ಪಾಸಿಟಿವಿಟಿ ದರ ಶೇ.3ಕ್ಕಿಂತ ಕೆಳಕ್ಕಿಳಿಸಲು ಸೂಚನೆ
Team Udayavani, Jun 26, 2021, 7:38 PM IST
ಹಾಸನ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರವನ್ನು ಶೇ.3 ಕ್ಕಿಂತ ಕೆಳಕ್ಕಿಳಿಸಬೇಕು ಹಾಗೂ ಮರಣ ಪ್ರಮಾಣವನ್ನು ಶೂನ್ಯಕ್ಕಿಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಅಧಿಕಾರಿಗಳಿಗೆಸೂಚನೆ ನೀಡಿದರು.
ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಕೊರೊನಾ 3ನೇ ಅಲೆ ತಡೆಯುವಸಿದ್ಧತೆ ಬಗ್ಗೆ ಚರ್ಚೆ ನಡೆಸಿದ ಅವರು,ಮೂರನೇ ಅಲೆಯೂ ಮಕ್ಕಳ ಮೇಲೆಹೆಚ್ಚಿನ ಪರಿಣಾಮ ಬೀರುವ ಮುನ್ಸೂಚನೆಗಳಿರುವುದರಿಂದ ಅಗತ್ಯ ಸಿದ್ಧತೆಗಳ ಬಗ್ಗೆಗಮನಹರಿಸಬೇಕು ಎಂದರು.
ಪ್ರತ್ಯೇಕ ವಾರ್ಡ್: ಜಿಲ್ಲಾ ಆಸ್ಪತ್ರೆಗಳಲ್ಲಿಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ಸುಸಜ್ಜಿತ ವಾರ್ಡ್ಗಳ ಸ್ಥಾಪನೆಯಾಗಬೇಕು. ಅಗತ್ಯ ಪ್ರಮಾಣದ ವೆಂಟಿಲೇಟರ್ಗಳನ್ನು ಅಳವಡಿಸಿ ಎಲ್ಲಾವೈದ್ಯರಿಗೂ ಮಕ್ಕಳ ಚಿಕಿತ್ಸೆಯ ಬಗ್ಗೆ ತರಬೇತಿನೀಡಿ ಮಕ್ಕಳ ತಜ್ಞರನ್ನು ಉಸ್ತುವಾರಿ ಅಧಿಕಾರಿಯಾಗಿ ನಿಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳಿಗೆಬೇಕಾಗುವಂತಹ ವೆಂಟಿಲೇಟರ್ ವ್ಯವಸ್ಥೆಮಾಡಿಕೊಳ್ಳಬೇಕು. ಕೊರೊನಾ ಸೋಂಕಿತ12 ವರ್ಷದೊಳಗಿನ ಮಕ್ಕಳನ್ನು ಆಸ್ಪತ್ರೆಗಳಲ್ಲಿದಾಖಲು ಮಾಡಿದಾಗ ಪೋಷಕರಿಗೂ ಉಳಿದುಕೊಳ್ಳಲು ಬೆಡ್ಗಳ ವ್ಯವಸ್ಥೆ ಮಾಡಬೇಕುಹಾಗೂ ಎಲ್ಲ ವೈದ್ಯರಿಗೆ 2 ದಿನದ ಕಾರ್ಯಾಗಾರ ಆಯೋಜಿಸಿ ತರಬೇತಿ ನೀಡಬೇಕುಎಂದು ನಿರ್ದೇಶನ ನೀಡಿದರು
ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಮಾತನಾಡಿದರು. ಜಿಪಂ ಸಿಇಒ ಬಿ.ಎ.ಪರಮೇಶ್, ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್, ಜಿಲ್ಲಾ ಶಸ್ರ¤ ಚಿಕಿತ್ಸಕಡಾ.ಕೃಷ್ಣಮೂರ್ತಿ, ಡಿಎಚ್ಒ ಡಾ.ಸತೀಶ್ಕುಮಾರ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.