ಕಾಡಾನೆ: ಶಾಶ್ವತ ಪರಿಹಾರಕ್ಕೆ ಕೇಂದ್ರ ಶ್ರಮಿಸುತ್ತಿದೆ
Team Udayavani, Dec 11, 2022, 5:04 PM IST
ಸಕಲೇಶಪುರ: ಮಲೆನಾಡು ಭಾಗದಲ್ಲಿ ಕಾಡುತ್ತಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಶನಿವಾರ ಪಟ್ಟಣದ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾಡಾನೆ ಸಮಸ್ಯೆ ನಿವಾರಣೆ ಸಭೆಯಲ್ಲಿ ಮಾತನಾ ಡಿದರು. ಮುಖ್ಯಮಂತ್ರಿಗಳು ಸಕಲೇಶಪುರ ತಾಲೂಕಿನ ಆಳಿಯನಾಗಿರುವ ಕಾರಣ ಸಮಸ್ಯೆ ಬಗ್ಗೆ ಅವರಿಗೂ ಸಾಕಷ್ಟು ಅರಿವಿದೆ. ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಜೀವ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಇನ್ನೂ 10 ಕಾಡಾನೆಗಳಿಗೆ ರೇಡಿಯೋ ಕಾಲರ್ ಆಳವಡಿಸಲು ಸೂಚನೆ ನೀಡಲಾಗಿದೆ.
ಸೋಲಾರ್ ಬೇಲಿ ಆಳವಡಿಸಲು ಸರ್ಕಾರ ಅನುದಾನ ಮೀಸಲಿಟ್ಟಿದೆ. ಆದರೆ, ಅರಣ್ಯ ದೂರದಲ್ಲಿರುವುದರಿಂದ ಕಾರ್ಯಸಾಧ್ಯವಾ ಗುತ್ತಿಲ್ಲ. ಸೋಲಾರ್ ಬೇಲಿ ಆಳವಡಿಕೆಗಾಗಿ ಈಗಾಗಲೇ ಶೇ.50ರಷ್ಟು ರಿಯಾಯ್ತಿ ನೀಡಲಾಗುತ್ತಿದೆ.
ಟಾಸ್ಕ್ ಪೋರ್ಸ್ ರಚನೆ: ಮುಂದಿನ ದಿನಗಳಲ್ಲಿ ಇದನ್ನು ಶೇ.75ಕ್ಕೆ ಏರಿಸುವ ಚಿಂತನೆ ಇದೆ. ರೈಲ್ವೆ ಕಂಬಿ ತಡೆ ಬೇಲಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಮತ್ತಷ್ಟು ವಿಸ್ತೀರ್ಣದ ತಡೆಬೇಲಿ ನಿರ್ಮಾಣ ಮಾಡಲಾಗುವುದು. ಕೇಂದ್ರ ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಇಲ್ಲಿರುವ ಕಾಡಾನೆಗಳ ನ್ನು ಬೇರೆ ಜಿಲ್ಲೆಗಳಿಗೆ ಬಿಡುವ ಬಗ್ಗೆಯೂ ಚರ್ಚೆ ನಡೆದಿದೆ. ಅಲ್ಲದೆ ಸದ್ಯ ಕಾಡಾನೆ ಟಾಸ್ಕ್ ಪೋರ್ಸ್ ತಂಡವನ್ನು ಸಹ ರಚಿಸಲಾಗಿದೆ ಎಂದರು.
ಕಾಡಾನೆ ಸ್ಥಳಾಂತರಿಸಿ: ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ ಮೋಹನ್ ಕುಮಾರ್ ಮಾತನಾಡಿ, 2014ರಲ್ಲಿ ಹೈಕೋರ್ಟ್ ನ್ಯಾ.ಎಂ.ಎಂ.ಅಪ್ಪಯ್ಯ ಅವರಿದ್ದ ನ್ಯಾಯಾಲಯ ತೀರ್ಪು ನೀಡಿದ್ದರು. ಈ ತೀರ್ಪಿನ ಆಧಾರದಲ್ಲಿ 22 ಕಾಡಾನೆಗಳನ್ನು ಹಿಡಿಯಲಾಯಿತು. ಆದರೆ, ನಂತರದ ದಿನಗಳಲ್ಲಿ ಕೋರ್ಟ್ ತೀರ್ಪು ಜಾರಿಯಾಗದ ಹಿನ್ನೆಲೆ ಮತ್ತೆ ಕಾಡಾನೆಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ, ಇಲ್ಲಿರುವ ಎಲ್ಲ ಕಾಡಾನೆಗಳನ್ನು ಸ್ಥಳಾಂತರಿಸುವ ಮೂಲಕ ಕಾಡಾನೆ ಮುಕ್ತ ತಾಲೂಕನ್ನಾಗಿ ಮಾಡಬೇಕು ಎಂದರು.
ಇಲಾಖೆ ಕ್ರಮಗಳ ಬಗ್ಗೆ ವಿವರಣೆ: ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ್ ಮಾತನಾಡಿ, ಕಾಡಾನೆ ಸಮಸ್ಯೆ ನಿವಾರಣೆಗಾಗಿ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ, ಮಾಜಿ ಶಾಸಕರಾದ ಎಚ್.ಎಂ. ವಿಶ್ವನಾಥ್, ಬಿ.ಆರ್.ಗುರುದೇವ್, ಸರ್ಕಾರದ ಅಪಾರ ಕಾರ್ಯದರ್ಶಿ ಜಾ ವೀದ್ ಅಖ್ತರ್, ಕೇಂದ್ರ ವನ್ಯ ಜೀವಿ ವಿಭಾಗದ ಕುಮಾರ್ ಪುಷ್ಕರ್, ಸಿಸಿಎಫ್ ಸಿದ್ರಾಮಪ್ಪ, ಡೀಸಿ ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮುಂತಾದವರಿದ್ದರು.
ಸರ್ಕಾರದ ನಡೆಗೆ ಶಾಸಕರ ಖಂಡನೆ: ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅರಿವಿದೆ. ಟಾಸ್ಕ್ ಪೊರ್ಸ್ ರಚನೆಯಾಗಿದೆ. ಆದರೆ, ಯಾವುದೆ ನೌಕರರನ್ನು ನೇಮಿಸಿಲ್ಲ. ಇದರಿಂದಲು ಸಮಸ್ಯೆ ನಿವಾರಣೆ ಸಾಧ್ಯವಿಲ್ಲ. ಎತ್ತಿನಹೊಳೆ ನೀರು ತೆಗೆದುಕೊಂಡು ಹೋಗಲು ಸಾವಿರಾರು ಕೋಟಿ ವೆಚ್ಚ ಮಾಡುವ ಸರ್ಕಾರ, ಆನೆ ಕಾರಿಡಾರ್ಗಾಗಿ ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಸಿದ್ಧರಿ ರುವ ರೈತರ ಜಮೀನು ಖರೀದಿಸಲು ಐದನೂರು ಕೋ ಟಿ ನೀಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಕರವೇ-ಸಚಿವರ ನಡುವೆ ಜಟಾಪಟಿ:
ಸಕಲೇಶಪುರ: ಕರವೇ ಮುಖಂಡರ ಪರವಾಗಿ ಮಾತನಾಡಿದ ಯಡೇಹಳ್ಳಿ ಮಂಜುನಾಥ್, ಬರಿ ಸಭೆಗಳನ್ನು ನಡೆಸಿದರೆ ಯಾವುದೆ ಪ್ರಯೋಜನವಿಲ್ಲ. ಗ್ರಾಮೀಣ ಜನರು ಬದುಕು ಇನ್ನಿಲ್ಲದಂತೆ ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿ ಮಾತನಾಡಿದ ಉಸ್ತುವರಿ ಸಚಿವ ಕೆ.ಗೋಪಾಲಯ್ಯ ಸಮಸ್ಯೆಗಳ ಬಗ್ಗೆ ನನಗೆಲ್ಲ ತಿಳಿದಿದೆ. ಗದ್ದಲ ಮಾಡದೇ ಒಬ್ಬೋಬ್ಬರೇ ಮಾತನಾಡಿ, ಇಲ್ಲಿಗೆ ನಾನು ಬಂದಿರುವುದು ಸಮಸ್ಯೆ ಪರಿಹಾರಕ್ಕೆ ಎಂದರು.
ಮಾತು ಮುಂದುವರೆಸಿದ ಮಂಜುನಾಥ್, ಹೆಬ್ಬನಹಳ್ಳಿ ಮನು ಮೃತಪಟ್ಟ ವೇಳೆ ನೀಡಿದ ಎಲ್ಲ ಭರವಸೆಗಳು ಸುಳ್ಳಾಗಿವೆ. ಸರ್ಕಾರಿ ಉದ್ಯೋಗ, 15 ಲಕ್ಷ ಪರಿಹಾರ ನೀಡುವ ಭರವಸೆಗಳು ಈಡೇರಿಸಬೇಕು. ಕಾಡಾನೆ ಸಮಸ್ಯೆ ಪರಿಹಾರಕ್ಕೆ ಬಜೆಟ್ನಲ್ಲಿ ಅನುದಾನ ನೀಡದೆ ಚುನಾವಣೆ ಹಿನ್ನೆಲೆ ಸಭೆಗಳನ್ನು ನಡೆಸಿದರೆ ನಾವು ಕೇಳುವುದಿಲ್ಲ ಎಂದರು.
ಇದಕ್ಕೆ ಸಚಿ ವರು ಆಕ್ಷೇಪ ವ್ಯಕ್ತಪ ಡಿಸಿ, ಸಿಎಂ ಬರುತ್ತಿರುವುದು ಗಿಮಿಕ್ಗಾಗಿ ಅಲ್ಲ. ಸಂಪೂರ್ಣ ವಿಚಾರ ಅರಿವಿದ್ದರೆ ಮಾತನಾಡಿ, ಬಜೆಟ್ನಲ್ಲಿ ಅನುದಾನವಿದ್ದರೆ ಮಾತ್ರ ಕೆಲಸ ಮಾಡಬೇಕಿಲ್ಲ ಎಂದು ಸಿಡು ಕಿ ಸಮಸ್ಯೆ ನಿವಾರಣೆಗೆ ನಿಮ ಗೆಷ್ಟು ಕಾಳಜಿ ಇದೆಯೋ ಅಷ್ಟೇ ಕಾಳಜಿ ಜಿಲ್ಲಾ ಉಸ್ತುವರಿ ಸಚಿವನಾಗಿ ನನಗೂ ಇದೆ. ಸಮಸ್ಯೆ ಇದ್ದರೆ ಹೇಳಿ ಇದರಲ್ಲಿ ರಾಜಕೀಯ ಬೆರಸ ಬೇಡಿ ಎಂದರು.
ಇದಕ್ಕೆ ಕರವೇ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಮನವಿ ನೀಡಲಿದ್ದೇವೆ. ಸಿಎಂ ಜತೆ ಸಭೆ ನಡೆಸಲು ಅವಕಾಶ ನೀಡದಿದ್ದರೆ ಕಾರ್ಯಕ್ರಮದ ದಿನ ನಾವೇನು ಮಾಡ ಬೇಕು ಗೊತ್ತಿದೆ ಎಂದು ಯಡೇಹಳ್ಳಿ ಮಂಜುನಾಥ್ ಎಚ್ಚರಿಕೆ ನೀಡಿದರು.
ಇದೇ ವೇಳೆ ಬೆಳೆಗಾರ ಸಂಘಟನೆ ಹಾಗೂ ಕರವೇ ಮುಖಂಡರ ನಡುವೆ ಮಾತಿನ ಚಕಾಮುಖೀ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್ಡಿಡಿ
Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ
Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್ಗೆ ಲಾಭ?
Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್ ರೇವಣ್ಣ ಪ್ರಚಾರಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ