ನೀತಿ ಸಂಹಿತೆ ಉಲ್ಲಂಘಿಸಿದ್ರೆ ಕ್ರಮ
Team Udayavani, Dec 13, 2020, 3:29 PM IST
ಹಿರೇಕೆರೂರ: ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ, ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ತಹಶೀಲ್ದಾರ್ ಆರ್.ಎಚ್ .ಭಾಗವಾನ್ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯ
ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಿಮಿತ್ತ ನಡೆದ ಎಂಸಿಸಿ ಹಾಗೂ ಸೆಕ್ಟರ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳ ಚುನಾವಣಾ ಸಿಬ್ಬಂದಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಚುನಾವಣಾ ಕಾರ್ಯ ನಿರ್ವಹಿಸಬೇಕು. ಚುನಾವಣಾ ಆಯೋಗ ಹಾಗೂ ಸರಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಕಾರ್ಯ ಮಾಡಬೇಕು. ಆ ಮೂಲಕ ಪ್ರತಿಶತ ಮತದಾನಕ್ಕೆ ಎಲ್ಲರೂ ಸೇರಿ ಪ್ರಯತ್ನಿಸಬೇಕು ಮತ್ತು ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಿದರು.
ಸೆಕ್ಟರ್ ಅಧಿಕಾರಿಗಳ ವಿವಿರ: ಕಚವಿ ಮತ್ತು ಸಾತೇನಹಳ್ಳಿ ಗ್ರಾಪಂಗೆ ಎಲ್. ಶಿದ್ಲಿಂಗಪ್ಪ-9840695249,
ಮಡ್ಲೂರ ಹಾಗೂ ಚಿಕ್ಕೋಣತಿ ಗ್ರಾಪಂ ಎಂ.ವಿ. ಮಂಜುನಾಥ-8277931841, ಚಿಕ್ಕೇರೂರ ಗ್ರಾಪಂ ಸಿ.ಎನ್. ರಂಗನಾಥ-9482371519, ಹಂಸಭಾವಿ ಗ್ರಾಪಂ ಮಹ್ಮದ ನದಾಫ-9480843451,ಚಿನ್ನಮುಳಗುಂದ, ಭೋಗಾವಿ ಮತ್ತು ಸುತ್ತಕೋಟಿ ಗ್ರಾಪಂ ಬಿ.ಬಸವಣ್ಣೆಪ್ಪ-9945121801, ಆಲದಗೇರಿ, ಅರಳಿಕಟ್ಟಿ ಹಾಗೂ ಅಬಲೂರ ಗ್ರಾಪಂ ನವೀನ ಕುಮಾರ-7624866102, ಬೆಟಕೇರೂರ ಹಾಗೂ ಯತ್ತಿನಹಳ್ಳಿ ಎಂ.ಕೆ ಗ್ರಾಪಂ ವಿ.ಎಸ್.ಹಿರೇಮಠ-9945857257, ಕೋಡ ಹಾಗೂ ತಾವರಗಿ ಗ್ರಾಪಂ ವಿಷ್ಣುಕಾಂತ-9449098548, ಬುರಡಿಕಟ್ಟಿ, ಚನ್ನಳ್ಳಿ ಹಾಗೂ ನಿಡನೇಗಿಲ ಗ್ರಾಪಂ ಪರಶುರಾಮ ನಾಗರಾಳ-8867255827 ಹಾಗೂ ಹಿರೇಕೆರೂರ ತಾಲೂಕ ಎಂ.ಸಿ.ಸಿ. ಅಧಿಕಾರಿಯಾಗಿ ಎ.ಟಿ.ಜಯಕುಮಾರ-9480868100 ಅಧಿ ಕಾರಿಗಳನ್ನು ನೇಮಕ ಮಾಡಿದ್ದು, ದೂರುಗಳಿಗಾಗಿ ಅವರನ್ನು ಸಂಪರ್ಕಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಇಒ, ಎಂಸಿಸಿ ಅಧಿಕಾರಿ ಎ.ಟಿ.ಜಯಕುಮಾರ ಸೇರಿದಂತೆ ಸೆಕ್ಟರ್ ಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls polls: ರಾಜ್ಯದಲ್ಲಿ ನಾವು 18 -20 ಸೀಟ್ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ
ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ
ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ
LokSabha Election; ಕಾಂಗ್ರೆಸ್ ನ ಬಹುಮತ ಹೇಳಿಕೆಯೇ ಹಾಸ್ಯಾಸ್ಪದ: ಬಸವರಾಜ ಬೊಮ್ಮಾಯಿ
Haveri; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ