ಹಾವೇರಿ: ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ
Team Udayavani, Aug 29, 2021, 2:20 PM IST
ಬ್ಯಾಡಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಬ್ಯಾಡಗಿ ಎಪಿಎಂಸಿ ನಿರ್ದೇಶಕ ಡಿ.ಎನ್.ತೋಟದ ಅವರ ಜೇಬು ಕತ್ತರಿಸಿ 6 ಸಾವಿರ ರೂ. ದೋಚಿರುವ ಪ್ರಕರಣ ಶನಿವಾರ ನಡೆದಿದೆ.
ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿಕೊಂಡು ನಡೆಯುವ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ ಹೊಸದೇನಲ್ಲ. ಮಾಜಿ ಸಚಿವ ಸಿ.ಎಂ.ಉದಾಸಿ ಅವರ ಅಂತ್ಯಕ್ರಿಯೆ ಸೇರಿದಂತೆ ಕೇಂದ್ರ ಸಚಿವರು, ಇನ್ನಿತರೆ ಕಾರ್ಯಕ್ರಮಗಳಲ್ಲಿ ಮೊಬೈಲ್, ನಗದು ಕಳ್ಳತನ ಮಾಡಿರುವ ಪ್ರಕರಣಗಳು ವರದಿಯಾಗಿದ್ದವು.