ಇಬ್ಬರು ಯುವತಿಯರ ಮುದ್ದಿನ ಲವರ್: ‘ಟಾಸ್’ ಮೂಲಕ ವಧುವಿನ ನಿರ್ಣಯ, ಆದರೆ ಆಗಿದ್ದೇ ಬೇರೆ!

ಇದು ಸೀರಿಯಲ್ ಕಥೆಯಲ್ಲ, ಸಕಲೇಶಪುರದಲ್ಲಿ ನಡೆದ ತ್ರಿಕೋನ ಪ್ರೇಮ ಪ್ರಸಂಗ

Team Udayavani, Sep 5, 2021, 12:00 PM IST

ಇಬ್ಬರು ಯುವತಿಯರ ಮುದ್ದಿನ ಲವರ್: ‘ಟಾಸ್’ ಮೂಲಕ ವಧುವಿನ ನಿರ್ಣಯ, ಆದರೆ ಆಗಿದ್ದೇ ಬೇರೆ!

ಸಕಲೇಶಪುರ: ಯುವಕನೋರ್ವನ ತ್ರಿಕೋನ ಪ್ರೇಮ ಗ್ರಾಮಸ್ಥರನ್ನು ಪೇಚಿಗೆ ತಂದಿದ್ದು, ಅಂತಿಮವಾಗಿ ಯುವಕ ಪ್ರೀತಿಸಿದ್ದ ಇಬ್ಬರಲ್ಲಿ ಒಬ್ಬಳನ್ನು ಮದುವೆಯಾಗುವ ಮುಖಾಂತರ ಪ್ರಕರಣ ಸುಖಾಂತ್ಯ ಕಂಡಿದೆ.

ತಾಲೂಕಿನ ಹೆತ್ತೂರು ಗ್ರಾಮದ ರಾಜಕೀಯ ಮುಖಂಡರ ಮಗನೋರ್ವ ಅಕ್ಕಪಕ್ಕದೂರಿನ ಇಬ್ಬರು ಯುವತಿಯರನ್ನು ಏಕ ಕಾಲದಲ್ಲಿ ಪ್ರೀತಿ ಮಾಡುತ್ತಿದ್ದರು. ಆ‌ದರೆ ಮದುವೆಯಾಗುವ ಸಂದರ್ಭ ಬರುತ್ತಲೇ ಈ ತ್ರಿಕೋನ ಪ್ರೇಮ ಬದಲಾಗಿ ಹೋಗಿತ್ತು. ಇಬ್ಬರಲ್ಲಿ ಯಾರನ್ನು ನಾನು ಮದುವೆಯಾಗಲಿ ಎಂದು ಮದುಮಗ ಇಕ್ಕಟ್ಟಿಗೆ ಸಿಲುಕಿದರೆ, ಹುಡುಗಿಯರು ಮಾತ್ರ ನೀನು ನನ್ನನ್ನೇ ವರಿಸಬೇಕು ಎಂದು ಪಟ್ಟು ಹಿಡಿದಿದ್ದರು. ಪ್ರೇಮ ಕಗ್ಗಂಟಾಗಿ ಗ್ರಾಮಸ್ಥರು ಮಧ್ಯಪ್ರವೇಶ ಮಾಡಿದರು.

ಮೂವರನ್ನೂ ಕೂರಿಸಿ ಒಂದು ಹುಡುಗಿಯನ್ನು ಸಮಾಧಾನ ಪಡಿಸಲು ಶುರು ಮಾಡಿದರು. ಆದರೆ ಪಟ್ಟು ಬಿಡದ ಪ್ರೇಯಸಿಯರು ಮಾತ್ರ ಈ ಹುಡುಗ ನನಗೇ ಬೇಕು ಎಂದು ಹಠಕ್ಕೆ ಬಿದ್ದಿದ್ದರು. ಇದರಿಂದ ಬೇಸತ್ತ ಒಬ್ಬಳಂತೂ ಹುಡುಗ ಸಿಗದಿದ್ದರೆ ಬದುಕುವುದಿಲ್ಲವೆಂದು ವಿಷವನ್ನೆ ಕುಡಿದುಬಿಟ್ಟಳು.

ಇದನ್ನೂ ಓದಿ:ಸಚಿವರ ಕಾರ್ಯಕ್ರಮದಲ್ಲಿ ಹೈಡ್ರಾಮಾ: ಕೈ ಪ್ರತಿಭಟನೆ,ವೇದಿಕೆಯಿಂದ ಕೆಳಗಿಳಿದ ಪ್ರಸನ್ನ ಕುಮಾರ್!

ಈ ಹಿನ್ನೆಲೆಯಲ್ಲಿ ಸಂಧಾನಕಾರರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು ಹೇಗೋ ಆಕೆ ಪ್ರಾಣಾಪಾಯದಿಂದ ಪಾರಾಗಿ ಗುಣಮುಖವಾಗಿ ಬಂದ ಬಳಿಕ ಮತ್ತೆ ರಾಜೀ ಪಂಚಾಯ್ತಿ ಮಾಡಿದ್ದರು. ಆದರೆ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.

ಗ್ರಾಮಸ್ಥರ ಹೊಸ ಆಲೋಚನೆ: ಈ ಪ್ರಕರಣದಿಂದ ಬೇಸತ್ತ ಊರಿನ ಮುಖಂಡರು, ಮೂರೂ ಕುಟುಂಬಕ್ಕೆ ವಾರ್ನಿಂಗ್‌ ಕೊಟ್ಟರು. ನಾವು ಈ ಪ್ರಕರಣ ಇತ್ಯರ್ಥ ಮಾಡ್ತೀವಿ, ಅದಕ್ಕೆ ನೀವು ಒಪ್ಪಬೇಕು ಎಂದರು. ಹುಡುಗನನ್ನು ಯಾರು ಮದುವೆಯಾಗಬೇಕು ಎಂದು ಟಾಸ್‌ ಹಾಕೋಣ, ಯಾರಿಗೆ ಅದೃಷ್ಟ ಇರುತ್ತೋ ಅವರು ಸತಿ-ಪತಿಗಳಾ‌ಗಲಿ ಎಂದು ತೀರ್ಮಾನಿಸಿದರು. ಟಾಸ್‌ ಆದ ಬಳಿಕ ಯಾರೂ ಮರು ಮಾತನಾಡೋ ಹಾಗಿಲ್ಲ, ಮತ್ತೆ ದೂರು ಕೊಡುವ ಹಾಗಿಲ್ಲ ಎಂದು ಮೂರೂ ಕಡೆಯವರಿಂದ ಅಗ್ರಿಮೆಂಟ್‌ ಕೂಡ ರೆಡಿಯಾಯಿತು. ಬಳಿಕ ಟಾಸ್ ಗೆ ದಿನ ನಿಗದಿಯಾಯಿತು.

ಟಾಸ್‌ ಹಾಕೋ ವೇಳೆಯಲ್ಲಿ ರೋಚಕ ತಿರುವು: ತ್ರಿಕೋನ ಪ್ರೇಮ ಸಿನಿಮೀಯ ರೀತಿಯಲ್ಲಿ ಕುತೂಹಲ ಮೂಡಿಸಿತ್ತು. ಶುಕ್ರವಾರ ಟಾಸ್‌ ಗೆ ಮುಹೂರ್ತ ಸಿದ್ಧ ಮಾಡಿದ ಹಿರಿಯರು ಎಲ್ಲರೂ ಒಂದೆಡೆ ಸೇರಿದರು. ಟಾಸ್‌ ಹಾಕಿದರೆ ಯಾರಿಗೆ ಅದೃಷ್ಟ ಒಲಿಯುತ್ತೆ ಎಂದು ಎಲ್ಲರಲ್ಲೂ ಕಾತರ ಇರುವಾಗ ಹುಡುಗ ಸೀದಾ ಅಲ್ಲಿಂದ ಓಡಿ ಹೋಗಿದ್ದಾನೆ. ನನಗಾಗಿ ವಿಷ ಕುಡಿದವಳೆ ನನ್ನ ಅರ್ಧಾಂಗಿ ಅಂದು ಬಿಟ್ಟಿದ್ದಾನೆ. ಇದೆಲ್ಲವನ್ನೂ ನೋಡುತ್ತಿದ್ದ ಇನ್ನೊಬ್ಬಳು ಸಿಟ್ಟಿಗೆದ್ದು ಪ್ರೇಮಿಗೆ ಕಪಾಳ ಮೋಕ್ಷ ಮಾಡಿ ಅಲ್ಲಿಂದ ಮರಳಿದ್ದಾಳೆ. ಅಲ್ಲಿಗೆ ವಾರಗಟ್ಟಲೆಯಿಂದ ಕಗ್ಗಂಟಾಗಿದ್ದ ಪ್ರಕರಣ ಹೀಗೆ ಕೊನೆಯಾಗಿದೆ.

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.