ಒಳಚರಂಡಿ ಸಮಸ್ಯೆ ನಿವಾರಣೆಗೆ ಪುರಸಭೆ ವಿಫ‌ಲ: ಆರೋಪ

ಕಸಕಡ್ಡಿ ಚರಂಡಿಗೆ ಎಸೆಯದಿರಲು ನಾಗರಿಕರಲ್ಲಿ ಅಧಿಕಾರಿಗಳ ಮನವಿ

Team Udayavani, Sep 11, 2021, 2:05 PM IST

ಒಳಚರಂಡಿ ಸಮಸ್ಯೆ ನಿವಾರಣೆಗೆ ಪುರಸಭೆ ವಿಫ‌ಲ: ಆರೋಪ

ಹೊಳೆನರಸೀಪುರ: ಪಟ್ಟಣದ ಒಳಚರಂಡಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇನ್ನು ಪರಿಹರಿಸುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ
ಎಂದು ಸಾರ್ವಜನಿಕರು ದೂರಿದ್ದಾರೆ.

ಅಪ್ಟಿಕಲ್‌ ಕೇಬಲ್‌: ಪಟ್ಟಣದ ಮೈಸೂರು ರಸ್ತೆ ಹೆದ್ದಾರಿ ಕರ್ನಾಟಕ ಬ್ಯಾಂಕ್‌ ಎದುರುಗಡೆ ರಸ್ತೆಯಲ್ಲಿ ಒಳಚರಂಡಿ ಪಿಟ್‌ ತುಂಬಿ ಕೊಳಚೆ
ನೀರು ಬರುತ್ತಿದೆ ಎಂಬ ಸಾರ್ವಜನಿಕ ದೂರು ಆಲಿಸಿದ ಪುರಸಭೆ, ಈ ಪಿಟ್‌ ದುರಸ್ಥಿಗೆ ಮುಂದಾಗಿದೆ. ಆದರೆ, ದುರಸ್ಥಿ ವೇಳೆ ಪಿಟ್‌
ಸಂಪೂರ್ಣ ಕಸಕಡ್ಡಿಗಳಿಂದ ತುಂಬಿಕೊಂಡಿರುವ ಜತೆಯಲ್ಲಿ ಪಿಟ್‌ನಲ್ಲಿ ಭಾರತ್‌ ಸಂಚಾರ ನಿಗಮದ ಅಪ್ಟಿಕಲ್‌ ಕೇಬಲ್‌ಗ‌ಳು ದೊರೆತಿರುವುದು
ಒಳಚರಂಡಿ ಪೂರ್ಣ ಹದಗೆಡಲು ಕಾರಣವಾಗಿದೆ. ದುರಸ್ಥಿ ವೇಳೆ ಇಟಾಚಿಯಲ್ಲಿ ಪಿಟ್‌ನಲ್ಲಿ ಕಸ ಕಡ್ಡಿ ಹೊರ ತೆಗೆಯುವ ವೇಳೆ ಅಪ್ಟಿಕಲ್‌ ಕೇಬಲ್‌ ಹೊರತೆಗೆದು ಪಿಟ್‌ ದುರಸ್ಥಿಗೊಳಿಸಲಾಯಿತು.

ಆದರೆ, ಸಮಸ್ಯೆ ಇರುವುದು ಪಿಟ್‌ನಲ್ಲಿ ಕಸ ಕಡ್ಡಿ ತುಂಬಿರುವುದಲ್ಲ ಎಂಬುದಕ್ಕೆ ಪಿಟ್‌ ನಲ್ಲಿನ ಕೇಬಲ್‌ಗ‌ಳು ಕಾರಣ ಎಂಬುದು ಇದೀಗ ದೃಢ
ಪಟ್ಟಿದೆ. ಪಿಟ್‌ ನಿರ್ಮಿಸುವಾಗ ಈ ಕೇಬಲ್‌ಗಳನ್ನು ಸೇರಿಸಿ ಪಿಟ್‌ ನಿರ್ಮಿಸಿರುವುದು ಸಮಸ್ಯೆಗಳ ಆಗರಕ್ಕೆ ಕಾರಣವಾಗಿದೆ ಎಂದುಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ:ಕಾಯ್ದಿರಿಸಿರುವ ಹುಲ್ಲುಗಾವಲು ಭೂಮಿ ಮಂಜೂರು ಬೇಡ

ಪ್ರಸ್ತುತ ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಒಳಚರಂಡಿ ಪಿಟ್‌ ತುಂಬಿ ರಸ್ತೆ ತುಂಬೆಲ್ಲ ಹರಿದಾಡುವುದರ ಜತೆಗೆ ಕೆಲವು ಮನೆಗಳಲ್ಲಿ
ಟಾಯ್ಲೆಟ್‌ಗಳು ತುಂಬಿ ಮನೆ ತುಂಬೆಲ್ಲ ಹರಡಿ ವಾಸಿಸಲು ಆಗದೆ ಹಲವರು ಮನೆ ಬಿಟ್ಟು ದೂರದ ನೆಂಟರ ಮನೆಯಲ್ಲಿ ವಾಸ ಮಾಡಿರುವ
ಘಟನೆ ಪಟ್ಟಣದ ಪೇಟೆ ಕೊರಮರ ಬೀದಿ ಹೊರತಾಗಿ ಉಳಿದಿಲ್ಲ.

ಈ ಬಗ್ಗೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಶಾಂತಲಾ ಮಾತನಾಡಿ, ಪಟ್ಟಣದಲ್ಲಿ ಹಲವು ಭಾಗಗಳಲ್ಲಿ ಪಿಟ್‌ಗಳು ತುಂಬಿದ ಸಾರ್ವಜನಿಕ
ಜೀವನಕ್ಕೆ ಮಾರಕವಾಗಿರುವುದು ನಿಜ. ತಮ್ಮ ಮನೆಗಳಲ್ಲಿನ ಒಳಚರಂಡಿ ಪಿಟ್‌ಗೆ ಬೇಡದ ವಸ್ತು ಹಾಕಿರುವುದು ಸಮಸ್ಯೆಗಳ ಉಲ್ಬಣಕ್ಕೆ ಕಾರಣ. ದಯಮಾಡಿ ಮನೆ ಮಾಲಿಕರು ನಿಮ್ಮ ಮನೆಯಲ್ಲಿನ ಕಸ ಕಡ್ಡಿ ಇತ್ಯಾದಿಗಳನ್ನು ಪುರಸಭೆಯ ತ್ಯಾಜ್ಯವಸ್ತುಗಳ ಸಾಗಾಟಮಾಡುವ
ವಾಹನಗಳಲ್ಲಿ ಹಾಕಿ ಉಪಕರಿಸಬೇಕೆಂದು ಮನವಿ ಮಾಡಿದರು.

ಟಾಪ್ ನ್ಯೂಸ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

9-fusion

Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.