“ದೇವಸ್ಥಾನದಲ್ಲಿ ಪವಾಡ ನಡೆಯುತ್ತೆ ಎಂದು ಹೇಳಿಲ್ಲ’
Team Udayavani, Oct 16, 2018, 6:45 AM IST
ಹಾಸನ: ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಸನಾಂಬಾ ದೇವಿಯ ಪವಾಡ ಬಯಲು ಮಾಡಬೇಕೆಂದು
ಪಟ್ಟು ಹಿಡಿದಿರುವುದರಿಂದ ಪರಸ್ಪರ ಚರ್ಚೆ, ಪ್ರತಿಭಟನೆಗಳು ನಿಗದಿಯಾಗಿರುವ ಸಂದರ್ಭದಲ್ಲಿಯೇ ದೇವಾಲಯದ
ಹಿರಿಯ ಅರ್ಚಕರೊಬ್ಬರು “ದೇವಾಲಯದಲ್ಲಿ ಯಾವುದೇ ಪವಾಡ ನಡೆಯುವುದಿಲ್ಲ. ಪವಾಡ ನಡೆಯುತ್ತದೆ ಎಂದು
ಯಾರೂ ಹೇಳಿಲ್ಲ’ ಎಂದು ಹೇಳುವ ಮೂಲಕ ಚರ್ಚೆಗೆ ಹೊಸ ತಿರುವು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಅರ್ಚಕ ನಾಗರಾಜ್, ಕೆಲವರು ಹಾಸನಾಂಬೆ ದೇವಾಲಯದಲ್ಲಿ ಪವಾಡ ನಡೆಯುತ್ತಿದೆ ಎನ್ನುತ್ತಿದ್ದಾರೆ.
ಕೆಲವರು ಯಾವ ಪವಾಡವೂ ನಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ದೇವಾಲಯದ ಪೂಜೆ ಮಾಡುವ ನಾವ್ಯಾರೂ ದೇವಾಲಯದಲ್ಲಿ ಪವಾಡ ನಡೆಯುತ್ತದೆ ಎಂದು ಎಲ್ಲೂ, ಯಾವಾಗಲೂ ಹೇಳಿಲ್ಲ. ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚುವಾಗ ದೇವರಿಗೆ ಯಾವುದೇ ನೈವೇದ್ಯ ಇಟ್ಟಿರುವುದಿಲ್ಲ. ಆದರೆ ದೇವಾಲಯದ ಬಾಗಿಲು ತೆರೆದ ದಿನ ದೇವಿಯ ಶಾಂತಿಗಾಗಿ ಕಡಲೆಬೇಳೆ, ಹೆಸರು ಬೇಳೆ ನೈವೇದ್ಯ ಮಾಡುತ್ತೇವೆ, ಅದನ್ನು ನಾವೂ ತಿನ್ನುತ್ತೇವೆ. ಭಕ್ತರಿಗೂ ವಿತರಿಸುತ್ತೇವೆ ಇಟ್ಟ ನೈವೇದ್ಯ ಹಳಸಲ್ಲ ಎಂಬುದು ಕಲ್ಪನೆ ಅಷ್ಟೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್