ಸಿದ್ದರಾಮಯ್ಯ ಆಟ, ಕಾಂಗ್ರೆಸ್ ಗೆ ಗೂಟ : ಬಿಸಿ ಪಾಟೀಲ್
Team Udayavani, Nov 28, 2019, 2:44 PM IST
ಹಾವೇರಿ: ಕುರಿ ಕೋಳಿ ಎಮ್ಮೆ ಥರ ಶಾಸಕರು ಮಾರಾಟ ಆದರು ಅಂತಾ ಹೇಳುತ್ತಾ ಇದ್ದೀರಾ ಸಿದ್ದರಾಮಯ್ಯನವರೆ ನಾನು ನಿಮಗೆ ಕೇಳುತ್ತಿನಿ ಕಾಂಗ್ರೆಸ್ ಪಕ್ಷಕ್ಕೆ ಹೋದ್ರಿ ಅಲ್ವಾ ಎಷ್ಟು ಕೋಟಿಗೆ ಮಾರಿಕೊಂಡ್ರಿ ಸಿದ್ದರಾಮಯ್ಯನವರೆ? ಎಂದು ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್ , ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನೆಡೆಸಿದರು.
ಹಿರೆಕೇರೂರಿನ ತಮ್ಮ ಸ್ವಗ್ರಹದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ನೀವೂ ಮಾರಿಕೊಂಡಿದ್ದಕ್ಕೆ ತಾನೆ . ನಿಮಗೆ ಈ ಸಂಸ್ಕೃತಿ ಗೊತ್ತಿರೊದು. ಇಂಥಾ ಕೀಳುಮಟ್ಟದ ರಾಜಕಾರಣ ಮಾಡುತ್ತಾ ಇದಿರಾ ನಿಮಗೇನು ದಿನ ದುಡ್ಡು ಬಂದಿತ್ತಾಕಾಂಗ್ರೆಸ್ ಪಕ್ಷ ಸೇರುವ ಉದ್ದೇಶದಿಂದಲೇ ಜೆಡಿಎಸ್ ಪಕ್ಷ ಬಿಟ್ರಿ ಅವಾಗ ದೇವೆಗೌಡರ ಬೆನ್ನಿಗೆ ಚೂರಿ ಹಾಕಿದ್ದವರು ನೀವೇ ಎಂದು ವಾಗ್ದಾಳಿ ನಡೆಸಿದರು.
ಗೌರವಯುತವಾಗಿ ನಾನು ಮಾಡಿದ್ದು ಪೋಲಿಸ್ ಕೆಲಸ ರಿಟೈಯರ್ಡ್ ಪೋಲಿಸ್ ಆಫೀಸರ್ ಕೆಂಪಯ್ಯ ಇಟ್ಟುಕೊಂಡು ಅಂಗಡಿ ಒಪನ್ ಮಾಡಿದ್ರಿ ಅವರನ್ನು ಮುಂದೆ ಇಟ್ಟುಕೊಂಡು ಏನೇನಲ್ಲಾ ಮಾಡಿಲ್ಲಾ? ನಿಮ್ಮ ಆಡಳಿತದಲ್ಲೆ ಪೋಲಿಸರು ಆತ್ಮಹತ್ಯೆ ಮಾಡಿಕೊಂಡರು ಈ ಕೂಡಲೇ ಪೋಲಿಸ್ ಇಲಾಖೆಗೆ ನೀವು ಕ್ಷಮೆ ಕೇಳಬೇಕು ಪೋಲಿಸ್ ಬಗ್ಗೆ ಮಾತಾಡಿದರಲ್ಲಾ ನೀವೂ ನಿಮಗೆ ನಾಚೀಕೆ ಆಗಬೇಕು ಹಗುರವಾಗಿ ಮಾತಾಡಿದ್ದೀರಾ ನೀವೂ. ಪೋಲಿಸ್ ಇಲಾಖೆ ನಿಮ್ಮ ವಿರುದ್ದ ತಿರುಗಿ ಬೀಳುತ್ತದೆ ಎಂದರು.
ಸಿದ್ದರಾಮಯ್ಯ ಆಟ, ಕಾಂಗ್ರೆಸ್ ಗೆ ಗೂಟ,ಸಿದ್ದರಾಮಯ್ಯ ಅವರನ್ನು ನಂಬಿಕೊಂಡವ ಕೆಟ್ಟ ಮಾತು ಮಾತಲ್ಲೂ ಸಿದ್ದರಾಮಯ್ಯವರ ಮೇಲೆ ಕೋಪ ಹೊರಹಾಕಿದ ಬಿಸಿ ಪಾಟೀಲ್ ಕಾಂಗ್ರೆಸ್ ನಿರ್ನಾಮ ಆಗುತ್ತದೆ. ಕಾಂಗ್ರೆಸ್ ಮುಕ್ತ ಹಿರೆಕೇರೂರು ಆಗುತ್ತದೆ. ಸ್ಪೀಕರ್ ನಾಲಾಯಕ್ ಅಂದರೆ ನೀವೂ ಲಾಯಕ್ ಸಿದ್ದರಾಮಯ್ಯನವರೆ. ಜಾರ್ಜ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸದರೆ ಸಿದ್ದರಾಮಯ್ಯರ ಹುಂಡಿ ಎಲ್ಲೇಲ್ಲಿದೆ ಅಂತಾ ಗೊತ್ತಾಗದೆ ಅವಾಗ ಯಾರು ನಾಲಾಯಕ್ ಅಂತಾ ಗೊತ್ತಾಗುತ್ತದೆ
ಖಂಡಿತಾ ಸಿದ್ದರಾಮಯ್ಯ ಮತ್ತು ದಿನೇಶ ಗುಂಡುರಾವ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ. ನಾನೇ ಸಿದ್ದರಾಮಯ್ಯನವರನ್ನ ನಂಬಿದ್ದೆ,ಆದರೆ ಅವರೇ ನನ್ನ ಎದೆಗೆ ಚೂರಿ ಹಾಕಿದ್ದು ಸಿದ್ದರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ