ಸಕಲೇಶಪುರ: ಮೊಬೈಲ್ ಒಡೆದು ಹಾಕಿದ ಕಾಡಾನೆ ; ವಿಡಿಯೋ ವೈರಲ್
Team Udayavani, Jun 11, 2022, 4:41 PM IST
ಸಕಲೇಶಪುರ: ಕಾಡಾನೆ ಚಲನವಲನ ನೋಡಲು ಕಾಫಿ ತೋಟವೊಂದರಲ್ಲಿ ಇಟ್ಟಿದ್ದ ಮೊಬೈಲ್ವೊಂದನ್ನು ಕಾಡಾನೆಯೊಂದು ಒಡೆದು ಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾಲೂಕಿನ ಹಾಲೇಬೇಲೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಕಾಡಾನೆಗಳ ಚಲನವಲನ ತಿಳಿಯಲು ವ್ಯಕ್ತಿಯೋರ್ವ ರು ಮೊಬೈಲ್ ಒಂದನ್ನು ಇಟ್ಟಿದ್ದು , ಈ ವೇಳೆ ಮೊಬೈಲ್ನ್ನು ನೋಡಿದ ಕಾಡಾನೆ ಮೊಬೈಲ್ ಹತ್ತಿರ ಬಂದು ಒಡೆದು ಹಾಕಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು ಕಾಡಾನೆಗಳಿಂದ ಜೀವ ಹಾನಿ, ಬೆಳೆ ಹಾನಿಯನ್ನು ತಡೆಗಟ್ಟಲು ಜನ ನಾನಾ ರೀತಿಯ ಉಪಾಯಗಳನ್ನು ಮಾಡಿದರು ಸಹ ಕಾ ಡಾನೆಗಳು ಸಹ ಜನರ ಉಪಾಯಗಳನ್ನು ಭೇದಿಸಿ ಎಲ್ಲಿ ಬೇಕೆಂ ದರಲ್ಲಿ ಸಂಚರಿಸುತ್ತಿವೆ. ಜನಸಾಮಾನ್ಯರಲ್ಲಿ ಭೀತಿ ಹುಟ್ಟುಹಾಕಿದೆ. ಸರ್ಕಾರ ಕೂಡಲೆ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡು ಕದಿದ್ದಲ್ಲಿ, ಮುಂದಿನ ದಿನಗಳಲ್ಲಿ ವ್ಯಾಪಕ ಅನಾಹುತಗಳು ಉಂಟಾಗುವುದರಲ್ಲಿ ಅನುಮಾನವಿಲ್ಲದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ