ಉ.ಪ್ರದೇಶಕ್ಕೆ ಸೈಕಲ್ನಲ್ಲೇ ಪಯಣ
Team Udayavani, May 9, 2020, 4:48 AM IST
ಹಾಸನ: ನಮ್ಮನ್ನು ತವರಿಗೆ ಕಳುಹಿಸಿ ಕೊಡಬೇಕು ಎಂದು ನಗರದ ಕೈಗಾರಿಕಾಭಿವೃದ್ಧಿ ಕೇಂದ್ರದ ಹಿಮ್ಮತ್ಸಿಂಗ್ ಜವಳಿ ಕೈಗಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯಗಳ ಕಾರ್ಮಿಕರು ಜಿಲ್ಲಾಡಳಿತಕ್ಕೆ ಮೊರೆಯಿಟ್ಟರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸಮಾವೇಶಗೊಂಡು ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಬಿಹಾರ, ಅಸ್ಸಾಂ ಮತ್ತಿತರ ರಾಜ್ಯಗಳ ನೂರಾರು ಕಾರ್ಮಿಕರು, “ಲಾಕ್ಡೌನ್ ಜಾರಿಯಾದ ದಿನದಿಂದ ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ. ಹೊರ ರಾಜ್ಯದಲ್ಲಿರುವ ನಮ್ಮ ಕುಟುಂಬದವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಮ್ಮನ್ನು ಕಳುಹಿಸಿಕೊಡಿ’ ಎಂದು ಮನವಿ ಮಾಡಿದರು.
ಹಿಮ್ಮತ್ಸಿಂಗ್ ಜವಳಿ ಘಟಕ ಹಾಸನ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿಯೇ ಬೃಹತ್ ಘಟಕವಾಗಿದ್ದು ಸಾವಿರಾರುಕಾರ್ಮಿಕರು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರು ಹಾಗೂ ಆಡಳಿತ ಮಂಡಳಿ ನಡುವೆ ಈ ಹಿಂದೆ ಘರ್ಷಣೆ ನಡೆದಿತ್ತು. ಈಗ ಹೊರ ರಾಜ್ಯದ ಕಾರ್ಮಿಕರು ಹೊರ ಹೋಗಲು ಮುಂದಾಗಿರುವುದು ಆಡಳಿತ ಮಂಡಳಿ ಆತಂಕಕ್ಕೆ ಕಾರಣವಾಗಿದೆ.