ಕಾವೇರಿ ಸ್ವಚ್ಛತೆ ಆಂದೋಲನಕ್ಕೆ ಶ್ಲಾಘನೆ
Team Udayavani, Jun 19, 2019, 11:53 AM IST
ರಾಮನಾಥಪುರ ಕಾವೇರಿ ನದಿ ಸ್ವಚ್ಛತೆಯನ್ನು ಮಂಗಳವಾರ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಕಾವೇರಿ ನದಿ ಸ್ವಚ್ಛತೆ ಕೈಗೊಂಡರು.
ರಾಮನಾಥಪುರ: ಜೀವನದಿ ಕಾವೇರಿ ಸ್ವಚ್ಛತೆ ಹಾಗೂ ನದಿ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ರಾಷ್ಟ್ರದ ಪವಿತ್ರ ನದಿಗಳನ್ನು ರಾಷ್ಟ್ರೀಕರಣಗೊಳಿಸಿ ನದಿ ಸಂರಕ್ಷಣೆಗೆ ಕೇಂದ್ರ ಹಾಗೂ ಸರ್ಕಾರದ ಗಮನ ಸೆಳೆಯಲು ರಾಮನಾಥಪುರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಕಾವೇರಿ ನದಿ ಮಹಾ ಅರತಿ ಪೂಜೆ ಬಹಳ ಮಹತ್ವವಾಗಿದೆ ಎಂದು ನಿವೃತ್ತ ಅಧಿಕಾರಿ ಬಿ.ಎನ್. ಬೋರೇಗೌಡ ತಿಳಿಸಿದರು.
ಕಾವೇರಿ ನದಿಗೆ ಆರತಿ: ರಾಮನಾಥಪುರ ಕಾವೇರಿ ನದಿ ಸ್ವಚ್ಛತಾ ಅಂದೋಲನ ಸಮಿತಿಯಿಂದ ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದ ಸುತ್ತ ಹಾಗೂ ಕಾವೇರಿ ನದಿ ದಂಡೆ ಯಲ್ಲಿ ಸ್ವಚ್ಛತೆ ಮಾಡಿದ ನಂತರ ನಡೆದ ಕಾವೇರಿ ನದಿ ವಹ್ನಿ ಪುಷ್ಕರಣಿಯಲ್ಲಿ ಹುಣ್ಣಿಮೆಯ 40 ನೇಯ ಕಾವೇರಿ ನದಿ ಆರತಿ ಪೂಜೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತ ಅಭಿಯಾನ ಎಂದು ಕೆಲವು ಸಂಘ ಸಂಸ್ಥೆಗಳು ಕಾಟಾಚಾರಕ್ಕೆ ಕಸ ಗುಡಿಸುವ ಪೊರಕೆ ಹಿಡಿದು ಪೋಟೋ ತೆಗೆಸಿಕೊಳ್ಳುತ್ತಾರೆ. ಅದರೆ ರಾಮನಾಥಪುರದ ಕಾವೇರಿ ನದಿ ಸ್ವಚ್ಛತಾ ಅಂದೋಲನಾ ಸಮಿತಿ ವತಿಯಿಂದ ಪ್ರತಿ ಹುಣ್ಣಿಮೆಯ ದಿನ ಸ್ವಚ್ಛತೆ ಕಾರ್ಯ ನಡೆಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಗಣ್ಯರ ಉಪಸ್ಥಿತಿ: ಸಮಾಜ ಸೇವಕ ಚನ್ನರಾಯ ಪಟ್ಟಣ ತಾಲೂಕು ಬಿಳಗುಲಿ ಗ್ರಾಮದ ಮಾಜಿ ಸೈನಿಕ ಎಸ್.ಅರ್. ದೊರೆ, ರಾಮನಾಥಪುರದ ಕಾವೇರಿ ನದಿ ಸ್ವಚ್ಛತಾ ಅಂದೋಲನ ಸಮಿತಿ ಜಿಲ್ಲಾ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿದರು.
ಕಾವೇರಿ ನದಿ ಸ್ವಚ್ಛತಾ ಅಂದೋಲನ ಸಮಿತಿ ಜಿಲ್ಲಾ ಖಜಾಂಚಿ ರಘು, ತಾಲೂಕು ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಕಾಳಬೋವಿ ಸದಸ್ಯ ರಾದ ಬಳಗುಲಿ ಭರತ್, ಶಿಲ್ಪ, ನಂದಿತಾ, ಭಾಗಮ್ಮ ಮತ್ತಿತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ