ಸಾಹಿತ್ಯ ವರ್ತಮಾನಕ್ಕೆ ಸಲ್ಲಬೇಕು, ಭವಿಷ್ಯಕ್ಕೆ ಬೆಳೆಯಬೇಕು


Team Udayavani, Aug 16, 2019, 3:00 AM IST

sahitya-var

ಹಾಸನ: ವರ್ತಮಾನಕ್ಕೆ ಪ್ರಯೋಜನವಿಲ್ಲದ ಸಾಹಿತ್ಯದಿಂದ ಭವಿಷ್ಯಕ್ಕೂ ಉಪಯೋಗವಿಲ್ಲ. ಬರಹ ಮೊದಲು ವರ್ತಮಾನಕ್ಕೆ ಸಲ್ಲಬೇಕು ನಂತರ ಭವಿಷ್ಯಕ್ಕೆ ಬೆಳೆಯಬೇಕು ಎಂದು ಹಿರಿಯ ಸಾಹಿತಿ, ನಟ ಎಸ್‌.ಎನ್‌. ಸೇತುರಾಂ ಹೇಳಿದರು. ನಗರದ ಮೆಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಲ್ಯುಮ್ನಿ ಸಭಾಂಗಣದಲ್ಲಿ ಕವಿ ಪಿ.ಕೆ.ಶರತ್‌ ಅವರ ಗುಂಪಿಗೆ ಸೇರದ ಪದಗಳು ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ಭಾಷಣ ಮಾಡಿದ ಲೇಖಕರೊಬ್ಬರು ಸಾಹಿತ್ಯ ವರ್ತಮಾನಕ್ಕಲ್ಲ, ಭವಿಷ್ಯದ ಪೀಳಿಗೆಗೆ ಅಂದಿದ್ದರು. ಆದರೆ ನಾವು ಇಂದು ನಮ್ಮ ಅಜ್ಜನ ಹೆಸರನ್ನೇ ಹೇಳುವುದಿಲ್ಲ. ಹೀಗಿರುವಾಗ ಮುಂದಿನ ಪೀಳಿಗೆ ಇಂದಿನ ಸಾಹಿತ್ಯವನ್ನು ಓದುತ್ತದೆ ಎಂದುಕೊಳ್ಳಲು ಸಾಧ್ಯವಿಲ್ಲ. ನಾವು ಇಂದಿನವರಿಗಾಗಿ ಬರೆಯಬೇಕು ಎಂದರು.

ಸಿದ್ಧಾಂತದ ಅಗತ್ಯವಿಲ್ಲ: ಲೇಖಕರು ಮೊದಲು ಸಿದ್ಧಾಂತವಿಟ್ಟುಕೊಂಡು ನಂತರ ಬರೆಯಬೇಡಿ, ನಿಮ್ಮ ಬರಹಕ್ಕೆ ಸಿದ್ಧಾಂತ ಬರಬೇಕು ಎನ್ನುವ ಹಿರಿಯರ ಮಾತನ್ನು ಅನುಸರಿಸದ ಕಾರಣಕ್ಕಾಗಿ ನಮ್ಮ ನಡುವಿನ ಹಲವು ಕವಿಗಳು ಸೋತರು. ಎಂದು ಹೇಳಿದರು.ಸ್ವಾತಂತ್ರಾéನಂತರ ಬಂದ ನಮ್ಮ ಪೀಳಿಗೆಯವರಿಗೆ ರೋಲ್‌ ಮಾಡೆಲ್‌ಗ‌ಳೇ ಇಲ್ಲ ಎಂದು ವಿಷಾದಿಸಿದರು.

ಫೆಮಿನಿಸಂ ಗಂಡಿನ ವಿರೋಧಿಯಲ್ಲ: ಫೆಮಿನಿಸಂ ಎಂದ ತಕ್ಷಣ ಗಂಡಿನ ವಿರೋಧಿ ಎಂದು ಭಾವಿಸಬಾರದು. ನಮ್ಮ ದೇಶದಲ್ಲಿ ಹೆಣ್ಣು-ಗಂಡಿನ ನಡುವೆ ಅಸಮಾನತೆ ಸೃಷ್ಟಿಯಾಗಲು ಚಾರಿತ್ರಿಕ, ಪ್ರಾಕೃತಿಕ ಕಾರಣಗಳಿವೆ ಎಂದು ಹೇಳಿದರು. ಭಾವನಾತ್ಮಕವಾಗಿ ಹೆಣ್ಣಿಗೆ ಸಮಾನವಾದ ಸ್ಥಾನ ನೀಡಲು ಗಂಡು ಮಕ್ಕಳಿಗೆ ಇನ್ನೂ ಇಷ್ಟವಿಲ್ಲ. ಇದಕ್ಕೆ ಗಂಡು ಮಕ್ಕಳನ್ನು ಮನೆಯಲ್ಲಿ ಮುಚ್ಚಟ್ಟೆಯಾಗಿ ಸಾಕುವುದು ಕಾರಣವಿರಬಹುದು ಎಂದರು.

ಜಾಲ ತಾಣಗಳ ಹಾವಳಿ: ಕವಿ ವಾಸುದೇವ ನಾಡಿಗ್‌ ಮಾತನಾಡಿ, ಇಂದು ಫೇಸ್‌ಬುಕ್‌, ವಾಟ್ಸಾéಪ್‌ನಂತಹ ವಿದ್ಯುನ್ಮಾನ ಮಾಧ್ಯಮಗಳು ಓದುಗರನ್ನು ನಿಜವಾದ ಓದಿನಿಂದ ಸುಳ್ಳಿನ ಕಡೆಗೆ ಕರೆದೊಯ್ಯುತ್ತಿವೆ. ರಾತ್ರಿ ಬರೆದ ಪದ್ಯಕ್ಕೆ ಬೆಳಗ್ಗೆ ಪ್ರಶಸ್ತಿ ಬರುತ್ತಿದೆ. ಇಂತಹ ಸುಲಭದ ಓದಿನಿಂದ ಕವಿ ಸಮಾಧಿಯಾಗುತ್ತಾನೆ. ಮಣ್ಣಿನ ಕವಿ ಮರೆಯಾಗುತ್ತಿದ್ದಾನೆ.

ಇಂದು ಬರಹಗಳು ಶಾಪಿಂಗ್‌ ಮಾಲ್‌ನ ವಸ್ತುಗಳಾಗಿ ಬಿಟ್ಟಿವೆ. ಆದರೆ ಕವಿತೆ ಜನಪ್ರಿಯತೆಯನ್ನು ಬಯಸುವ ತೆಳುವಾದ ಮಾಧ್ಯಮವಲ್ಲ. ಕವಿ ಶಬ್ದಗಳನ್ನು ಹುಡುಕಬಾರದು, ಶಬ್ದವೇ ಅವರನ್ನು ಹುಡುಕಿಕೊಂಡು ಬರಬೇಕು. ಬಹುತೇಕ ಯುವ ಕವಿಗಳಿಗೆ ಪದಗಳ ಪರಿಜ್ಞಾನವೇ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕಿ ಶೈಲಜಾ ಹಾಸನ್‌ ಮಾತನಾಡಿ, ಪಿ.ಕೆ.ಶರತ್‌ ಹೆಣ್ಣಿನ ಭಾವನೆಗಳನ್ನು ಸಮರ್ಥವಾಗಿ ಚಿತ್ರಿಸಬಲ್ಲ ಸ್ತ್ರೀ ಸಂವೇದನೆ ಹೊಂದಿರುವ ಸೂಕ್ಷ್ಮ ಕವಿ. ಅಬ್ಬರ, ಆಡಂಬರವಿಲ್ಲದ ಅವರ ಕವಿತೆಗಳು ಮನಸ್ಸಿನಲ್ಲಿ ಉಳಿಯುತ್ತವೆ ಎಂದು ಶ್ಲಾಘಿಸಿದರು.ಕವಯತ್ರಿ ಕಲಾವತಿ ಮಧುಸೂದನ್‌, ಶಿಕ್ಷಕ ಚಂದ್ರಶೇಖರ್‌ ಮಾತನಾಡಿದರು. ಲೇಖಕ ಪಿ.ಕೆ.ಶರತ್‌, ಪ್ರಕಾಶಕ ಸುಹಾಸ್‌ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.