ಸಗಟು ತರಕಾರಿ ವ್ಯಾಪಾರಕ್ಕೆ ನೂತನ ಮಾರುಕಟ್ಟೆ

ಎಪಿಎಂಸಿಯಿಂದ 5 ಕೋಟಿ ರೂ. ವೆಚ್ಚದಲ್ಲಿ ವಿನೂತನ ಹರಾಜು ಕಟ್ಟೆ • 56 ಮಳಿಗೆಗಳ ನಿರ್ಮಾಣ

Team Udayavani, Aug 2, 2019, 11:57 AM IST

hasan-tdy-2

ಹಾಸನದ ಎಪಿಎಂಸಿ ಆವರಣದಲ್ಲಿ ಸುಸಜ್ಜಿತ, ವಿನೂತನ ಮಾದರಿಯ ತರಕಾರಿ ಸಗಟು ಮಾರುಕಟ್ಟೆ ನಿರ್ಮಾಣವಾಗಿದೆ.

ಹಾಸನ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ವಿನೂತನ ಮಾದರಿಯ ಸಗಟು ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ತರಕಾರಿ ಹರಾಜು ಕಟ್ಟೆ ಹಾಗೂ 56 ಮಳಿಗೆಗಳು ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿವೆ.

ಎಪಿಎಂಸಿ ಆವರಣದಲ್ಲಿ ಮುಂಜಾನೆ ತರಕಾರಿಯ ಸಗಟು ಮಾರಾಟ ನಡೆಯುತ್ತದೆ. ಗ್ರಾಮಾಂತರ ಪ್ರದೇಶದಿಂದ ರೈತರು ಮುಂಜಾನೆ 4 ಗಂಟೆಗೆ ತಂದಿರಿಸಿಕೊಂಡ ಸೊಪ್ಪು, ತರಕಾರಿಗಳನ್ನು ವರ್ತಕರು ಸಗಟಾಗಿ ಖರೀದಿಸಿ ಆನಂತರ ತಮ್ಮ ಅಂಗಡಿಗಳಿಗೆ ಚಿಲ್ಲರೆ ಮಾರಾಟಕ್ಕೆ ಕೊಂಡೊಯ್ಯುತ್ತಾರೆ. ಆದರೆ ಇದುವರೆಗೂ ಶಿಥಿಲವಾಗಿದ್ದ ಒಂದೆರೆಡು ಪ್ರಾಂಗಣದಲ್ಲಿ ರೈತರು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು. ಕಿರಿದಾದ ಪ್ರದೇಶವಾಗಿದ್ದರಿಂದ ಬಹುಪಾಲು ರೈತರು ಪ್ರಾಂಗಣದ ಮುಂದೆ ಬಯಲು ಪ್ರದೇಶದಲ್ಲಿಯೇ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು. ಮಳೆಗಾಲದಂತೂ ಕೊಚ್ಚೆಯಲ್ಲಿಯೇ ವ್ಯಾಪಾರ ನಡೆಯುತ್ತಿತ್ತು. ಅಲ್ಲಿಂದ ವರ್ತಕರು ಖರೀದಿಸಿ ಪ್ರಾಂಗಣಕ್ಕೆ ಕೊಂಡೊಯ್ದು ದಾಸ್ತಾನು ಮಾಡಿಕೊಂಡು ಆನಂತರ ಕಟ್ಟಿನಕೆರೆ ಮಾರುಕಟ್ಟೆ ಸೇರಿದಂತೆ ನಗರದ ವಿವಿಧೆಡೆಗೆ ಚಿಲ್ಲರೆ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದರು.

ಬಾಡಿಗೆಗೆ ಮಳಿಗೆಗಳು: ರೈತರ ಸಂಕಷ್ಟ ಅರಿತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಆಧುನಿಕ ಮಾದರಿಯ, ಸುಸಜ್ಜಿತ ತರಕಾರಿ ಸಗಟು ಮಾರುಕಟ್ಟೆಯನ್ನು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ. ಬೃಹತ್ತಾದ ಹರಾಜು ಮಾರುಕಟ್ಟೆ, ಅದರ ಸುತ್ತಲೂ 56 ಮಹಿಳೆಗಳನ್ನು ನಿರ್ಮಿಸಿದೆ. ಹರಾಜು ಮಾರುಕಟ್ಟೆಯಲ್ಲಿ ಗ್ರಾಮೀಣ ಪ್ರದೇಶದಿಂದ ರೈತರು ತರಕಾರಿಯನ್ನು ತಂದಿಟ್ಟುಕೊಂಡು ಮಾರಾಟ ಮಾಡಬಹುದು. ಹರಾಜು ಕಟ್ಟೆಯೊಳಗೇ ವಾಹನಗಳು ಹೋಗಿ ತರಕಾರಿ ಇಳಿಸಬಹುದು. ರೈತರಿಂದ ಖರೀದಿಸಿದ ನಂತರ ವರ್ತಕರು ಮಳಿಗೆಗಳಲ್ಲಿ ತರಕಾರಿಯನ್ನು ದಾಸ್ತಾನು ಮಾಡಿಕೊಳ್ಳಬಹುದು. ರೈತರು ಹರಾಜು ಕಟ್ಟೆಯಲ್ಲಿ ಉಚಿತವಾಗಿ ಮಾರಾಟ ಮಾಡಬಹುದು. ಮಳಿಗೆಗಳನ್ನು ಮಾತ್ರ ವರ್ತಕರಿಗೆ ಬಾಡಿಗೆಗೆ ಎಪಿಎಂಸಿ ನೀಡಲಿದೆ.

ಹಾಪ್‌ಕಾಮ್ಸ್‌ ಸ್ಥಗಿತ: ಈಗ ವಿನೂತನ ಮಾದರಿಯ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಿರುವ 2 ಎಕರೆ ಪ್ರದೇಶವನ್ನು ಎಪಿಎಂಸಿ 1994 ರಲ್ಲಿ ಹಾಪ್‌ಕಾಮ್ಸ್‌ಗೆ ನೀಡಿತ್ತು. ಒಂದೆರೆಡು ವರ್ಷ ತರಕಾರಿ ಖರೀದಿ ತನ್ನ ಮಳಿಗೆಗಳ ಮೂಲಕ ಮಾರಾಟ ಮಾಡುವ ಚಟುವಟಿಕೆ ನಡೆಸಿದ್ದ ಹಾಪ್‌ಕಾಮ್ಸ್‌ ಆನಂತರ ಸ್ಥಗಿತಗೊಳಿಸಿತ್ತು. ಹಾಗಾಗಿ ಖಾರಿ ಬಿದ್ದಿದ್ದ ಜಾಗದಲ್ಲಿ ಈಗ ತರಕಾರಿ ಮಾರುಕಟ್ಟೆ ಕೇಂದ್ರ ಹಾಗೂ 56 ಮಳಿಗೆಗಳನ್ನು ಎಪಿಎಂಸಿ ನಿರ್ಮಿಸಿದೆ.

ಗೊರೂರು ರಸ್ತೆ ಕಡೆಯಿಂದ ಪ್ರವೇಶದ್ವಾರ: ಈಗ ಎಪಿಎಂಸಿಗೆ ಬಿ.ಎಂ.ರಸ್ತೆ ಕಡೆಯಿಂದ ಮಾತ್ರ ನೇರ ಪ್ರವೇಶ ದ್ವಾರವಿದೆ. ಈಗ ಗೊರೂರು ರಸ್ತೆ ಕಡೆಯಿಂದಲೂ ಪ್ರವೇಶದ್ವಾರವನ್ನು ನಿರ್ಮಿಸಲಾಗುತ್ತಿದೆ. ಈ ಪ್ರವೇಶ ದ್ವಾರ ತೆರೆದರೆ ರೈತರು ಮತ್ತು ವರ್ತಕರಿಗೆ ತರಕಾರಿ ಮಾರುಕಟ್ಟೆಗೆ ನೇರ ಮಾರ್ಗ ಸಿಕಿದಂತಾಗುತ್ತದೆ.

ಶೀಘ್ರದಲ್ಲಿಯೇ ಉದ್ಘಾಟನೆ:

ಹೊಸದಾಗಿ ನಿರ್ಮಿಸಿರುವ ತರಕಾರಿ ಮಾರುಕಟ್ಟೆ ಆರಂಭವಾದ ನಂತರ ಈಗ ತರಕಾರಿ ಮಾರಾಟ ವಾಗುವ ಸ್ಥಳದಲ್ಲಿಯೂ ಸುಸಜ್ಜಿತ ತರಕಾರಿ ಮಾರಾಟ ಹರಾಜು ಕಟ್ಟೆ ಮತ್ತು ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗ ನಿರ್ಮಿಸಿರುವ ಮಾರುಟ್ಟೆಯನ್ನು ಶೀಘ್ರದಲ್ಲಿಯೇ ಉದ್ಘಾಟನೆ ಮಾಡಲಾಗುವುದು ಎಂದು ಕೃಷಿ ಮಾರುಟ್ಟೆ ಉಪ ನಿರ್ದೇಶಕ ಶ್ರೀ ಹರಿ ತಿಳಿಸಿದರು.
ರೈತರ ಶೋಷಣೆ ನಿಲ್ಲಲಿ:

ಹಾಸನದ ಎಪಿಎಂಸಿ ಮಾರುಕಟ್ಟೆಯಲ್ಲಿ ಸುಸಜ್ಜಿತ ಸಗಟು ಮಾರುಕಟ್ಟೆ ನಿರ್ಮಾಣವಾಗಿರುವುದು ಸ್ವಾಗತಾರ್ಹ. ಆದರೆ ಎಪಿಎಂಸಿಯಲ್ಲಿ ದಲ್ಲಾಳಿಗಳಿಂದ ರೈತರ ಶೋಷಣೆ ನಡೆಯುವುದು ತಪ್ಪಬೇಕು. ಎಪಿಎಂಸಿಯಲ್ಲಿ ರೈತರಿಂದ ಸುಂಕ ಅಥವಾ ಕಮೀಷನ್‌ ಅಥವಾ ಬಳಕೆದಾರರ ಶುಲ್ಕ ವಸೂಲಿ ಮಾಡುವಂತಿಲ್ಲ. ಆದರೆ ವರ್ತಕರ ಬದಲು ರೈತರಿಂದಲೇ ಈ ಶುಲ್ಕ ವಸೂಲಿ ಮಾಡುತ್ತಿರುವ ದೂರುಗಳಿವೆ. ಇದು ತಪ್ಪಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್‌ ದೂರಿದರು.

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.