ಕಾನೂನು ಬಾಹಿರ ಹಕ್ಕು ಪತ್ರ ರದ್ದುಪಡಿಸಿ: ಶಾಸಕ ಬಳ್ಳಾರಿ
Team Udayavani, Feb 28, 2021, 4:33 PM IST
ಬ್ಯಾಡಗಿ: ಹಿಂದಿನ ಸರಕಾರದ ಅವ ಧಿಯಲ್ಲಿ ಜಮೀನು ಹೊಂದಿರುವವರಿಗೆ ಮತ್ತೆ ಅಕ್ರಮ ಸಕ್ರಮದಡಿ ಜಮೀನು ಮಂಜೂರು ಮಾಡಲಾಗಿದೆ. ಇದು ಕಾನೂನು ಬಾಹೀರ.ಅಂತಹ ಪ್ರಕರಣದಲ್ಲಿ ಭೂಮಿ ಪಡೆದವರ ಹಕ್ಕುಪತ್ರಗಳನ್ನು ರದ್ದುಪಡಿಸಬೇಂದು ತಹಶೀಲ್ದಾರ್ ರವಿಕುಮಾರ ಕೊರವರ ಅವರಿಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಖಡಕ್ ಸೂಚನೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಅಕ್ರಮ ಸಕ್ರಮ ಸಭೆಯಲ್ಲಿ ಮಾತನಾಡಿದಅವರು, ತಾಲೂಕಿನ ಕಲ್ಲೇದೇವರು,ಕೆಂಗೊಂಡ, ಅರಬಗೊಂಡ, ಅಳಲಗೇರಿ,ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿಒಂದೇ ಕುಟುಂಬದ ಸದಸ್ಯರು ಸಾಗುವಳಿಮಾಡಿದ್ದಾರೆ. ಭೂಮಿ ಇದ್ದರೂ ಅವರಿಗೆ ಭೂಮಿಯಾಕೆ ನೀಡಲಾಗಿದೆ? ಇದಕ್ಕೆ ಸ್ಪಷ್ಟನೆ ಕೊಡಿ. ಹಳೆದ ಹತ್ತು ವರ್ಷಗಳಿಂದ ಮೋಟೆಬೆನ್ನೂರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ.ಯಾವ ಆಧಾರದ ಮೇಲೆ ಹಕ್ಕುಪತ್ರಗಳನ್ನುವಿತರಣೆ ಮಾಡಿದ್ದೀದಿ ಎಂದು ಸಭೆಯಲ್ಲಿದ್ದಮೋಟೆಬೆನ್ನೂರ ಗ್ರಾಪಂ ಲೆಕ್ಕಪರಿಶೋಧಕರನ್ನು ತರಾಟೆಗೆ ತೆಗೆದುಕೊಂಡರು.
ಅರ್ಹರಿಗೆ ಸಿಗುತ್ತಿಲ್ಲ ಸೌಲಭ್ಯ: ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಹಿಂಬಾಲಕರ ಓಲೈಕೆಗೆ ನಿಂತ ರಾಜಕೀಯ ಮುಖಂಡರಿಂದಾಗಿ ಸರಕಾರದ ಸೌಲಭ್ಯಗಳು ಅರ್ಹರಿಗೆ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಇದಕ್ಕೆ ಸಾಕಷ್ಟು ಉದಾಹರಣೆಗಳು ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿವೆ ಎಂದು ಖೇದ ವ್ಯಕ್ತಪಡಿಸಿದರು.
ಇಚ್ಛಾಶಕ್ತಿ ವಿರುದ್ಧ ಕೆಲಸ ಮಾಡಬೇಡಿ: ಸಾಗುವಳಿ ಮಾಡಿ ಮೂರು ಎಕೆರೆ ಜಾಗ ಪಡೆದುಕೊಂಡವರು ಮತ್ತೆ ಎರಡುಎಕರೆ ಭೂಮಿಯಲ್ಲಿ ಹೆಚ್ಚಿನ ಸಾಗುವಳಿಮಾಡುತ್ತಿರುವ ಹಲವು ಪ್ರಕರಣಗಳುತಾಲೂಕಿನಲ್ಲಿವೆ. ಇದರಿಂದಾಗಿ ಸರಕಾರದಯೋಜನೆಗಳನ್ನು ಅನುಷ್ಠಾನ ಮಾಡಲುತಾಲೂಕಿನಲ್ಲಿ ಭೂಮಿಯ ಕೊರತೆಯಾಗುತ್ತಿದೆ.ಆದ್ದರಿಂದ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಅರ್ಹರಿಗೆ ಭೂಮಿ ದೊರೆಯುವಂತೆಮಾಡಬೇಕು. ಯಾರದೋ ಒತ್ತಡಕ್ಕೆ ಮಣಿದು ಇಚ್ಛಾಶಕ್ತಿ ವಿರುದ್ಧವಾಗಿ ಕೆಲಸ ಮಾಡಬೇಡಿ ಎಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಸ್ಟಾರ್ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ
ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ
ಬೃಹತ್ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು
Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ
Lok Sabha Elections; ಹಾವೇರಿ ಕಾಂಗ್ರೆಸ್ನಲ್ಲೂ ಭುಗಿಲೆದ್ದ ಆಕ್ರೋಶ
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ