ಮರಳು ಅಕ್ರಮಕ್ಕೆ ಕೋವಿಡ್ 19 ಬ್ರೇಕ್
ತುಂಗಭದ್ರೆ-ವರದೆಯ ಒಡಲು ಶಾಂತ
Team Udayavani, Apr 21, 2020, 4:40 PM IST
ಸಾಂದರ್ಭಿಕ ಚಿತ್ರ
ಹಾವೇರಿ: ಯಾರಿದಂಲೂ ನಿಲ್ಲಿಸಲು ಸಾಧ್ಯವಾಗದೇ ಇದ್ದ ಅಕ್ರಮ ಮರಳು ಸಾಗಾಟಕ್ಕೆ ಈಗ ಬ್ರೆಕ್ ಬಿದ್ದಿದ್ದು, ಎಲ್ಲವೂ ಸ್ತಬ್ಧಗೊಂಡಿದೆ.ಕೋವಿಡ್ 19 ಮಹಾಮಾರಿ ಈಗ ಎಲ್ಲ ಅಕ್ರಮಗಳಿಗೆ ಬ್ರೆಕ್ ಹಾಕಿದ್ದು, ಇದರಿಂದ ಪ್ರಾಕೃತಿಕ ಸಂಪತ್ತು ರಕ್ಷಣೆಯಾಗುತ್ತಿದೆ. ನದಿ-ಹಳ್ಳ-ಕೊಳ್ಳಗಳನ್ನು ಬಗೆಯುವ ಕೆಲಸ ಅಕ್ಷರಶಃ ನಿಂತಿದೆ. ನಿತ್ಯ ನೂರಾರು ಲಾರಿಗಳಷ್ಟು ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದು ಈಗ ಸಂಪೂರ್ಣ ಬಂದಾಗಿದೆ.
ಅಕ್ರಮ ಮರಳು ಸಾಗಾಟ ತಹಬದಿಗೆ ತರುವ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಹಲವು ಆದೇಶಗಳನ್ನು ಮಾಡಿದ್ದರು. ಆದರೂ ಅಕ್ರಮ ಮರಳು ಸಾಗಾಟ ಮಾತ್ರ ಒಂದಿನಿತೂ ನಿಂತಿರಲಿಲ್ಲ. ಅದೆಷ್ಟೋ ಸಲ ಪರಿಸರ ಪ್ರೇಮಿಗಳು ಇದರ ವಿರುದ್ಧ ಪ್ರತಿಭಟನೆ-ಮನವಿ ಸಲ್ಲಿಸುತ್ತ ಬಂದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ಯಾರೇ ಎಂದಿರಲಿಲ್ಲ. ಅಕ್ರಮ ಮರಳು ಮಾಫಿಯಾದಿಂದ ಜಿಲ್ಲೆ ತತ್ತರಿಸಿ ಹೋಗಿತ್ತು. ಇದಕ್ಕೆ ಹೇಳುವರು, ಕೇಳುವರು ಯಾರೂ ಇರಲಿಲ್ಲ. ಜಿಲ್ಲೆಯ ಪ್ರಮುಖ ನದಿಗಳಾದ ತುಂಗಭದ್ರಾ-ವರದಾ ನದಿಗಳ ಒಡಲು ಈ ಮರಳು ಮಾಫಿಯಾ ಹಿಡಿತದಿಂದ ಬರಿದಾಗುತ್ತ ಬಂದಿತ್ತು. ನಿತ್ಯ ನೂರಾರು ಲಾರಿಗಳು ಹಗಲಿರುಳೆನ್ನದೇ ಸಂಚರಿಸುತ್ತಿದ್ದವು.
ಸ್ಥಳೀಯವಾಗಿ ಸುಲಭವಾಗಿ ಮರಳು ದೊರೆಯದಿದ್ದರೂ ದೂರದ ಬೆಂಗಳೂರು – ಬೆಳಗಾವಿಯವರೆಗೂ ಇಲ್ಲಿಯ ಮರಳು ನಿರಾಯಾಸವಾಗಿ ತಲುಪುತ್ತಿತ್ತು. ಈಗ ಇದೆಲ್ಲದಕ್ಕೂ ಅಲ್ಪವಿರಾಮ ಸಿಕ್ಕಿದೆ. ಕೊರೊನಾ ಮಹಾಮಾರಿಯಿಂದ ಅಕ್ರಮ ಮರಳು ಮಾಫಿಯಾ ತತ್ತರಿಸಿದೆ. ಭೂತಾಯಿಗೆ ಈಗ ಕೊಂಚ ನೆಮ್ಮದಿ ಸಿಕ್ಕಿದೆ. ರಸ್ತೆಗಳಲ್ಲಿ ಈಗ ವಾಹನಗಳ ಸಂಚಾರವೇ ಇಲ್ಲದಂತಾಗಿದೆ. ಗೌಜು-ಗದ್ದಲ ಎಲ್ಲವೂ ಈಗ ನಿಂತಿದೆ. ಎಲ್ಲವೂ ಸ್ತಬ್ಧಗೊಂಡಿದೆ.
ಜಿಲ್ಲೆಯ ತುಂಗಾ ಹಾಗೂ ವರದಾ ನದಿಗಳಲ್ಲಿ ನಡೆಯುತ್ತಿದ್ದ ಮರಳುಗಾರಿಕೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬಂಥ ಸ್ಥಿತಿ ಇತ್ತು. ಆದರೆ ಈ ಕೋವಿಡ್ 19 ಮಹಾಮಾರಿ ಮರಳು ಮಾಫಿಯಾದ ಮಗ್ಗಲು ಮುರಿದಿದೆ. ತನ್ಮೂಲಕ ಕೋವಿಡ್ 19 ದುರಾಸೆಯ ನರನಿಗೆ ಪಾಠ ಕಲಿಸಿದೆ. ಪ್ರಕೃತಿಯ ರಕ್ಷಣೆಯೂ ಆಗುತ್ತಿದೆ. -ನಾಗಪ್ಪ, ನಾಗರಿಕ
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls polls: ರಾಜ್ಯದಲ್ಲಿ ನಾವು 18 -20 ಸೀಟ್ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ
ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ
ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ
LokSabha Election; ಕಾಂಗ್ರೆಸ್ ನ ಬಹುಮತ ಹೇಳಿಕೆಯೇ ಹಾಸ್ಯಾಸ್ಪದ: ಬಸವರಾಜ ಬೊಮ್ಮಾಯಿ
Haveri; ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ