ಹಾವೇರಿಯಲ್ಲಿ ‘ಸ್ವಚ್ಛತೆ’ ಮರೀಚಿಕೆ

ಕಸದಿಂದ ತುಂಬಿ ತುಳುಕುತ್ತಿರುವ ಕಸದ ತೊಟ್ಟಿಗಳು•ವಿವಿಧ ವಾರ್ಡ್‌ ಗಳಲ್ಲಿ ಕಸ-ಕೊಳಚೆಯ ರೌದ್ರನರ್ತನ

Team Udayavani, Sep 12, 2019, 6:35 PM IST

12-Sepctember-22

ಎಚ್.ಕೆ. ನಟರಾಜ
ಹಾವೇರಿ:
ಹಾವೇರಿಗೂ ಸ್ವಚ್ಛತೆಗೂ ಸಂಬಂಧವೇ ಇಲ್ಲ. ಸ್ವಚ್ಛ ಭಾರತದ ಕಲ್ಪನೆ, ಯೋಜನೆ ಅನುಷ್ಠಾನವಂತೂ ಇಲ್ಲಿ ಇಲ್ಲವೇ ಇಲ್ಲ.

ಜಿಲ್ಲಾ ಕೇಂದ್ರವಾದ ಹಾವೇರಿ ನಗರದಲ್ಲಿ ಒಮ್ಮೆ ಸುತ್ತು ಹಾಕಿದರೆ ಈ ಮಾತು ಅಕ್ಷರಶಃ ಸತ್ಯವೆಂಬುದು ಸಾಬೀತಾಗುತ್ತದೆ. ಕಸದಿಂದ ತುಂಬಿ ತುಳುಕುತ್ತಿರುವ ಕಸದ ತೊಟ್ಟಿಗಳು, ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆಯಿಂದ ಹಾವೇರಿ ನಗರ ಸಂಪೂರ್ಣ ಹದಗೆಟ್ಟಿದ್ದು, ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದೆ.

ಕೊಳಚೆ, ಕಸ ರಾಶಿ ರಾಶಿಯಾಗಿ ಬಿದ್ದಿದ್ದರೂ ಅದನ್ನು ತೆಗೆಯುವ ಗೋಜಿಗೆ ನಗರಸಭೆ ಮುಂದಾಗಿಲ್ಲ. ಇದೆಲ್ಲ ಮಾಮೂಲು ಎನ್ನುವ ರೀತಿಯಲ್ಲಿ ಇಲ್ಲಿಯ ಜನಪ್ರತಿನಿಧಿಗಳು, ಜನರು ಮೂಗು ಮುಚ್ಚಿಕೊಂಡೇ ಸಾಗುತ್ತಿರುವುದು ಸತ್ಯ. ನಗರದ ಯಾವುದೇ ವಾರ್ಡ್‌ಗೆ ಭೇಟಿ ನೀಡಿದರೂ ಅಲ್ಲಿ ಅನೈರ್ಮಲ್ಯ ಎದ್ದು ಗೋಚರಿಸುತ್ತದೆ. ಕಾಲುವೆಗಳು ತುಂಬಿ ಕೊಳಚೆ ರಸ್ತೆ ಮೇಲೆ ಹರಿಯುತ್ತಿರುತ್ತದೆ. ಈ ಕೊಳಚೆಯನ್ನು ದಾಟಿಕೊಂಡೇ ಜನರು ಹೋಬೇಕಾದ ದುಃಸ್ಥಿತಿ ಇದೆ.

ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಕಸದ ತೊಟ್ಟಿಗಳು ತುಂಬಿ ಅಪಾರ ಪ್ರಮಾಣದ ಕಸ ಹೊರಗೆ ಬಿದ್ದಿರುತ್ತದೆ. ಹೊರ ಚೆಲ್ಲಿದ ಕಸದ ರಾಶಿಯಲ್ಲಿ ಹಂದಿ, ನಾಯಿಗಳು ಹುಡುಕಾಟ ನಡೆಸಿರುವ ದೃಶ್ಯ ಕಾಣಿಸುತ್ತದೆ. ತರಕಾರಿ ಮಾರುಕಟ್ಟೆ ಪ್ರದೇಶ, ಜಯನಗರ, ರೈಲ್ವೆ ನಿಲ್ದಾಣ ರಸ್ತೆ ಸೇರಿದಂತೆ ನಗರದ ವಿವಿಧ ವಾರ್ಡ್‌ಗಳಲ್ಲಿ ಕಸ-ಕೊಳಚೆಯ ರೌದ್ರನರ್ತನ ಕಣ್ಣಿಗೆ ರಾಚುತ್ತದೆ. ಇದೆಲ್ಲ ನೋಡಿದರೆ ಇಲ್ಲಿ ನಗರಸಭೆ ಇದೆಯೋ, ಇಲ್ಲವೋ, ಇದ್ದರೆ ಅದು ಏನು ಮಾಡುತ್ತಿದೆ ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ.

ಕೊಳಚೆಯಲ್ಲೇ ಆಹಾರ: ನಗರದ ಅನೇಕ ಕಡೆಗಳಲ್ಲಿ ರಸ್ತೆ ಬದಿಯೇ ಗೂಡಂಗಡಿಗಳನ್ನಿಟ್ಟುಕೊಂಡು ಸಿದ್ಧ ಆಹಾರಗಳನ್ನು ಮಾರಲಾಗುತ್ತಿದೆ. ಈ ಗೂಡಂಗಡಿಗಳು ಕೊಳಚೆ ತುಂಬಿರುವ ಗಟಾರ ಮೇಲೆಯೇ ಇದ್ದು, ಅಲ್ಲಿಯೇ ಎಗ್‌ರೈಸ್‌, ಮಿರ್ಚಿ ಸೇರಿದಂತೆ ಇತರೆ ಆಹಾರ ತಯಾರಿಸಿ ಮಾರಲಾಗುತ್ತದೆ. ಇಲ್ಲಿ ಕೊಳಚೆ ತುಂಬಿರುವ ರಸ್ತೆಯಲ್ಲೇ ನಿಂತು ಜನರು ತಿನ್ನುತ್ತಾರೆ. ನಗರಸಭೆ ಮಾತ್ರ ಜನರ ಆರೋಗ್ಯ, ನಗರದ ನೈರ್ಮಲ್ಯ ತಮ್ಮ ಜವಾಬ್ದಾರಿಯೇ ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ.

ಸೊಳ್ಳೆಗಳ ಕಾಟ: ಎಲ್ಲೆಂದರಲ್ಲಿ ಕಸದ ರಾಶಿ, ಕಾಲುವೆಗಳನ್ನು ತುಂಬಿದ ಕೊಳಚೆಯ ಕಾರಣದಿಂದ ಇಡೀ ನಗರವೇ ಸೊಳ್ಳೆಗಳ ಉತ್ಪತ್ತಿ ತಾಣದಂತಾಗಿದೆ. ಕೊಳೆತ ಕಸ, ಕಾಲುವೆಗಳಲ್ಲಿ ನಿಂತ ಕೊಳಚೆಯಿಂದ ಸೊಳ್ಳೆ, ನೋಣಗಳ ಸಮೃದ್ಧ ಸಂತತಿ ಇಲ್ಲಿ ಗೋಚರಿಸುತ್ತದೆ. ಇದರಿಂದಾಗಿ ಡೆಂಘೀ, ಮಲೇರಿಯಾ, ಚಿಕೂನ್‌ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲೇ ಜನ ದಿನ ಕಳೆಯುವಂತಾಗಿದೆ.

ಹಂದಿಗಳ ಕಾಟ: ಕಾಲುವೆಗಳಲ್ಲಿನ ಕೊಳಚೆಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದೇ ಇರುವುದರಿಂದ ಹಾಗೂ ಕಸದ ತೊಟ್ಟಿಗಳಲ್ಲಿನ ಕಸವನ್ನು ಸಕಾಲಕ್ಕೆ ಸಾಗಿಸದೆ ಇರುವುದರಿಂದ ಹಂದಿಗಳ ಹಿಂಡೇ ಇಲ್ಲಿ ಓಡಾಡುತ್ತಿರುತ್ತದೆ. ಹಂದಿಗಳು ನಗರದಲ್ಲಿ ಹೆಚ್ಚಾಗಿದ್ದು, ಅವುಗಳಿಂದ ಸಂಚರಿಸುತ್ತಿರುವವರಿಗೆ ಭಾರೀ ತೊಂದರೆಯಾಗುತ್ತಿದೆ.

ನಗರದ ಸ್ವಚ್ಛತೆಗಾಗಿ ನಗರಸಭೆ ಪ್ರತಿ ತಿಂಗಳು ಅಂದಾಜು 10 ಲಕ್ಷ ರೂ.ಗಳಷ್ಟು ಖರ್ಚು ಮಾಡುತ್ತಿದೆ. ಆದರೆ, ನೈರ್ಮಲ್ಯ ಮಾತ್ರ ನಗರದಿಂದ ಬಹಳ ದೂರವೇ ಉಳಿದಿರುವುದು ವಿಪರ್ಯಾಸ.

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.