ಚಿಣ್ಣರ ಬಾಳಲ್ಲಿ ಮೂಡಿದ ‘ಕಾಮನಬಿಲ್ಲು’

'ಕಾಮನಬಿಲ್ಲು' •ಮೊಬೈಲ್-ಕುರುಕಲು ತಿಂಡಿಯಿಂದ ಮಕ್ಕಳು ದೂರ •ನಾಟಕ- ಚಿತ್ರಕಲೆ ಅಭಿವ್ಯಕ್ತಿಗೆ ಮೊದಲ ಆದ್ಯತೆ

Team Udayavani, May 3, 2019, 2:49 PM IST

haveri-3-tdy..

ಹಾನಗಲ್ಲ: ಬೇಸಿಗೆಯ ಜತೆಗೆ ಮಕ್ಕಳಿಗೆ ರಜೆ. ಇದು ಅಜ್ಜ ಅಜ್ಜಿ ಬಂಧು ಬಳಗದವರ ಊರು ಕೇರಿಗೆ ಹೋಗಿ ಮಕ್ಕಳು ಸಂಭ್ರಮಿಸುವ ಕಾಲ. ಆದರೆ ನಾಗರಿಕ ಸಂಸ್ಕೃತಿಯ ಹೆಸರಲ್ಲಿ ರಜೆಗಳು ಇನ್ನೊಂದು ವರ್ಗಕೋಣೆಯಾಗಿ ಮಕ್ಕಳನ್ನು ಮುದ್ದೆ ಮಾಡುವ ಶಿಬಿರಗಳಿಗೆ ಭಿನ್ನವಾಗಿ ಆಟದೊಂದಿಗಿನ ಪಾಠ, ನಾಟಕ, ನೃತ್ಯದೊಂದಿಗೆ ನಲಿಯುವ ಶಿಬಿರವಾಗಿ ಹಾನಗಲ್ಲಿನಲ್ಲಿ ಕಾಮನ ಬಿಲ್ಲು ಮೂಡಿದೆ.

ಹೊಸದಾಗಿ ರೂಪ ಪಡೆದ ಹಾನಗಲ್ಲಿನ ರಂಗ ಸಂಗಮ ಕಲಾ ಸಂಘದ ಹೊಸ ಪ್ರಯತ್ನ 50 ಮಕ್ಕಳನ್ನು ಮುದವಾಗಿ ಮೊಬೈಲ್, ಆರೋಗ್ಯ ಹಾಳು ಮಾಡುವ ಕುರುಕಲು ತಿಂಡಿಗಳಿಂದ ದೂರವಿಟ್ಟು ಹೊಸ ಚೈತನ್ಯ ನೀಡುವ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದೆ.

ಇಲ್ಲಿನ ಜನತಾ ಬಾಲಕಿಯರ ಪ್ರೌಢಶಾಲೆಯ ಬಯಲಿಗೆ ಜನಪದ ರೂಪ ನೀಡಿ ಮಕ್ಕಳು ಶಿಬಿರಕ್ಕೆ ಬರುವಾಗಲೇ ಹೊಸದೊಂದು ಜಗತ್ತಿಗೆ ಪ್ರವೇಶಿಸಿದಂತಾಗುತ್ತದೆ. ಶಾಲೆ ಪಠ್ಯ, ಪಾಠ, ಪುಸ್ತಕದ ಹೊರೆಯ ನೆನಪೇ ಇಲ್ಲದೆ ಹಾಯಾಗಿ ಆಡಿ ನಲಿದು ಖುಷಿ ನೀಡುವ ಈ ಶಿಬಿರ ಮಕ್ಕಳ ಪಾಲಿನ ಸ್ವರ್ಗ ಎನ್ನಬೇಕು. ಬೆಳಗಿನ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ 8 ರಿಂದ 16 ವರ್ಷ ವಯೋಮಾನದ ಮಕ್ಕಳಿಗಾಗಿ ನಡೆಯುತ್ತಿರುವ ಈ ಶಿಬಿರ ಮೇ 1ರಿಂದ ಆರಂಭಗೊಂಡಿದ್ದು, ಮೇ 15 ಕ್ಕೆ ಸಮಾರೋಪಗೊಳ್ಳುತ್ತದೆ.

ಇಲ್ಲಿ ಮಕ್ಕಳನ್ನು ತೊಡಗಿಸುವ ಜನಪದ ಆಟಗಳು, ನೃತ್ಯ, ಚಿತ್ರಕಲೆ, ಪೇಪರ್‌ ಕಟಿಂಗ್‌, ಮಣ್ಣಿನ ಮಾದರಿ ಸಿದ್ಧಪಡಿಸುವುದು. ಆರೋಗ್ಯ, ಪರಿಸರ ಜ್ಞಾನಕ್ಕೂ ಒತ್ತು ನೀಡಿರುವುದು ಈ ಶಿಬಿರದ ವಿಶೇಷವೆನ್ನಬೇಕು. ಎಲ್ಲದಕ್ಕೂ ಮೊದಲು ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕ್ರಮ, ಹಾಡು, ಏಕ ಪಾತ್ರಾಭಿನಯ, ಮಿಮಿಕ್ರಿ, ಜ್ಞಾನ ಭಂಡಾರ ಹೀಗೆ ಎಲ್ಲವನ್ನೂ ಅಳೆದು ತೂಗಿ ಅವರ ಪ್ರತಿಭೆಗನುಗುಣವಾಗಿ ಹೊಸ ಚೈತನ್ಯ ನೀಡುವ ಕೆಲಸ ಇಲ್ಲ ನಡೆಯುತ್ತಿದೆ. ಬಹುಮುಖ್ಯ ಸಂಗತಿ ಎಂದರೆ ನಾಟಕ. ಮಕ್ಕಳಿಗೆ ನಾಟಕದ ಅಭಿರುಚಿ ಮೂಡಿಸಿ ಈ ಮಕ್ಕಳಿಂದಲೇ ಸಮಾರೋಪದ ದಿನ ಒಂದು ನಾಟಕ ಪ್ರದರ್ಶನದ ಸಿದ್ಧತೆಯೂ ನಡೆದಿದೆ.

ರಜಾ ಶಿಬಿರಗಳೆಂದರೆ ಮತ್ತದೆ ಪಠ್ಯದಲ್ಲಿ ಹೂತು, ಪುಸ್ತಕಗಳನ್ನು ಶಾಲಾ ಮುನ್ನಾ ದಿನಗಳಲ್ಲಿಯೇ ಗೋಕು ಹೊಡೆಯುವ, ಅದನ್ನೆ ತಲೆತುಂಬಿ ತುಂಬುವ ಕಾರ್ಯದಿಂದ ಹೊರಬಂದು ಮಕ್ಕಳಿಗೆ ಮುಕ್ತ ಅವಕಾಶ ನೀಡಿ, ಅವರ ಆತ್ಮಬಲ, ಕೆಲಸದ ಶ್ರದ್ಧೆ, ಉತ್ತಮ ಗುರಿ, ಸಾಧಿಸುವ ಮಾರ್ಗ, ಮಕ್ಕಳಲ್ಲಿರುವ ಅಂತಃಶಕ್ತಿಯನ್ನು ಜಾಗೃತಗೊಳಿಸುವ ಈ ಶಿಬಿರ ನಿಜಕ್ಕೂ ಇಂದು, ನಾಳಿನ ಅಗತ್ಯ ಎಂಬುದನ್ನು ಮರೆಯುವಂತಿಲ್ಲ.

ಹಾನಗಲ್ಲಿನ ರಂಗ ಸಂಗಮ ಕಲಾ ಸಂಘದ ಈ ಹೊಸ ಪ್ರಯತ್ನಕ್ಕೆ ಅಧ್ಯಕ್ಷ ಜಗದೀಶ ಕಟ್ಟಿಮನಿ, ಕಾರ್ಯದರ್ಶಿ ಹರ್ಷವರ್ಧನ ಕೆ.ಬಿ, ದೇವಿಪ್ರಸಾದ ಯರತೋಟ, ವಿಷ್ಣು ಮಾಳಗಿಮನಿ ಕಂಕಣಬದ್ಧರಾಗಿ ನಿಂತು ಶಿಬಿರದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಶೇಷಗಿರಿಯ ಪ್ರಸಿದ್ಧ ರಂಗ ತಂಡ ಶೇಷಗಿರಿ ಕಲಾ ತಂಡ ಎಲ್ಲ ಬೆಂಬಲ ಮಾರ್ಗದರ್ಶನ ನೀಡಿದೆ. ಆರೋಗ್ಯವಂತ ಮನಸ್ಸು, ಮನಸ್ಸಿನ ಪರಿಸರ ನಿರ್ಮಾಣಗೊಳಿಸುವ ಇಂಥ ಶಿಬಿರಕ್ಕೆ ನಮ್ಮದೂ ಒಂದು ಬೆಂಬಲ ಎಂಬಂತೆ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ.

ಕರ್ನಾಟಕ ಸರಕಾರದ ಇಂಧನ ಇಲಾಖೆ ಉಪಕಾರ್ಯದರ್ಶಿ ವಿಶ್ವನಾಥ ಹಿರೇಮಠ ಶಿಬಿರಕ್ಕೆ ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿ, ಇಂಥ ಶಿಬಿರಗಳ ಅಗತ್ಯ ಈಗ ಹೆಚ್ಚಾಗಿದೆ. ಮಕ್ಕಳನ್ನು ಮೊಬೈಲ್ನಂತಹ ಚಟುವಟಿಕೆಗಳಿಂದ ದೂರವಿಟ್ಟು ಒಳ್ಳೆಯ ಹವ್ಯಾಸ ಬೆಳೆಸಲು ಮುಂದಾಗಬೇಕು ಎಂದಿದ್ದಾರೆ.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಬಸವರಾಜ ಬೊಮ್ಮಾಯಿ

LokSabha Election; ಕಾಂಗ್ರೆಸ್ ನ ಬಹುಮತ ಹೇಳಿಕೆಯೇ ಹಾಸ್ಯಾಸ್ಪದ: ಬಸವರಾಜ ಬೊಮ್ಮಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.