ಕಾಡಾನೆ ದಾಳಿ ತಡೆಗೆ ಅರಣ್ಯ ಇಲಾಖೆ ವಿಫಲ
Team Udayavani, Aug 23, 2021, 8:49 PM IST
ಸಕಲೇಶಪುರ: ತಾಲೂಕಿನ ವಿವಿಧೆಡೆ ಆನೆ ದಾಳಿ ಅವ್ಯಾಹತ ವಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅದನ್ನುನಿಯಂತ್ರಿ ಸುವಲ್ಲಿ ವಿಫಲವಾಗುತ್ತಿದೆ.
ಇತ್ತೀಚೆಗಷ್ಟೇ ಮಠಸಾಗರ ಗ್ರಾಮದಲ್ಲಿ ಸಲಗ ಮೆಣಸಿನ ಬಳ್ಳಿ ಕಿತ್ತುಆರ್ಭಟಿಸಿದ್ದಲ್ಲದೆ ಮನೆಗೆ ನುಗ್ಗಲುಯತ್ನಿಸಿತ್ತು.ಇದಕ್ಕಿಂತಲೂ ಮುಂಚೆ ಇಂಥಅನೇಕ ಘಟನೆಗಳು ನಡೆದಿವೆ. ಆದರೆಇದರ ನಿಯಂತ್ರಣಕ್ಕೆ ಶಾಶ್ವತ ಎಂಬಂಥಸೂತ್ರವನ್ನು ಜಿಲ್ಲಾಡಳಿತ ಅಥವಾ ಅರಣ್ಯಇಲಾಖೆ ಮಾಡದಿರು ವುದು ಸ್ಥಳೀಯರಸಂಕಷ್ಟಕ್ಕೆ ಕಾರಣವಾಗಿದೆ.
ಸಿಟ್ಟಿಗೆದ್ದಕಾಡಾನೆಗಳುಕಾಫಿ ತೋಟ,ಬಾಳೆತೋಟ, ಅಡಿಕೆ ತೋಟಗಳನ್ನುಧ್ವಂಸ ಮಾಡಿ ರೈತರ ವಾರ್ಷಿಕ ಆದಾಯದ ಜತೆಗೆ ಆತನ ನಿತ್ಯ ಜೀವನಕ್ಕೂತೊಂದರೆ ನೀಡುತ್ತಿವೆ. ಮತೊಂದೆಡೆವಾರ್ಷಿಕವಾಗಿ ರೈತರು ಆನೆ ದಾಳಿಯಿಂದ ಅಸುನೀಗುತ್ತಿರುವ ಪ್ರಕರಣಗಳನ್ನೂ ತಳ್ಳಿ ಹಾಕುವಂತಿಲ್ಲ.
ಆನೆ ಮಾರ್ಗ ಪರಿಶೀಲನೆ: ಪ್ರತಿ ವರ್ಷಆನೆ ಯಾವ ಕಾಲದಲ್ಲಿ ಸಕಲೇಶಪುರಸೇರಿದಂತೆ ಜಿಲ್ಲೆಯಲ್ಲಿ ಲಗ್ಗೆ ಇಡುತ್ತವೆಎಂಬುದನ್ನು ಅರಣ್ಯ ಇಲಾಖೆಯು ಪತ್ತೆಮಾಡಿ, ಆನೆಗಳ ಹಿಂಡು ಯಾವಮಾರ್ಗದಲ್ಲಿ ಚಲಿಸಿ ಮತ್ತೆ ಯಾವಮಾರ್ಗದಲ್ಲಿ ಬರುತ್ತವೆ ಎಂಬುದನ್ನುಗುರುಸಿಕೊಂಡರೆ ಅನೆಗಳ ಹಿಂಡುಅದೇ ಮಾರ್ಗದಲ್ಲಿ ಮತ್ತೆ ಬರುವಸಂದರ್ಭವನ್ನು ಗುರುತಿಸಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲು ಹಾಗೂನಿರ್ದಿಷ್ಟ ಪ್ರದೇಶದಲ್ಲಿ ಇರುವ ಗ್ರಾವುಗಳಿಗೆ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ. ಅಲ್ಲದೆ ಬೆಳೆಹಾನಿಮತ್ತು ಪ್ರಾಣ ಹಾನಿಯನ್ನೂತಡೆಯಬಹುದಾಗಿದೆ.
ಪರಿಹಾರ ನೀಡುವಲ್ಲಿ ವಿಳಂಬ:ಕಾಡಾನೆದಾಳಿಯಿಂದ ಅನೇಕ ಗ್ರಾಮಗಳಲ್ಲಿ ಬೆಳೆಹಾನಿ, ರೈತರ ಪ್ರಾಣಹಾನಿ ಸಂಭವಿಸಿದ್ದರೂ ಸಹ ಜಿಲ್ಲಾಡಳಿತ ಮತ್ತು ಅರಣ್ಯಇಲಾಖೆ ಸಿಬ್ಬಂದಿ, ಅಧಿಕಾರಿಗಳು ಸ್ಥಳಕ್ಕೆಭೇಟಿ ನೀಡಿ ಮೃತರ ಕುಟುಂಬಗಳಿಗೆಸಾಂತ್ವನ ನೀಡಿ ಹೋಗುತ್ತಾರೆಯೇಹೊರತು ಬಳಿಕ ಅವರಿಗೆ ಸರಿಯಾದರೀತಿಯಲ್ಲಿ ಪರಿಹಾರ ಸಿಕ್ಕಿದೆಯೇಎಂಬುದನ್ನು ನೋಡುವುದಿಲ್ಲ. ಇದರಿಂದ ರೈತಾಪಿ ಕುಟುಂಬಗಳು ಆರ್ಥಿಕನಷ್ಟವನ್ನು ಎದುರಿಸುವ ಜತೆಗೆ ಸೂಕ್ತಪರಿಹಾರವಿಲ್ಲದೆ ಸರ್ಕಾರಿ ಕಚೇರಿಗಳಿಗೆಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೊಂದೆಡೆ ಸರ್ಕಾರಿ ಕಚೇರಿಗಳಿಗೂಹಣ ನೀಡಿ ಕೆಲಸ ಮಾಡಿಸಿಕೊಳ್ಳುವಪರಿಸ್ಥಿತಿ ಎದುರಾಗಿದೆ.ಇತರೆ ಪ್ರಾಣಿಗಳಿಂದಲೂ ತೊಡಕು:ಕಾಡಾನೆ ಒಂದೇ ದಾಳಿ ಮಾಡುವುದಿಲ್ಲ.ಚಿರತೆ, ಕರಡಿಯಂಥ ಪ್ರಾಣಿಗಳುಆಗಾಗ್ಗೆ ಗ್ರಾಮಗಳಿಗೆ ಲಗ್ಗೆಯಟ್ಟು ಜನರಲ್ಲಿ ಆತಂಕ ಮೂಡಿಸುತ್ತಿರುತ್ತವೆ. ಇದರಿಂದ ಅರಣ್ಯ ತೀರದ ಗ್ರಾಮಗಳಲ್ಲಿಸಾರ್ವಜನಿಕರು ಒಬ್ಬಂಟಿಯಾಗಿಒಡಾಟ ನಡೆಸಲು ಭಯಪಡುವಂತಾಗಿದೆ.
ಇನ್ನೂ ಇದೇ ಸಮಯವನ್ನುಲಾಭವಾಗಿಸಿಕೊಂಡು ಕಾಡಂಚಿನಲ್ಲಿವನ್ಯ ಮೃಗಗಳನ್ನು ಬೇಟೆಯಾಡುವಪ್ರವೃತ್ತಿಯೂ ಅಲ್ಲಲ್ಲಿಕಂಡು ಬರುತ್ತಿದೆ.ಆದರೂ ಮಾನವ – ಪ್ರಾಣಿಸಂಘರ್ಷದಲ್ಲಿ ಕಾಡು ಪ್ರಾಣಿಗಳ ರಕ್ಷಣೆಪಡೆಯುವಲ್ಲಿ ಸರ್ಕಾರದ ಇಲಾಖೆಗಳುಮತ್ತಷ್ಟು ಶ್ರಮವಹಿಸಿ ನಾಗರರಿಕರರಕ್ಷಣೆ ಮುಂದಾಗಬೇಕು ಎಂಬುದುಸ್ಥಳೀಯ ಗ್ರಾಮಸ್ಥರ ಅಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್ಡಿಡಿ
Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ
Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್ಗೆ ಲಾಭ?
Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್ ರೇವಣ್ಣ ಪ್ರಚಾರಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ