ನಾಗರ ಹಾವು ಮತ್ತು ನಾಯಿ ನಡುವೆ ಘೋರ ಕಾದಾಟ: ಎರಡೂ ಜೀವ ಅಂತ್ಯ
Team Udayavani, Jan 28, 2022, 6:40 PM IST
ಸಕಲೇಶಪುರ: ಹಾವು-ಮುಂಗುಸಿ ಬದ್ದ ವೈರಿಗಳು ಎಂಬ ಮಾತು ಸಾಮಾನ್ಯವಾಗಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಹಾವು ಮತ್ತು ನಾಯಿಗಳು ವೈರಿಗಳಾಗಿರುವ ದೃಶ್ಯ ಹೆಚ್ಚು ಕಂಡು ಬರುತ್ತಿದ್ದು ಹಾವು ಮತ್ತು ನಾಯಿಯ ನಡುವೆ ಕಾದಾಟ ನಡೆದು ಎರಡೂ ಪ್ರಾಣಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಶುಕ್ರವಾರಸಂತೆ ಗ್ರಾಮದಲ್ಲಿ ಗುರುವಾರ ಗ್ರಾಮದ ಮಂಜುನಾಥ್ ಎಂಬುವವರು ತಮ್ಮ ಜಮೀನಿಗೆ ಹೋಗುವ ವೇಳೆ ಅವರೊಂದಿಗೆ ಸಾಕಿದ ನಾಯಿಯು ಸಹ ತೆರಳಿತ್ತು ದಾರಿ ಮದ್ಯೆ ನಾಗರಹಾವೊಂದು ಎದುರಾಗಿದ್ದು, ಈ ವೇಳೆ ಮಂಜುನಾಥ್ ನಾಯಿಯನ್ನು ಕರೆದರು ಸಹ ನಾಯಿ ಬರದೆ ಹಾವಿನ ಜೊತೆ ಸೆಣೆಸಾಡಲು ನಿಂತಿದೆ.
ಮೊದಲಿಗೆ ನಾಯಿ ಹಾವನ್ನು ಕಚ್ಚಿದರೆ ನಂತರ ಹಾವು ನಾಯಿಯನ್ನು ಕಚ್ಚಿದೆ. ಇದೇ ರೀತಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಪರಸ್ಪರ ಕಾದಾಟ ನಡೆಸಿದ ನಂತರ ಮೊದಲಿಗೆ ನಾಯಿ ನಿತ್ರಾಣಗೊಂಡು ನೆಲಕ್ಕೆ ಒರಗಿದರೆ ನಂತರ ತೀವ್ರ ಪ್ರಮಾಣದಲ್ಲಿ ಗಾಯಗೊಂಡಿದ್ದ ಹಾವು ಸಹ ಮೃತಪಟ್ಟಿದೆ. ಹಾವು ತನ್ನ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿ ಹೋರಾಟ ಮಾಡಿ ಜೀವ ಬಿಟ್ಟರೆ, ನಾಯಿ ಸಹ ಹಾವಿನ ಮೇಲೆ ಕಿಡಿ ಕಾರಿ ಪ್ರಾಣ ಬಿಟ್ಟಿದೆ. ಈ ಸಂ‘ರ್ದಲ್ಲಿ ನಾಯಿಯ ಮಾಲಿಕ ಗಾಬರಿಯಾದರೂ ಸಹ ಇವೆರಡರ ನಡುವಿನ ಸೆಣಸಾಟವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸ್ನೇಹಿತರಿಗೆ ಕಳುಹಿಸಿದ್ದಾರೆ. ಇದು ಹೀಗೆ ಒಬ್ಬರಿಂದ ಒಬ್ಬರಿಗೆ ವಿಡಿಯೋ ಹೋಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ