ಹಾಸನದಲ್ಲಿ ತರಕಾರಿ ಖರೀದಿಗೆ ನೂಕು ನುಗ್ಗಲು
Team Udayavani, Apr 1, 2020, 3:03 PM IST
ಹಾಸನ: ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಜನತೆ ತರಕಾರಿ ಖರೀದಿಗೆ ಅವಕಾಶ ನೀಡಲಾಗಿದ್ದು, ತರ ಕಾರಿ ಖರೀದಿಗೆ ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು.
ಲಾಕ್ಡೌನ್ ಜಾರಿಯಾದ ನಂತರ ತರಕಾರಿಗಳ ದರ ಏರುತ್ತಾ ಸಾಗಿದೆ. ಈರುಳ್ಳಿ ಕೇಜಿಗೆ 40 ರೂ., ಟೊಮೆಟೋ 20 ರಿಂದ 30 ರೂ., ಆಲೂಗಡ್ಡೆ ಕೇಜಿಗೆ 40 ರೂ., ಬೆಳ್ಳುಳ್ಳಿ ಕೇಜಿಗೆ 200 ರೂ., ಬೀನ್ಸ್ 40 ರೂ., ಅವರೆಕಾಯಿ 60 ರೂ., ಬೀನ್ಸ್ 80 ರೂ., ನುಗ್ಗೆಕಾಯಿ 50 ರೂ. ಪುಟ್ಟಬಾಳೆ ಹಣ್ಣು 60 ರೂ. ದರದಲ್ಲಿ ಮಾರಾಟವಾಯಿತು. ಗ್ರಾಹಕರು ಬೆಲೆಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ವ್ಯಾಪಾರಿಗಳು ಹೇಳಿದ ದರ ನೀಡಿ ತರಕಾರಿ ಖರೀದಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿ.ಎಂ.ರಸ್ತೆಯಲ್ಲಿ ವಾಹನಗಳ ಸಂಚಾ ರದ ದಟ್ಟಣೆ ಯುಂಟಾಗಿತ್ತು. ತರಕಾರಿ ಖರೀದಿ, ಪಟ್ರೋಲ್ಗಾಗಿ ಜನರು ಹೊರಬಂದಿದ್ದ ರಿಂದ ಹಾಸನಾಂಬ ದೇವಾಲಯದ ವೃತ್ತ, ಹೊಸಲೈನ್ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೆಟ್ರೋಲ್ ಬಂಕ್ ಗಳನ್ನು ವಾರದಲ್ಲಿ ನಾಲ್ಕುದಿನ ಮಾತ್ರ ತೆರೆಯಲು ಅವಕಾಶ ನೀಡಿರುವ ಹಿನ್ನಲೆ ಯಲ್ಲಿ ಮಂಗಳವಾರ ಪೆಟ್ರೋಲ್ಬಂಕ್ಗಳಲ್ಲಿಯೂ ಬೈಕ್ಗಳ ಸವಾರರು ಸಾಲು ಗಟ್ಟಿ ಪೆಟ್ರೋಲ್ ತುಂಬಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್ಡಿಡಿ
Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ
Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್ಗೆ ಲಾಭ?
Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್ ರೇವಣ್ಣ ಪ್ರಚಾರಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ