾರ್ಮೆಂಟ್ಸ್ಗಳನ್ನು ಆರಂಭಿಸಲು ಉತ್ತೇಜನ ನೀಡಿದ್ದೇನೆ ಎಂದು ಹೇಳಿದರು.
ಅಭಿವೃದ್ಧಿ ಮೂಲಕ ಉತ್ತರ: ಅಲ್ಲದೆ, ಕರೆಕಲ್ಲು ಗುಡ್ಡದ ಬಳಿಯಲ್ಲಿ ಕೈಗಾರಿಕಾ ವಲಯವನ್ನು ಸ್ಥಾಪನೆಮಾಡುವ ಮೂಲಕ ಕ್ಷೇತ್ರದ ನಿರುದ್ಯೋಗಿಯುವಕರಿಗೆ ಉದ್ಯೋಗ ದೊರಕಿಸಲು ನಿರಂತರಹೋರಾಟ ಮಾಡುವ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ಅಭಿವೃದ್ಧಿ ಕಾರ್ಯಗಳ ಮೂಲಕ ಉತ್ತರ ನೀಡಿದ್ದೇನೆ ಎಂದು ಹೇಳಿದರು.
ಕೆರೆ ಕಟ್ಟೆ ನೀರು: ನನ್ನ ರಾಜಕೀಯ ವಿರೋಧಿಗಳ ಟೀಕೆ, ಟಿಪ್ಪಣಿ ಮತ್ತು ಗಿಮಿಕ್ ರಾಜಕಾರಣಕ್ಕೆ ನಾನುಎಂದಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ, ಕ್ಷೇತ್ರದಮತದಾರರು ನನ್ನ ಮೇಲೆ ಇಟ್ಟಿರುವ ನಂಬಿಕೆ ಹಾಗೂವಿಶ್ವಾಸಕ್ಕೆ ನಾನು ಋಣಿಯಾಗಿದ್ದು, ನನ್ನ ಮುಂದಿನ ಹೋರಾಟ ತಾಲೂಕಿನ ಕೆರೆ ಕಟ್ಟೆಗಳಿಗೆ ನದಿ ನೀರು ತುಂಬಿಸುವುದು ಎಂದು ಹೇಳಿದರು.
ಜನ ಕೈಜೋಡಿಸಬೇಕು: ಅಲ್ಲದೆ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಲ್ಲಿ ಸರ್ಕಾರ ತಾರತಮ್ಯ ಮಾಡಿ, ತಾಲೂಕಿನ ಎರಡು ಕೆರೆಗಳಿಗೆ ನೀರು ನೀಡಿ ಅನ್ಯಾಯ ಮಾಡಲು ಹೊರಟಿದ್ದು, ಬಾಣಾವರ ಹಾಗೂ ಕಣಕಟ್ಟೆ ಹೋಬಳಿ ಕೆರೆ-ಕೆರೆಗಳಿಗೆ ನೀರು ಒದಗಿಸುವವರೆಗೆ ನನ್ನ ಹೋರಾಟ ನಿಲ್ಲದು, ಈ ನನ್ನ ಹೋರಾಟಕ್ಕೆ ತಾಲೂಕಿನ ಜನತೆ ತಮ್ಮ ಜೊತೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೊಂಡೆನಾಳು ಗ್ರಾಪಂ ಅಧ್ಯಕ್ಷ ಹರೀಶ್, ಮುಖಂಡರಾದ ಚಿಕ್ಕಯರಗನಾಳು ಮಲ್ಲೇಶ, ಕೊಂಡೆನಾಳು ರಾಜು, ಹರೀಶ, ಶಂಕರೇಗೌಡ, ಗಂಗಾಧರ ಮತ್ತು ಗ್ರಾಮಸ್ಥರು, ಇಲಾಖೆಯ ಎಂಜಿನಿಯರ್ ಶಿವಾನಂದ, ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ