ಸಕಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ
Team Udayavani, Feb 28, 2021, 1:04 PM IST
ಸಕಲೇಶಪುರ: ಸಕಲೇಶ್ವರಸ್ವಾಮಿಯವರ ಬ್ರಹ್ಮ ರಥೋತ್ಸವದ ಅಂಗವಾಗಿ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ: ರಥೋತ್ಸವವಾದ ಮೊದಲ ದಿನ ಚಿಕ್ಕತೇರೆಂದು ಕರೆಯುವ ವಾಡಿಕೆಯಿದ್ದು ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪ್ರತಿ ವರ್ಷದಂತೆ ಬ್ರಾಹ್ಮಣರ ಬೀದಿಯ ಮೊದಲ ತಿರುವಿನವರಗೆ ತೇರನ್ನು ಎಳೆಯಲಾಯಿತು. ಚಿಕ್ಕ ತೇರಿನ ಅಂಗವಾಗಿ ಹಲವಾರು ಪೂಜಾ ವಿಧಿ ವಿಧಾನ ನಡೆಸಲಾಯಿತು. ಶುಕ್ರವಾರ ರಾತ್ರಿ ಗಿರಿಜಾ ಕಲ್ಯಾಣ ಅದ್ಧೂರಿಯಾಗಿ ನಡೆದಿದ್ದು ಶಿವ ಪಾರ್ವತಿಯರ ವಿಗ್ರಹಗಳನ್ನು ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಯಿತು.
ಅಪಾರ ಭಕ್ತರು: ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗಿ ಯಾಗಿದ್ದರು. ಭಾನುವಾರ ದೊಡ್ಡ ರಥೋತ್ಸವ ನಡೆಯಲಿದ್ದು ಪಟ್ಟಣದ ರಾಜ ಬೀದಿಯಲ್ಲಿ ಬೃಹತ್ ಮೆರವಣಿಗೆಯಲ್ಲಿ ಸಂಚರಿಸಿ ಸಂಜೆಯ ವೇಳೆಗೆ ಸಕಲೇಶ್ವರ ಸ್ವಾಮಿ ದೇವಸ್ಥಾನದ ಬಳಿ ಮೆರವಣಿಗೆ ಅಂತ್ಯಗೊಳಿಸಲಾಗುವುದು. ಹೊರ ಊರುಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ.
ವಾಹನ ನಿಲುಗಡೆಗೆ ನಿಷೇಧ : ಭಾನುವಾರ ಸಕಲೇಶ್ವರಸ್ವಾಮಿ ಅವರ ದೊಡ್ಡ ತೇರಿನ ಅಂಗ ವಾಗಿ ಅಶೋಕ ರಸ್ತೆ, ಆಜಾದ್ ರಸ್ತೆಯ ಎರಡು ಬದಿ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆವರೆಗೆ ವಾಹನ ನಿಲು ಗಡೆಗೆ ನಿಷೇಧ ಮಾಡಲಾಗಿದ್ದು ಬಿ.ಎಂ.ರಸ್ತೆಯಲ್ಲಿ ವಾಹನ ಸಂಚಾರ ವನ್ನು 11ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಬೆಂಗಳೂರು ಕಡೆಯಿಂದ ಬರುವ ವಾಹನ ಅಶೋಕ ರಸ್ತೆ, ಆಸ್ಪತ್ರೆ ಮಾರ್ಗವಾಗಿ ಮುಖ್ಯ ರಸ್ತೆ ಸೇರಿದರೆ ಮಂಗಳೂರು ಕಡೆಯಿಂದ ಬರುವ ವಾಹನ ಗಂಧರ್ವ ಹೋಟೆಲ್ ಸಮೀಪ ಕೆಳಕ್ಕೆ ಬಂದು ಆಜಾದ್ ರಸ್ತೆ ಮಾರ್ಗವಾಗಿ ಮುಖ್ಯ ರಸ್ತೆಗೆ ಸೇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ