ಇಂದಿನಿಂದ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ
Team Udayavani, May 10, 2021, 7:10 PM IST
ಹಾಸನ: ಲಾಕ್ಡೌನ್ ಜಾರಿಯ ಮುನ್ನಾ ದಿನವಾದಭಾನುವಾರ ಸಾರ್ವಜನಿಕರು ಅಗತ್ಯ ವಸ್ತುಗಳನ್ನುತರಾತುರಿಯಲ್ಲಿ ಖರೀದಿಸಿದರು.
ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗೆ ಇದ್ದ ಅವಕಾಶದಲ್ಲಿ ದಿನಸಿಅಂಗಡಿಗಳು, ತರಕಾರಿ ಮಾರುಕಟ್ಟೆಯಲ್ಲಿ ಜನರುತರಾತುರಿಯಲ್ಲಿ ಖರೀದಿಯಲ್ಲಿ ತೊಡಗಿದ್ದರು.
ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆಸೋಮವಾರದಿಂದ ಕಟ್ಟುನಿಟ್ಟಾಗಿ ಲಾಕ್ಡೌನ್ಜಾರಿಮಾಡಲು ಅಧಿಕಾರಿಗಳು ಅಣಿಯಾಗಿದ್ದು,ಹಾಸನ ನಗರದ ಕಟ್ಟಿನಕೆರೆ ಮಾರುಕಟೆ rಯನ್ನು 14ದಿನ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದು,ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆಯ ನಡುವೆ ತರಕಾರಿ ಮಾರಾಟಕ್ಕೆ ಹಾಸನ ನಗರ ಬಸ್ನಿಲ್ದಾಣ, ಜಿಲ್ಲಾ ಕ್ರೀಡಾಂಗಣದಲ್ಲಿ ತಾತ್ಕಾಲಿಕವ್ಯವಸ್ಥೆಯನ್ನು ಮಾಡಿದ್ದಾರೆ.
ಕಟ್ಟಿನಕೆರೆ ಮಾರುಕಟ್ಟೆಯನ್ನು ಬಂದ್ ಮಾಡುವನಿರ್ಧಾರ ಪ್ರಕಟವಾಗುತ್ತಿದ್ದಂತೆ ವ್ಯಾಪಾರಿಗಳುಹಾಸನ ನಗರ ಬಸ್ನಿಲ್ದಾಣ ಮತ್ತು ಜಿಲ್ಲಾಕ್ರೀಡಾಂಗಣದ ಅವರಣದಲ್ಲಿ ತಮ್ಮ ಅಂಗಡಿಗಳನ್ನುತೆರೆಯುವ ಸಿದ್ಧತೆಯನ್ನು ಭಾನುವಾರವೇ ಮಾಡಿಕೊಂಡರು.
ತಮ್ಮ ವ್ಯಾಪಾರಕ್ಕೆ ಜಾಗಗುರ್ತಿಸಿಕೊಳ್ಳಲು ಮುಗಿಬಿದ್ದು ವ್ಯಾಪಾರಿಗಳುಪ್ಲಾಸ್ಟಿಕ್, ಗೋಣಿ ತಾಟುಗಳನ್ನು ಕಟ್ಟುವಾಗ ಕೆಲವರುಕಿತ್ತಾಡಲು ಮುಂದಾದ ಪ್ರಸಂಗ ನಡೆಯಿತು.ಸೋಮವಾರದಿಂದ ಬೆಳಗ್ಗೆ 6 ರಿಂದ 10ಗಂಟೆಯ ನಡುವೆ ಮಾತ್ರ ತರಕಾರಿ ಸೇರಿದಂತೆಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು,ಖರೀದಿಗೆ ಬರುವ ಗ್ರಾಹಕರು ನಡೆದುಕೊಂಡೇಬರಬೇಕು. ವಾಹಗಳಲ್ಲಿ ಬರುವಂತಿಲ್ಲ.ವಾಹನಗಳಲ್ಲಿ ಬಂದರೆ ವಾಹನಗಳನ್ನುವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್ಡಿಡಿ
Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ
Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್ಗೆ ಲಾಭ?
Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್ ರೇವಣ್ಣ ಪ್ರಚಾರಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ