ಏಲಕ್ಕಿ ಉದ್ಯಮಕ್ಕೆ ಪ್ರವಾಹದ ಪ್ರಹಾರ

ಸಂಕಷ್ಟದಲ್ಲಿ ಏಲಕ್ಕಿಮಾಲೆ ಉದ್ಯಮಿದಾರರು

Team Udayavani, Sep 30, 2019, 1:26 PM IST

hv-tdy-1

ಹಾವೇರಿ: ವಿಶ್ವ ಪ್ರಸಿದ್ಧಿ ಪಡೆದಿರುವ ಹಾವೇರಿಯ ಏಲಕ್ಕಿ ಮಾಲೆಗೆ ಏಲಕ್ಕಿ ಕೊರತೆ ಉಂಟಾಗಿದ್ದು, ಮಾಲೆ ತಯಾರಿಕೆ ಉದ್ಯಮದ ಮೇಲೆ ಭಾರಿ ದುಷ್ಪರಿಣಾಮ ಬೀರಿದೆ.

ಮಾಲೆ ತಯಾರಿಸಲು ಅಗತ್ಯವಿರುವ ಒಂದೇ ಗಾತ್ರದ ಮೊಗ್ಗು ಮಾದರಿಯ ಏಲಕ್ಕಿಯನ್ನು ಮಡಿಕೇರಿ, ತಮಿಳುನಾಡಿನ ಗುಂಡಿನಾಯಕನೂರು ಹಾಗೂ ಕೇರಳ ರಾಜ್ಯಗಳಿಂದ ತರಿಸಿ ಏಲಕ್ಕಿಮಾಲೆ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಕೇರಳ, ಮಡಿಕೇರಿಗಳಲ್ಲಿ ಉಂಟಾದ ಪ್ರವಾಹದ ಪರಿಣಾಮ ಏಲಕ್ಕಿ ಬೆಳೆ ಹಾಳಾಗಿರುವುದರಿಂದ ವಿಶಿಷ್ಟ ಗಾತ್ರದ ಏಲಕ್ಕಿ ಸಿಗದೆ ಮಾಲೆ ತಯಾರಕರು ಪರಿತಪಿಸುವಂತಾಗಿದೆ.

ಮಾಲೆ ತಯಾರಿಗೆ ಯೋಗ್ಯ ಏಲಕ್ಕಿ ಹೆರಳವಾಗಿ ಸಿಗುತ್ತಿದ್ದ ಕೇರಳ, ಮಡಿಕೇರಿ ಪ್ರದೇಶಗಳಲ್ಲಿ ಏಲಕ್ಕಿ ಬೆಳೆ ಹಾಳಾಗಿದ್ದರಿಂದ ಅದರ ಬೆಲೆ ದುಪ್ಪಟ್ಟಾಗಿದೆ. ಹೆಚ್ಚು ಹಣ ಕೊಟ್ಟರೂ ಮಾಲೆ ತಯಾರಿಕೆಗೆ ಯೋಗ್ಯವಿರುವಂಥ ಏಲಕ್ಕಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಇನ್ನು ಆಮದು ಪ್ರಮಾಣವೂ ಕಡಿಮೆಯಾಗಿದ್ದು, ಅದರ ಬೆಲೆ ಗಗನಮುಖೀಯಾಗಿ ಏರಿಕೆಯಾಗುತ್ತಲೇ ಇದೆ.

ಇನ್ನು ಏಲಕ್ಕಿ ಸಿಗದೆ ಇರುವುದರಿಂದ ಹಾಗೂ ದುಬಾರಿ ದರ ಕೊಟ್ಟು ಮಾಲೆ ತಯಾರಿಸಿದರೆ ಮಾಲೆ ದರವೂ ಅಧಿಕವಾಗಿದೆ. ಹೀಗಾಗಿ ವ್ಯಾಪಾರವೂ ಕುಸಿದು ಮಾಲೆ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಲಕ್ಕಿ ಮಾಲೆ ತಯಾರಿಕೆಗಾಗಿ ಇಲ್ಲಿಯ ಮಾಲೆ ತಯಾರಕರು 30ರಿಂದ 50ಕೆಜಿ ವರೆಗೂ ಏಲಕ್ಕಿ ಖರೀದಿಸುತ್ತಿದ್ದರು. ಈಗ ಏಲಕ್ಕಿ ಮಾಲೆ ತಯಾರಿಕೆಗೆ ಯೋಗ್ಯವಾದ ಏಲಕ್ಕಿ ಐದಾರು ಕೆಜಿ ಕೂಡ ಸಿಗುತ್ತಿಲ್ಲ. ಹೀಗಾಗಿ ಏಲಕ್ಕಿ ಮಾಲೆ ಉತ್ಪಾದನೆ ಗಣನೀಯವಾಗಿ ಕುಸಿತ ಕಂಡಿದೆ. ಕೆಜಿಗೆ 1800ರೂ.ಗೆ ಸಿಗುತ್ತಿದ್ದ ಏಲಕ್ಕಿ ಈಗ ಐದರಿಂದ ಐದೂವರೆ ಸಾವಿರ ರೂ.ಗಳಿಗೆ ಏರಿದೆ.

ಬೆಲೆ ಗಗನಮುಖೀ: ಮಾಲೆ ತಯಾರಿಕೆಗೆ ಬೇಕಾಗುವ ಏಲಕ್ಕಿ ಬೆಲೆ ಪ್ರತಿ ಕೆಜಿಗೆ 1800 ರೂ. ಇತ್ತು. ಈಗ ಕೆಜಿಗೆ 5000-5500 ರೂ. ಆಗಿದೆ. ಕಳೆದೆರಡು ವರ್ಷಗಳಿಂದ ಕೇರಳ, ಮಡಿಕೇರಿಯಲ್ಲಿ ಪ್ರವಾಹ ಮತ್ತು ಭೂ ಕುಸಿತದಿಂದ ಬೆಳೆ ಹಾಳಾಗಿ ಬೆಲೆ ಹೆಚ್ಚಾಗಿದೆ. ಭವಿಷ್ಯದಲ್ಲಿ ಏಲಕ್ಕಿ ಬೆಲೆ ಇನ್ನೂ ಹೆಚ್ಚಾಗಲಿದ್ದು ಮಾಲೆಗಳ ದರವೂ ಅಧಿ ಕವಾಗಿ ವ್ಯಾಪಾರದ ಮೇಲೆ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ. ಏಲಕ್ಕಿ ಕೊರತೆ, ದರ ಹೆಚ್ಚಳ, ವ್ಯಾಪಾರ ಕುಸಿತದ ಪರಿಣಾಮ ಏಲಕ್ಕಿ ಮಾಲೆ ತಯಾರಿಸುವ ಕಾರ್ಮಿಕರಿಗೂ ಕೈತುಂಬ ಕೆಲಸ ಇಲ್ಲದಂತಾಗಿದ್ದು, ಬೇರೆ ಕೆಲಸ ಅರಸಿ ಹೋಗುವಂತಾಗಿದೆ. ಒಟ್ಟಾರೆ ಏಲಕ್ಕಿ ಮಾಲೆ ತಯಾರಿಕೆ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ.

ಏಲಕ್ಕಿ ಮಾಲೆ ಖ್ಯಾತಿ: ಏಲಕ್ಕಿ ಮಾಲೆ ತನ್ನದೇ ಆದ ವಿಶೇಷ ಅಲಂಕಾರ, ಸುವಾಸನೆಯಿಂದ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಹಾವೇರಿಯ “ಏಲಕ್ಕಿ ಮಾಲೆ’ ದೇಶದ ಪ್ರಧಾನಿಯಿಂದ ಹಿಡಿದು ಎಲ್ಲ ಗಣ್ಯರ ಕೊರಳನ್ನು ಅಲಂಕರಿಸಿ, ಅಭಿನಂದಿಸಿದ ಕೀರ್ತಿ ಹೊಂದಿದೆ. ಅಷ್ಟೇ ಅಲ್ಲ ಅಮೇರಿಕ, ಲಂಡನ್‌, ಜಪಾನ್‌, ದಕ್ಷಿಣ ಆಫ್ರಿಕಾ, ಉತ್ತರ ಕೋರಿಯಾ, ನೇಪಾಳ, ಸೌದಿ ಅರಬಿಯಾ ಸೇರಿದಂತೆ ವಿವಿಧ ದೇಶಗಳಲ್ಲಿಯೂ ಹಾವೇರಿಯ ಏಲಕ್ಕಿ ಮಾಲೆಗೆ ಖ್ಯಾತಿ ಪಡೆದಿದ್ದು, ಈಗಲೂ ಏಲಕ್ಕಿ ಮಾಲೆಗೆ ಭಾರಿ ಬೇಡಿಕೆ ಇದೆ. ಆದರೆ, ಪ್ರಸ್ತುತ ಏಲಕ್ಕಿಮಾಲೆ ಏಲಕ್ಕಿ ಕೊರತೆ ಎದುರಿಸುತ್ತಿದೆ.

ಏಲಕ್ಕಿ ಮಾಲೆ ತಯಾರಿಕೆ ಒಂದು ವಿಶಿಷ್ಟ ಕಲೆ. ಅತ್ಯುತ್ತಮ ದರ್ಜೆಯ ಮತ್ತು ದುಂಡಗಿನ ಏಲಕ್ಕಿಗಳನ್ನು ಕೇರಳ, ಮಡಿಕೇರಿ, ಸಕಲೇಶಪುರದಿಂದ ತಂದು ಒಂದು ವಾರದವರೆಗೆ ಬ್ಲೀಚಿಂಗ್‌ ಪೌಡರ್‌ ಬೆರೆಸಿದ ಲವಣಯುಕ್ತ ನೀರಿನಲ್ಲಿ ತೊಳೆಯಲಾಗುತ್ತದೆ. ನಂತರ ಒಣಗಿಸಿದಾಗ ಅದು ಬಿಳಿಯಾಗಿ ಹೊಳೆಯುತ್ತದೆ. ಏಲಕ್ಕಿ ಜತೆಗೆ ಅಲಂಕಾರಿಕ ವಸ್ತುಗಳಾದ ರೇಷ್ಮೆ ಎಳೆಗಳು, ಮಣಿಗಳು ಮತ್ತು ಉಣ್ಣೆ ದಾರದಿಂದ ಹೂಮಾಲೆಗಳನ್ನು ಅಲಂಕರಿಸುವ ಮೂಲಕ ಆಕರ್ಷಣೀಯಗೊಳಿಸಲಾಗುತ್ತದೆ. ಈ ವಿಶಿಷ್ಟ ಏಲಕ್ಕಿಮಾಲೆ ಉದ್ಯಮ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರವಾಹದಿಂದ ಮಾಲೆ ತಯಾರಿಕೆ ಬೇಕಾದ ಏಲಕ್ಕಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಕೊರತೆಯಾಗಿರುವುದರಿಂದ ಏಲಕ್ಕಿ ದರವೂ ಅತಿ ಹೆಚ್ಚಾಗಿದೆ. ಅದರ ಪರಿಣಾಮ ಏಲಕ್ಕಿ ಮಾಲೆ ದರವೂ ಹೆಚ್ಚಾಗಿದ್ದು ಜನರು ಹೆಚ್ಚು ಹಣ ಕೊಟ್ಟು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮಾಲೆ ತಯಾರಿಕೆ ಉದ್ಯಮ ನಷ್ಟ ಅನುಭವಿಸುವಂತಾಗಿದೆ. –ಹಜಿಉಸ್ಮಾನ್ಸಾಬ ಪಟವೆಗಾರ, ಏಲಕ್ಕಿ ಮಾಲೆ ತಯಾರಕರು ಹಾವೇರಿ.

 

-ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.